Webdunia - Bharat's app for daily news and videos

Install App

ಮಹಾಲಕ್ಷ್ಮಿ ಹಂತಕ ಮುಕ್ತಿ ರಂಜನ್ ಪ್ರತಾಪ್ ರಾಯ್ ಡೆತ್ ನೋಟ್, ಕೊನೆಯ ಕ್ಷಣ ಹೇಗಿತ್ತು ವಿವರ ಇಲ್ಲಿದೆ

Krishnaveni K
ಗುರುವಾರ, 26 ಸೆಪ್ಟಂಬರ್ 2024 (09:57 IST)
ಒಡಿಶಾ: ಬೆಂಗಳೂರಿನಲ್ಲಿ ನೇಪಾಳಿ ಮೂಲದ ತನ್ನ ಪ್ರೇಯಸಿ ಮಹಾಲಕ್ಷ್ಮಿಯನ್ನು ಹತ್ಯೆ ಮಾಡಿ ಒಡಿಶಾದ ತನ್ನ ಸ್ವಗ್ರಾಮಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡ ಹಂತ ಮುಕ್ತಿ ರಂಜನ್ ಪ್ರತಾಪ್ ರಾಯ್ ಡೆತ್ ನೋಟ್ ಬರೆದಿಟ್ಟ. ಆತನ ಡೆತ್ ನೋಟ್ ವಿವರ ಮತ್ತು ಕೊನೆಯ ಕ್ಷಣ ಏನು ಮಾಡಿದ್ದ ಎಂಬ ವಿವರ ಇಲ್ಲಿದೆ.

ಸೆ.3 ರಂದು ಮಹಾಲಕ್ಷ್ಮಿಯನ್ನು ಹತ್ಯೆ ಮಾಡಿದ್ದ ಹಂತಕ ಬಳಿಕ ತನ್ನ ಹೆಬಗೋಡಿಯಲ್ಲಿರುವ ಮನೆಗೆ ತೆರಳಿದ್ದಲ್ಲದೆ, ಇಲ್ಲಿಯೇ ಇರುವ ಸಹೋದರನಿಗೆ ಕರೆ ಮಾಡಿ ಮಹಾಲಕ್ಷ್ಮಿಯನ್ನು ಹತ್ಯೆ ಮಾಡಿ ತುಂಡುಗಳನ್ನಾಗಿ ಮಾಡಿ ಫ್ರಿಡ್ಜ್ ನಲ್ಲಿರಿಸಿರುವುದಾಗಿ ಹೇಳಿದ್ದ. ಬಳಿಕ ಆತನಿಗೂ ಊರು ಬಿಡುವಂತೆ ಹೇಳಿದ್ದರೂ ಆತ ಕೇಳಿಲ್ಲ.

ಮುಕ್ತಿ ರಂಜನ್ ತನ್ನ ಊರಿಗೆ ತೆರಳಿದ್ದು ಅಲ್ಲಿಗೆ ತಲುಪಿದ ಮೇಲೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಹೀಗಾಗಿ ಆತನನ್ನು ಪತ್ತೆ ಮಾಡುವುದು ಪೊಲೀಸರಿಗೆ ಕಷ್ಟವಾಗಿದೆ. ಮೊಬೈಲ್ ಬಳಸದೇ ಆತ ಓಡಾಡುತ್ತಿದ್ದ. ತುರ್ತು ಕೆಲಸದ ಮೇಲೆ ಮನೆಗೆ ಬಂದಿರುವುದಾಗಿ ಮನೆಯವರಿಗೆ ಹೇಳಿದ್ದ.

