Webdunia - Bharat's app for daily news and videos

Install App

ಮಹಾರಾಷ್ಟ್ರ ಸಿಎಂ ಶಿಂಧೆ ಬಣದ ಹೋಟೆಲ್ ಬಿಲ್ ಶಾಕಿಂಗ್..!!!

Webdunia
ಶನಿವಾರ, 2 ಜುಲೈ 2022 (15:53 IST)
ಮಹಾರಾಷ್ಟ್ರದಲ್ಲಿ ಅಘಾಡಿ ಸರ್ಕಾರ ಬಿದ್ದು ಹೋಗಿ ಶಿಂಧೆ ನೇತೃತ್ವದ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕಳೆದ ತಿಂಗಳು ಉದ್ದವ್‌ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಶಿಂಧೆ ಯಾರೂ ಊಹಿಸಿದ ಬೆಳವಣಿಗೆಯಲ್ಲಿ ಈಗ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪಟ್ಟಾಭಿಷಕ್ತರಾಗಿದ್ದಾರೆ.
ಈ ಧಿಡೀರ್‌ ಬೆಳವಣಿಗೆಯಿಂದ ಸಿಎಂ ಕುರ್ಚಿಯೊಬ್ಬಿಸಿದ ಉದ್ದವ್‌ ಠಾಕ್ರೆ ಈಗ ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ. ಈಗ ಶಿವಸೇನೆಯವರಿಗೆ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದೀವಿ ಅಂತ ಹೇಳ್ತಾ ಇದ್ದೀರಿ. ಈ ಕೆಲಸ ಮೊದಲೇ ಮಾಡಲಿಲ್ಲ. ಅವತ್ತು 2019ರಲ್ಲಿ ನಾವು ನಿಮ್ಮಿಂದ ದೂರ ಆಗಿದ್ದು ಅದೇ ಕಾರಣಕ್ಕೆ ತಾನೇ.. ಅವತ್ತು ಯಾಕೆ ಸಿಎಂ ಸ್ಥಾನ ಕೊಡ್ಲಿಲ್ಲ ಅಂತ ಕಿಡಿಕಾರಿದ್ದಾರೆ. ಇತ್ತ ಉದ್ದವ್‌ ಬಣದಿಂದ ಈಗ ಸಿಎಂ ಆಗಿರೋ ಏಕನಾಥ್‌ ಸೇರಿದಂತೆ 16 ಶಿವಸೈನಿಕರನ್ನ ಅನರ್ಹಗೊಳಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ವೇಳೆ ಮಾತನಾಡಿದ ಉದ್ದವ್‌ ಪರ ವಕೀಲ ಕಪಿಲ್‌ ಸಿಬಲ್‌ ʻ ಪ್ರಜಾಪ್ರಭುತ್ವ ಕುಣಿಯೋಕಾಗಲ್ಲ. ಅವರ್ಯಾರು ಪಕ್ಷದವರೇ ಅಲ್ಲ. ದಯವಿಟ್ಟು ಆದಷ್ಟು ಬೇಗ ವಿಚಾರಣೆ ಅಂತ ನಡೆಸಿ ಅಂತ ಕೇಳಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್‌ ನಾವು ಕೂಡ ಕಣ್ಮುಚ್ಚಿಕೊಂಡು ಕೂತಿಲ್ಲ. ಅರ್ಜಿಯನ್ನ ಜುಲೈ 11ರಂದು ವಿಚಾರಣೆ ನಡೆಸ್ತೀವಿ ಅಂತ ಹೇಳಿದೆ. ಇತ್ತ ಶಿಂಧೆ ಮಹಾರಾಷ್ಟ್ರದ ಮುಂದಿನ ಸಿಎಂ ಅಂತ ಘೋಷಣೆಯಾಗ್ತಿದ್ದಂತೆ ಗೋವಾದಲ್ಲಿದ್ದ ಶಿಂಧೆಸೇನೆಯ ಇತರ ಸೈನಿಕರು ಹೋಟೆಲ್‌ನಲ್ಲೇ ಭರ್ಜರಿ ಡಾನ್ಸ್‌ ಮಾಡಿದ್ದಾರೆ. ಈ ವಿಡಿಯೋ ವೈರಲ್‌ ಆಗ್ತಿದ್ದಂತೆ ಇದಕ್ಕೆ ಸಿಎಂ ಶಿಂಧೆ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದುಈ ರೀತಿಯ ವರ್ತನೆ ಸರಿಯಿಲ್ಲ ಅಂತ ಖಂಡಿಸಿದ್ದಾರೆ. ಇನ್ನು ಇಷ್ಟೆಲ್ಲಾ ಮಹಾ ಹೈಡ್ರಾಮಕ್ಕೆ ನಾಟಕಕ್ಕೆ ವೇದಿಕೆ ಒದಗಿಸಿದ್ದು ಅಸ್ಸಾಂ. ಗುವಾಹಟಿಯ ಹೋಟೆಲ್‌ ಒಂದರಲ್ಲಿ ಸುಮಾರು 8ದಿನ ತಂಗಿದ್ದ ರೆಬೆಲ್‌ ಶಾಸಕರು ಉದ್ದವ್‌ ಸರ್ಕಾರವನ್ನೇ ಮಗುಚಿ ಹಾಕಿದ್ರು. ಇನ್ನು ಆ 8 ದಿನಕ್ಕೆ ಶಿಂಧೆ ಬಣ ಬರೋಬ್ಬರಿ 70 ಲಕ್ಷ ರೂಪಾಯಿ ಬಾಡಿಗೆ ಕಟ್ಟಿದೆ ಅಂತ ಹೋಟೆಲ್‌ ಆಡಳಿತ ಮಾಹಿತಿ ನೀಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Air India ‌Flight Crash: ಮೃತ ಪ್ರತಿ ಪ್ರಯಾಣಿಕನ ಕುಟುಂಬಕ್ಕೆ ತಲಾ ₹1 ಕೋಟಿ ಘೋಷಿಸಿದ ಟಾಟಾ ಗ್ರೂಪ್

Air India Plane crash: ವಿಮಾನ ಅಪಘಾತಕ್ಕೆ ಇದೇ ಕಾರಣ: ಮಲ್ಲಿಕಾರ್ಜುನ ಖರ್ಗೆ ಸ್ಪೋಟಕ ಹೇಳಿಕೆ

Air India Plane crash: ಸುತ್ತಲೂ ಹೆಣಗಳ ರಾಶಿಯಿತ್ತು, ಬದುಕುಳಿದ ಏಕೈಕ ವ್ಯಕ್ತಿ ಬಿಚ್ಚಿಟ್ಟ ಭಯಾನಕ ಸತ್ಯ

Air India Flight Crash: ಗಂಡನ ಭೇಟಿಗಾಗಿ ಲಂಡನ್‌ಗೆ ಹೊರಟ್ಟಿದ್ದ ಮಹಿಳೆ ಸೇರಿದ್ದು ಮಸಣಕ್ಕೆ, ಕಣ್ಣೀರ ಕತೆ

Air India Crash: 10 ನಿಮಿಷ ಲೇಟ್‌, ಟ್ರಾಫಿಕ್‌ನಲ್ಲಿ ಸಿಲುಕಿ ಮಹಿಳೆ ಜಸ್ಟ್ ಬಚಾವ್‌

ಮುಂದಿನ ಸುದ್ದಿ
Show comments