ಮಂಗಳೂರು, ಬೆಂಗಳೂರು ನಡುವೆ ರೈಲು ಪ್ರಯಾಣ ಆರಂಭಕ್ಕೆ ದಿನ ನಿಗದಿ: ವಿವರ ಇಲ್ಲಿದೆ

Krishnaveni K
ಸೋಮವಾರ, 5 ಆಗಸ್ಟ್ 2024 (10:32 IST)
ಬೆಂಗಳೂರು: ಮಂಗಳೂರು ಮತ್ತು ಬೆಂಗಳೂರು ನಡುವೆ ರೈಲು ಪ್ರಯಾಣ ಯಾವಾಗ ಆರಂಭವಾಗುತ್ತದೆ ಎಂದು ಕಾಯುತ್ತಿರುವ ಪ್ರಯಾಣಿಕರಿಗೆ ಈಗ ಸಿಹಿ ಸುದ್ದಿ ಸಿಕ್ಕಿದೆ. ಕರಾವಳಿಗೆ ಸಂಪರ್ಕ ಕಲ್ಪಿಸುವ ರೈಲು ಪ್ರಯಾಣ ಪುನರಾರಂಭವಾಗುತ್ತಿದೆ.

ಎಡಕುಮೇರಿ ಬಳಿ ಮಣ್ಣು ಕುಸಿದಿದ್ದರಿಂದ ಬೆಂಗಳೂರು ಮತ್ತು ಮಂಗಳೂರು ನಡುವೆ ಸಂಚರಸುತ್ತಿದ್ದ ರೈಲು ರದ್ದಾಗಿತ್ತು. ಜುಲೈ 26 ರಿಂದ ಶಿರಾಡಿ ಘಾಟಿ ರಸ್ತೆಯಾಗಿ ರೈಲು ಸಂಚರಿಸುತ್ತಿರಲಿಲ್ಲ. ಇದರಿಂದ ಅನೇಕರಿಗೆ ತೊಂದರೆಯಾಗಿತ್ತು. ಇದೀಗ ರೈಲು ಮಾರ್ಗ ದುರಸ್ಥಿಯಾಗಿದ್ದು, ಪ್ರಯಾಣಕ್ಕೆ ಸಿದ್ಧತೆ ನಡೆದಿದೆ.

ನಿನ್ನೆಗೆ ದುರಸ್ಥಿ ಕಾರ್ಯ ಪೂರ್ಣವಾಗಿದೆ. ಇದೀಗ ಎರಡು ದಿನಗಳ ಕಾಲ ಗೂಡ್ಸ್ ರೈಲುಗಳನ್ನು ಓಡಿಸಲಾಗುತ್ತದೆ. ಇದಾದ ಬಳಿ ಪ್ಯಾಸೆಂಜರ್ ರೈಲು ನಾಳೆಯಿಂದ ಆರಂಭವಾಗಲಿದೆ. ಅಂದರೆ ಮಂಗಳವಾರದಿಂದ ಎಂದಿನಂತೆ ಪ್ಯಾಸೆಂಜರ್ ರೈಲು ಮಂಗಳೂರು ಮತ್ತು ಬೆಂಗಳೂರು ನಡುವೆ ಓಡಾಟ ಆರಂಭಿಸಲಿದೆ.

ಮಣ್ಣು ಕುಸಿದ ಜಾಗಕ್ಕೆ ಮರಳು ಚೀಲ, ಕಾಂಕ್ರೀಟ್ ಕಾಮಗಾರಿ ಹಾಕಿ ದುರಸ್ಥಿ ಮಾಡಲಾಗಿದೆ. ಸತತವಾಗಿ ಮಳೆ ಸುರಿದಿದ್ದರಿಂದ ಶಿರಾಡಿ ಘಾಟಿ ರಸ್ತೆಯಲ್ಲೂ ಭೂಕುಸಿತವಾಗಿ ವಾಹನ ಓಡಾಟಕ್ಕೆ ತೊಂದರೆಯಾಗಿತ್ತು. ಇದೀಗ ಆ ಸಮಸ್ಯೆಯೂ ನಿವಾರಣೆಯಾಗಿದ್ದು ಎಂದಿನಂತೆ ವಾಹನ ಸಂಚಾರ ಆರಂಭವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೋಝಿಕ್ಕೋಡ್ ರೈಲ್ವೆ ನಿಲ್ದಾಣದ ಗಡಿಯಾರ ಗೋಪುರ ಕುಸಿತ, ತಪ್ಪಿದ ಭಾರೀ ದುರಂತ

ಜಿಬಿಎ ಚುನಾವಣೆ ಇನ್ನೂ ಮುಂದೂಡಬೇಡಿ: ಎಸ್.ಆರ್.ವಿಶ್ವನಾಥ್

ರೈಲು ಬರುವ ವೇಳೆಗೆ ಟ್ರ್ಯಾಕ್ ನಲ್ಲೇ ನಿಂತಿದ್ದ ವ್ಯಕ್ತಿ: ಹೀರೋನಂತೆ ಬಂದ ಗಾರ್ಡ್ ಮಾಡಿದ್ದೇನು ನೋಡಿ Video

ಸರ್ಕಾರವನ್ನು ಜನರು ಹುಡುಕಬಾರದು, ಜನರ ಬಳಿಯೇ ಸರ್ಕಾರ ಹೋಗಬೇಕು

ಫುಟ್ ಪಾತ್ ತೆರವು ಕಾರ್ಯಚರಣೆ, ಬೀದಿಬದಿ ವ್ಯಾಪಾರಿಗಳಿಗೆ ಮತ್ತೇ ಶಾಕ್ ಕೊಟ್ಟ ಕೃಷ್ಣ ಬೈರೇಗೌಡ

ಮುಂದಿನ ಸುದ್ದಿ
Show comments