ಮೊನ್ನೆ ರಾತ್ರಿ ಮನೆಯವರೊಂದಿಗೆ ಮಾತನಾಡಿದ್ದ ಹಂತಕ ಬೆಳಗ್ಗಿನ ಜಾವ ಕೆಲಸವಿದೆ ಎಂದು ಹೇಳಿ ತನ್ನ ಜೊತೆ ಮೊಬೈಲ್, ಲ್ಯಾಪ್ ಟಾಪ್ ಕೊಂಡೊಯ್ದು ಮನೆಯಿಂದ ಒಂದೂವರೆ ಕಿ.ಮೀ. ದೂರದಲ್ಲಿರುವ ಸ್ಮಶಾನಕ್ಕೆ ತೆರಳಿ ಮರವೊಂದಕ್ಕೆ ನೇಣು ಹಾಕಿಕೊಂಡಿದ್ದಾನೆ. ಈ ವೇಳೆ ಆತ ಡೆತ್ ನೋಟ್ ಬರೆದಿಟ್ಟಿದ್ದ.

ಡೆತ್ ನೋಟ್ ನಲ್ಲಿ ಏನಿದೆ?
ಹಂತಕ ಡೆತ್ ನೋಟ್ ನಲ್ಲಿ ತಾನು ಸೆಪ್ಟೆಂಬರ್ 3 ರಂದು ಮಹಾಲಕ್ಷ್ಮಿಯನ್ನು ಹತ್ಯೆ ಮಾಡಿರುವುದಾಗಿ ಬರೆದುಕೊಂಡಿದ್ದಾನೆ. ಮೊದಲು ಮಹಾಲಕ್ಷ್ಮಿ ತನ್ನ ಮೇಲೆ ಹಲ್ಲೆ ಮಾಡಿದ್ದಳು. ಇದರಿಂದ ಸಿಟ್ಟಿಗೆದ್ದು ಆಕೆಯನ್ನು ಸಾಯಿಸಿರುವುದಾಗಿ ಬರೆದಿದ್ದಾನೆ. ಮಹಾಲಕ್ಷ್ಮಿಯ ಇತ್ತೀಚೆಗಿನ ವರ್ತನೆಯಿಂದ ಬೇಸತ್ತಿದ್ದೆ. ಅದಕ್ಕೇ ಆಕೆಯನ್ನು ಕೊಲೆ ಮಾಡಿದ್ದೆ. ಬಳಿಕ 59 ಪೀಸ್ ಮಾಡಿ ಫ್ರಿಡ್ಜ್ ನಲ್ಲಿರಿಸಿದ್ದೆ ಎಂದು ಬರೆದುಕೊಂಡಿದ್ದಾನೆ. ಸದ್ಯಕ್ಕೆ ರಾಜ್ಯ ಪೊಲೀಸ್ ತಂಡ ಆತನ ಗ್ರಾಮದಲ್ಲಿ ಮೃತನ ಫಿಂಗರ್ ಪ್ರಿಂಟ್, ಡೆತ್ ನೋಟ್ ಇತ್ಯಾದಿಗಳನ್ನು ಸ್ಥಳೀಯ ಪೊಲೀಸರಿಂದ ಪಡೆದು ಮರಳಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹರಿಯಾಣ ಮಾಡೆಲ್‌ ಗಂಟಲು ಸೀಳಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ, ಸಹೋದರಿ ಹೇಳಿದ್ದು ಹೀಗೇ

ಇರಾನ್, ಇಸ್ರೇಲ್ ಯುದ್ಧ ಇಫೆಕ್ಟ್: ಭಾರತದಲ್ಲಿ ಇದರ ಬೆಲೆ ಹೆಚ್ಚೋದು ಗ್ಯಾರಂಟಿ

Video, ನಿನ್ನ ಗುರುತೇ ಸಿಗದ ಹಾಗೇ ಮಾಡುತ್ತೇನೆ: ಗ್ಯಾಸ್ ಸ್ಟೇಷನ್ ಸಿಬ್ಬಂದಿಗೆ ಮಹಿಳೆ ಗನ್ ಪಾಯಿಂಟ್‌

ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ವ್ಯಕ್ತಿ ವಿರುದ್ಧ ಬಿಜೆಪಿ ದೂರು

ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಬಿಜೆಪಿ ಗೂಂಡಾಗಳೇ ಕಾರಣ: ಕಾಂಗ್ರೆಸ್ ನಾಯಕ ಎಂ ಲಕ್ಷ್ಮಣ್

ಮುಂದಿನ ಸುದ್ದಿ
Show comments