Select Your Language

Notifications

webdunia
webdunia
webdunia
webdunia

ಗುಡ್ಡ ಕುಸಿತ ಹಿನ್ನಲೆ; ಕಳಸ – ಮಂಗಳೂರು ಸಂಚಾರ ಬಂದ್

ಗುಡ್ಡ ಕುಸಿತ ಹಿನ್ನಲೆ; ಕಳಸ – ಮಂಗಳೂರು ಸಂಚಾರ ಬಂದ್
ಚಿಕ್ಕಮಗಳೂರು , ಶುಕ್ರವಾರ, 9 ಆಗಸ್ಟ್ 2019 (10:42 IST)
ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಬಾರೀ ಮಳೆಗೆ ಚಿಕ್ಕಮಗಳೂರಿನ ಕಳಸ ಬಳಿಯ ಕಾರ್ಗದ್ದೆ ಗ್ರಾಮದಲ್ಲಿ ರಸ್ತೆಗೆ ಗುಡ್ಡ ಕುಸಿತವಾಗಿದ್ದು, ಕಳಸ – ಮಂಗಳೂರು ಸಂಚಾರ ಬಂದ್ ಆಗಿದೆ.




ಈಗಾಗಲೇ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕುಸಿತ ಕಂಡು ಬಂದ ಹಿನ್ನೆಲೆಯಲ್ಲಿ ಸಂಚಾರವನ್ನು ಸ್ಥಗಿತ ಮಾಡಲಾಗಿತ್ತು. ಇದರಿಂದ ವಾಹನ ಸವಾರರು ಸಮಸ್ಯೆ ಎದುರಿಸುತ್ತಿದ್ದು, ಇದೀಗ ಅನ್ಯ ಮಾರ್ಗವಾಗಿ ಬಳಕೆಯಾಗುತ್ತಿದ್ದ ಕಳಸ ಮಾರ್ಗವೂ ಬಂದ್ ಆಗಿದೆ.


ಅಲ್ಲದೇ ಕುದುರೆಮುಖ, ಕಳಸ, ಸಂಸೆ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಹೆಬ್ಬಾಳೆ ಸೇತುವೆ ಬಂದ್ ಆಗಿದೆ. ಇದರಿಂದ ಕಳಸ - ಹೊರನಾಡು ಸಂಪರ್ಕ ಸಂಪೂರ್ಣ ಬಂದ್ ಆಗಿದೆ. ಹಾಗೇ ಭದ್ರಾ ನದಿ ಅಪಾಯ ಮಟ್ಟ ಮೀತಿ ಹರಿಯುತ್ತಿರುವುದರಿಂದ ಹೊರನಾಡಿನ ಎರಡೂ ಸಂಚಾರಿ ಮಾರ್ಗಗಳು ಬಂದ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

911 ತುರ್ತು ನಂಬರ್ ಗೆ ಕರೆ ಮಾಡಿದ ಬಾಲಕ ಪೊಲೀಸರಿಗೆ ಹೇಳಿದ್ದೇನು ಗೊತ್ತಾ?