Webdunia - Bharat's app for daily news and videos

Install App

ಟ್ರಾಫಿಕ್ ಜಂಕ್ಷನ್‌ನಲ್ಲಿ ಮೂತ್ರ ಮಾಡಿದ ವ್ಯಕ್ತಿ: ದಯವಿಟ್ಟು ಇದೊಂದು ಬಾರಿ ಬಿಟ್ಟುಬಿಡಿ ಅಂಗಲಾಚಿದ BMW ಡ್ರೈವರ್‌

Sampriya
ಭಾನುವಾರ, 9 ಮಾರ್ಚ್ 2025 (18:38 IST)
Photo Courtesy X
ಪುಣೆ: ಪುಣೆಯ ಟ್ರಾಫಿಕ್ ಜಂಕ್ಷನ್‌ನಲ್ಲಿ ತನ್ನ BMW ಕಾರಿನಿಂದ ಇಳಿದು ಮೂತ್ರ ವಿಸರ್ಜನೆ ಮಾಡಿ, ಭಾರೀ ಟ್ರೋಲ್‌ಗೆ ಒಳಗಾದ ಗೌರವ್ ಅಹುಜಾ ಎನ್ನುವ ವ್ಯಕ್ತಿ ಇದೀಗ ಕ್ಷಮೆಯಾಚಿಸಿ, ವಿಡಿಯೋ ಶೇರ್ ಮಾಡಿದ್ದಾನೆ. ವಿಡಿಯೋದಲ್ಲಿ ತಾನು ಮಾಡಿದ ಕೃತ್ಯದಿಂದ ನನಗೆ ನಾಚಿಕೆಯಾಗಿದೆ ಎಂದು ಹೇಳಿದ್ದಾನೆ.

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ, ಆ ವ್ಯಕ್ತಿ ಪುಣೆಯ ಜನರಿಗೆ, ಮಹಾರಾಷ್ಟ್ರದ ಜನರಿಗೆ, ಇಡೀ ಭಾರತಕ್ಕೆ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಕ್ಷಮೆಯಾಚಿಸುತ್ತಿರುವುದನ್ನು ಕಾಣಬಹುದು.

"ನಾನು ಗೌರವ್ ಅಹುಜಾ, ಪುಣೆಯಲ್ಲಿ ವಾಸಿಸುತ್ತಿದ್ದೇನೆ, ನಿನ್ನೆಯ ಕೃತ್ಯಕ್ಕೆ ನನಗೆ ತುಂಬಾ ನಾಚಿಕೆಯಾಗಿದೆ, ಅದನ್ನು ನಾನೇ ಮಾಡಿದ್ದೇನೆ" ಎಂದು ತಪ್ಪೊಪ್ಪಿಕೊಂಡಿದ್ದಾನೆ,.

"ನಾನು ಪುಣೆ, ಮಹಾರಾಷ್ಟ್ರ ಮತ್ತು ಭಾರತದ ಎಲ್ಲಾ ಜನರಿಗೆ ನಿಜವಾಗಿಯೂ ಕ್ಷಮೆಯಾಚಿಸುತ್ತೇನೆ ಮತ್ತು ನಾನು ಪೊಲೀಸ್ ಇಲಾಖೆ ಮತ್ತು [ಏಕ್ನಾಥ್] ಶಿಂಧೆ ಸಾಹಿಬ್‌ಗೆ ನಿಜವಾಗಿಯೂ ಕ್ಷಮೆಯಾಚಿಸುತ್ತೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ ಮತ್ತು ನನಗೆ ಒಂದು ಅವಕಾಶ ನೀಡಿ,  ಈ ತಪ್ಪು ಮುಂದಿನ ಮರುಕಳಿಸುವುದಿಲ್ಲ. ನನಗೆ ನಿಜವಾಗಿಯೂ ವಿಷಾದವಿದೆ ಎಂದು ಕೇಳಿಕೊಂಡಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments