Webdunia - Bharat's app for daily news and videos

Install App

ಮದುವೆ ಆಗ್ತೀನಿ ಅಂತ 35 ಯುವತಿಯರಿಗೆ ವಂಚಿಸಿದ ಸುರಸುಂದರ!

Webdunia
ಬುಧವಾರ, 1 ಸೆಪ್ಟಂಬರ್ 2021 (17:04 IST)
ಮ್ಯಾಟ್ರೋಮೋನಿಯೊದಲ್ಲಿ ಮಧ್ಯ ವಯಸ್ಕ ಮಹಿಳೆಯರನ್ನು ಪರಿಚಯ ಮಾಡಿಕೊಂಡು ನಿನ್ನನ್ನೇ‌ ಮದ್ವೆಯಾಗ್ತೀನಿ ನಂಬಿಸಿ ಒಬ್ಬರಲ್ಲ, ಇಬ್ಬರಲ್ಲ 35 ಮಹಿ
ಳೆಯರಿಗೆ ಸುಮಾರು 70 ಲಕ್ಷ ರೂ.ಗೂ ಅಧಿಕ ವಂಚನೆ ಮಾಡಿದ ಮನ್ಮಥನೊಬ್ಬ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಕಲರ್ ಕಲರ್ ಡ್ರೆಸ್ ನಲ್ಲಿ ಕಲರ್ಪುಲ್ ಆಗಿ ಸೆಲ್ಫಿಗೆ ಫೊಸ್ ಕೊಡ್ತಿರೋ ಈ ಮ್ಯಾಟ್ರಿಮೋನಿಯಲ್ ಮನ್ಮಥನ ಹೆಸ್ರು ಜಗನ್ನಾಥ್ ಸಜ್ಜನ್. ಹೆಸ್ರಿಗೇನೋ ಜಗನ್ನಾಥ ಆದ್ರೆ ಹುಡ್ಗೀರಿಗೆ ಅಜಯ್ ವಿಜಯ್ ಶ್ಯಾಮ್ ರವಿ ಸುಂದರ್ ಹೀಗೆ ಒಂದೊಂದು ಯುವತಿಗೆ ಒಂದೊಂದು ಹೆಸರಲ್ಲಿ ಪರಿಚಯ ಮಾಡ್ಕೊಳ್ತಿದ್ದ. ಮೂಲತಃ ಬಿಜಾಪುರದವನಾದ ಜಗನ್ನಾಥ ಎಂಟು ವರ್ಷಗಳ ಹಿಂದೆ ಕೆಲಸ ಹುಡುಕಿ ಬೆಂಗಳೂರಿಗೆ ಬಂದಿದ್ದ. ಕಳೆದ ಎರಡು ವರ್ಷಗಳ ಹಿಂದೆ ಮ್ಯಾಟ್ರಿಮೋನಿಯಲ್ ಶಾದಿ ಡಾಟ್ ನಲ್ಲಿ ಅಕೌಂಟ್ ಕ್ರಿಯೇಟ್ ಮಾಡ್ತಿದ್ದ. ಹತ್ತಾರು ಹೆಸರಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿದೋನು 90 ಕ್ಕೂ ಹೆಚ್ಚು ಯುವತಿಯರನ್ನ ಕಾಂಟಾಕ್ಟ್ ಮಾಡಿದ್ದ. ಈ ಪೈಕಿ 35 ಕ್ಕೂ ಹೆಚ್ಚು ಯುವತಿಯರಿಗೆ ಮದುವೆಯಾಗೋದಾಗಿ ನಂಬಿಸಿ ಹಣ ಒಡವೆ ಪೀಕಿ ವಂಚಿಸಿದ್ದ.
ಒಂದು ಯುವತಿಯನ್ನ ಪರಿಚಯ ಮಾಡಿಕೊಳ್ಳಲು ಜಗನಾಥ ಒಂದು ಸಿಮ್ ಬಳಸ್ತಿದ್ದ. ಹೀಗೆ ನಕಲಿ ದಾಖಲೆ ವಿಳಾಸ ಕೊಟ್ಟು ಸುಮಾರು 20ಕ್ಕೂ ಹೆಚ್ಚು ನಕಲಿ ಸಿಮ್ ಖರೀದಿಸಿದ್ದ. ಕೊಡಗು, ಚಿಕ್ಕಮಗಳೂರು, ದಾವಣಗೆರೆ, ಬೆಂಗಳೂರು, ಶಿವಮೊಗ್ಗ, ಮಂಗಳೂರಿನ ಸುಮಾರು 35 ಯುವತಿಯರಿಗೆ ಮದುವೆಯಾಗೋದಾಗಿ ನಂಬಿಸಿ ಟ್ರಿಪ್ ಮಾಡಿದ್ದ. 35 ವರ್ಷ ಮೇಲ್ಪಟ್ಟ ಹಾಗೂ ವಿಚ್ಚೇದಿತ ಯುವತಿಯರನ್ನೇ ಟಾರ್ಗೆಟ್ ಮಾಡಿ ಬಲೆಗೆ ಬೀಳಿಸ್ತಿದ್ದ. ಯುವತಿಯರು ಎಷ್ಟೇ ಸಲುಗೆಯಿಂದ ನಡೆದುಕೊಂಡರೂ ಯುವತಿಯರನ್ನ ಜಗನ್ನಾಥ್ ಟಚ್ ಕೂಡ ಮಾಡ್ತಿರಲಿಲ್ವಂತೆ. ನೀನೆ ನನಗೆ ತಾಯಿ ನೀನೇ ನನಗೆ ಮಗಳಿದ್ದಂತೆ. ಆದಷ್ಟು ಬೇಗ ಮದುವೆ ಆಗೋಣ ಅಂತ ನಂಬಿಸ್ತಿದ್ದ. ಒಂದೆರಡು ದಿನಗಳ ಟ್ರಿಪ್ ಮುಗಿಸಿದ ನಂತ್ರ ಆಕ್ಸಿಡೆಂಟ್ ಆಗಿದೆ. ಮದುವೆಗೂ ಮುಂಚೆ ಮನೆ ಕಟ್ಟುತ್ತಿದ್ದೇನೆ. ಅಂತೆಲ್ಲ ಕಥೆ ಕಟ್ಟಿ ಲಕ್ಷಗಟ್ಟಲೇ ಹಣ ಕೀಳ್ತಿದ್ದ. ಹಣ ಕೊಡ್ತಿದ್ದಂತೆ ಹುಡ್ಗಿ ನಂಬರ್ ಬ್ಲಾಕ್ ಮಾಡಿ ಸಿಮ್ ಕಾರ್ಡ್ ಡೆಸ್ಟ್ರಾಯ್ ಮಾಡ್ತಿದ್ದ.
ನಗರದಲ್ಲಿ ಉಳ್ಳಾಲದಲ್ಲಿ ಬಾಡಿಗೆ ಮನೆ ಮಾಡ್ಕೊಂಡಿದ್ದ ಜಗನ್ನಾಥ್ ವಾರಕ್ಕೊಮ್ಮೆ ಮಾತ್ರ ಮನೆಯಲ್ಲಿ ಇರ್ತಿದ್ದ. ವಾರದ ಆರು ದಿನ ಯುವತಿಯರ ಜೊತೆ ಡೇಟಿಂಗ್ ಮಾಡ್ತಿದ್ದ. ಆರೋಪಿ ಕಳೆದ ವರ್ಷ ಬನಶಂಕರಿ ಠಾಣೆ ವ್ಯಾಪ್ತಿಯಲ್ಲಿ ಇದೇ ರೀತಿ ವಂಚಿಸಿ ಅರೆಸ್ಟ್ ಆಗಿದ್ದ. ಜೈಲಿನಿಂದ ಹೊರಬಂದ ನಂತರ ಮತ್ತೆ ತನ್ನ ಹಳೇ ಚಾಳಿ ಮುಂದುವರೆಸಿ ಕಳೆದ ಎರಡು ತಿಂಗಳಲ್ಲೆ 15 ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದ್ದಾನೆ. ಸುಮಾರು 35 ಯುವತಿಯರಿಂದ 70 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚಿಸಿರೋದು ತನಿಖೆ ವೇಳೆ ಹೊರಬಿದ್ದಿದೆ. ಆರೋಪಿಯಿಂದ ಇನ್ನಷ್ಟು ಯುವತಿಯರು ವಂಚನೆಗೆ ಒಳಗಾಗಿರೋ ಸಾಧ್ಯತೆಗಳಿದೆ ಮೋಸ ಹೋದವರು ಕೂಡಲೇ ಬಂದು ದೂರು ನೀಡಿ ಅಂತ ಪೊಲೀಸರು ತಿಳಿಸಿದ್ದಾರೆ. 35 ಕ್ಕೂ ಅಧಿಕ ಮಂದಿಗೆ ವಂಚಿಸಿರೋದಾಗಿ ಆರೋಪಿಯೇ ಬಾಯ್ಬಿಟ್ಟಿದ್ರು ಈತನ ವಿರುದ್ದ ಕೇವಲ 3 ಜನ ಯುವತಿಯರು ಮಾತ್ರ ದೂರು ನೀಡಿದ್ದಾರೆ. ಆರೋಪಿಯನ್ನ ಬಂಧಿಸಿರುವ ಹೆಣ್ಣೂರು ಪೊಲೀಸರು ಆರೋಪಿಯನ್ನ ಜೈಲಿಗಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments