Webdunia - Bharat's app for daily news and videos

Install App

ಮಹಾಲಕ್ಷ್ಮಿ ಹಂತಕ ಮುಕ್ತಿ ರಂಜನ್ ಪ್ರತಾಪ್ ರಾಯ್ ಡೆತ್ ನೋಟ್, ಕೊನೆಯ ಕ್ಷಣ ಹೇಗಿತ್ತು ವಿವರ ಇಲ್ಲಿದೆ

Krishnaveni K
ಗುರುವಾರ, 26 ಸೆಪ್ಟಂಬರ್ 2024 (09:57 IST)
ಒಡಿಶಾ: ಬೆಂಗಳೂರಿನಲ್ಲಿ ನೇಪಾಳಿ ಮೂಲದ ತನ್ನ ಪ್ರೇಯಸಿ ಮಹಾಲಕ್ಷ್ಮಿಯನ್ನು ಹತ್ಯೆ ಮಾಡಿ ಒಡಿಶಾದ ತನ್ನ ಸ್ವಗ್ರಾಮಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡ ಹಂತ ಮುಕ್ತಿ ರಂಜನ್ ಪ್ರತಾಪ್ ರಾಯ್ ಡೆತ್ ನೋಟ್ ಬರೆದಿಟ್ಟ. ಆತನ ಡೆತ್ ನೋಟ್ ವಿವರ ಮತ್ತು ಕೊನೆಯ ಕ್ಷಣ ಏನು ಮಾಡಿದ್ದ ಎಂಬ ವಿವರ ಇಲ್ಲಿದೆ.

ಸೆ.3 ರಂದು ಮಹಾಲಕ್ಷ್ಮಿಯನ್ನು ಹತ್ಯೆ ಮಾಡಿದ್ದ ಹಂತಕ ಬಳಿಕ ತನ್ನ ಹೆಬಗೋಡಿಯಲ್ಲಿರುವ ಮನೆಗೆ ತೆರಳಿದ್ದಲ್ಲದೆ, ಇಲ್ಲಿಯೇ ಇರುವ ಸಹೋದರನಿಗೆ ಕರೆ ಮಾಡಿ ಮಹಾಲಕ್ಷ್ಮಿಯನ್ನು ಹತ್ಯೆ ಮಾಡಿ ತುಂಡುಗಳನ್ನಾಗಿ ಮಾಡಿ ಫ್ರಿಡ್ಜ್ ನಲ್ಲಿರಿಸಿರುವುದಾಗಿ ಹೇಳಿದ್ದ. ಬಳಿಕ ಆತನಿಗೂ ಊರು ಬಿಡುವಂತೆ ಹೇಳಿದ್ದರೂ ಆತ ಕೇಳಿಲ್ಲ.

ಮುಕ್ತಿ ರಂಜನ್ ತನ್ನ ಊರಿಗೆ ತೆರಳಿದ್ದು ಅಲ್ಲಿಗೆ ತಲುಪಿದ ಮೇಲೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಹೀಗಾಗಿ ಆತನನ್ನು ಪತ್ತೆ ಮಾಡುವುದು ಪೊಲೀಸರಿಗೆ ಕಷ್ಟವಾಗಿದೆ. ಮೊಬೈಲ್ ಬಳಸದೇ ಆತ ಓಡಾಡುತ್ತಿದ್ದ. ತುರ್ತು ಕೆಲಸದ ಮೇಲೆ ಮನೆಗೆ ಬಂದಿರುವುದಾಗಿ ಮನೆಯವರಿಗೆ ಹೇಳಿದ್ದ.

ಮೊನ್ನೆ ರಾತ್ರಿ ಮನೆಯವರೊಂದಿಗೆ ಮಾತನಾಡಿದ್ದ ಹಂತಕ ಬೆಳಗ್ಗಿನ ಜಾವ ಕೆಲಸವಿದೆ ಎಂದು ಹೇಳಿ ತನ್ನ ಜೊತೆ ಮೊಬೈಲ್, ಲ್ಯಾಪ್ ಟಾಪ್ ಕೊಂಡೊಯ್ದು ಮನೆಯಿಂದ ಒಂದೂವರೆ ಕಿ.ಮೀ. ದೂರದಲ್ಲಿರುವ ಸ್ಮಶಾನಕ್ಕೆ ತೆರಳಿ ಮರವೊಂದಕ್ಕೆ ನೇಣು ಹಾಕಿಕೊಂಡಿದ್ದಾನೆ. ಈ ವೇಳೆ ಆತ ಡೆತ್ ನೋಟ್ ಬರೆದಿಟ್ಟಿದ್ದ.

ಡೆತ್ ನೋಟ್ ನಲ್ಲಿ ಏನಿದೆ?
ಹಂತಕ ಡೆತ್ ನೋಟ್ ನಲ್ಲಿ ತಾನು ಸೆಪ್ಟೆಂಬರ್ 3 ರಂದು ಮಹಾಲಕ್ಷ್ಮಿಯನ್ನು ಹತ್ಯೆ ಮಾಡಿರುವುದಾಗಿ ಬರೆದುಕೊಂಡಿದ್ದಾನೆ. ಮೊದಲು ಮಹಾಲಕ್ಷ್ಮಿ ತನ್ನ ಮೇಲೆ ಹಲ್ಲೆ ಮಾಡಿದ್ದಳು. ಇದರಿಂದ ಸಿಟ್ಟಿಗೆದ್ದು ಆಕೆಯನ್ನು ಸಾಯಿಸಿರುವುದಾಗಿ ಬರೆದಿದ್ದಾನೆ. ಮಹಾಲಕ್ಷ್ಮಿಯ ಇತ್ತೀಚೆಗಿನ ವರ್ತನೆಯಿಂದ ಬೇಸತ್ತಿದ್ದೆ. ಅದಕ್ಕೇ ಆಕೆಯನ್ನು ಕೊಲೆ ಮಾಡಿದ್ದೆ. ಬಳಿಕ 59 ಪೀಸ್ ಮಾಡಿ ಫ್ರಿಡ್ಜ್ ನಲ್ಲಿರಿಸಿದ್ದೆ ಎಂದು ಬರೆದುಕೊಂಡಿದ್ದಾನೆ. ಸದ್ಯಕ್ಕೆ ರಾಜ್ಯ ಪೊಲೀಸ್ ತಂಡ ಆತನ ಗ್ರಾಮದಲ್ಲಿ ಮೃತನ ಫಿಂಗರ್ ಪ್ರಿಂಟ್, ಡೆತ್ ನೋಟ್ ಇತ್ಯಾದಿಗಳನ್ನು ಸ್ಥಳೀಯ ಪೊಲೀಸರಿಂದ ಪಡೆದು ಮರಳಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments