Webdunia - Bharat's app for daily news and videos

Install App

ತಮ್ಮ ಹಾಗೇ ತೃತೀಯ ಲಿಂಗಿಯಾಗಲು ಒಪ್ಪದಕ್ಕೆ ಮರ್ಮಾಂಗನ್ನೇ ಕತ್ತರಿಸಿದ ಮಂಗಳಮುಖಿಯರು

Sampriya
ಬುಧವಾರ, 21 ಆಗಸ್ಟ್ 2024 (16:03 IST)
Photo Courtesy X
ಬೆಂಗಳೂರು: ತೃತೀಯ ಲಿಂಗಿಗಳು ಹೊಟ್ಟೆ ಪಾಡಿಗಾಗಿ ರೈಲು ನಿಲ್ದಾಣ, ಬಸ್‌ ನಿಲ್ದಾಣ ಹಾಗೂ ಮಾರುಕಟ್ಟೆಗಳಲ್ಲಿ ಭಿಕ್ಷಾಟನೆ ಮಾಡುತ್ತಾರೆ. ಕೆಲವೊಂದು ಬಾರಿ ಕೇಳಿದ ಹಣ ನೀಡದೆ ಇದ್ದಾಗ ಇವರು ಪುರುಷರ ಜತೆ ಜಗಳಕ್ಕೆ ಬೀಳುವುದು ಉಂಟು. ಆದರೆ ಇಲ್ಲೊಂದು ತೃತೀಯ ಲಿಂಗಿಗಳ ಗುಂಪು,  ತಮ್ಮ ಹಾಗೇ ತೃತೀಯ ಲಿಂಗಿಯಾಗಲು ಒ‍ಪ್ಪದಿರುವುದಕ್ಕೆ ಕೋಪಗೊಂಡು ಯುವಕನ ಮರ್ಮಾಂಗವನ್ನೇ ಕತ್ತರಿಸಿ ಮೃಘೀಯವಾಗಿ ವರ್ತಿಸಿದ ಘಟನೆ ಬೆಳಕಿಗೆ ಬಂದಿದೆ.

ತಮ್ಮ ಹಾಗೇ ತೃತೀಯ ಲಿಂಗಿಯಾಗಲು ಒಪ್ಪದಕ್ಕೆ ಯುವಕನ ಪ್ರಜ್ಞೆ ತಪ್ಪಿಸಿ, ಆತನ ಮರ್ಮಾಂಗವನ್ನೇ ಕತ್ತರಿಸಿದ್ದಾರೆ. ಅದಲ್ಲದೆ ಅವನನ್ನು ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಾರೆ. ಇನ್ನೂ ಅಲ್ಲಿಂದ್ದ ಹೋಗಬೇಕೆಂದರೆ 5 ಲಕ್ಷ ರೂಪಾಯಿ ಹಣದ ಬೇಡಿಕೆಯಿಟ್ಟಿದ್ದಾರೆ. ಇದೆಲ್ಲದ್ದರಿಂದ ಬೇಸತ್ತ ಯುವಕ ಅವರಿಂದ ತಪ್ಪಿಸಿಕೊಂಡು ಬಂದು ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಯುವಕನ ದೂರಿನ ಆಧಾರದ ಮೇಲೆ ಬೆಂಗಳೂರಿನ ಪುಲಕೇಶಿನಗರದ ಪೊಲೀಸ್ ಠಾಣೆ ಪೊಲೀಸರು ತೃತೀಯ ಲಿಂಗಿಗಳಾದ ಮುಗಿಲ, ಚಿತ್ರಾ, ಅಶ್ವಿನಿ, ಕಾಜಲ್ ಹಾಗೂ ಪ್ರೀತಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಸಂತ್ರಸ್ತ (18 ವರ್ಷ ವಯಸ್ಸು) ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments