Webdunia - Bharat's app for daily news and videos

Install App

ಮಹಾಲಕ್ಷ್ಮಿ ಹಂತಕ ನೇಣಿಗೆ ಶರಣು: ಇಲ್ಲಿಗೆ ಕ್ಲೋಸ್ ಆಗಲ್ಲ, ಮುಂದಿದೆ ಟ್ವಿಸ್ಟ್

Krishnaveni K
ಗುರುವಾರ, 26 ಸೆಪ್ಟಂಬರ್ 2024 (09:27 IST)
ಬೆಂಗಳೂರು: ಮಹಾಲಕ್ಷ್ಮಿ ಹಂತಕ ಮುಕ್ತಿ ರಂಜನ್ ಪ್ರತಾಪ್ ರಾಯ್ ಒಡಿಶಾದ ತನ್ನ ಸ್ವಗ್ರಾಮದಲ್ಲಿ ನೇಣಿಗೆ ಶರಣಾಗಿರುವುದು ಖಚಿತವಾಗಿದೆ. ಆದರೆ ಈ ಕೇಸ್ ಇಲ್ಲಿಗೇ ಕ್ಲೋಸ್ ಆಗುತ್ತಾ? ಇಲ್ಲಿದೆ ವಿವರ.

ನೇಪಾಳಿ ಮೂಲದ ಮಹಿಳೆ ಮಹಾಲಕ್ಷ್ಮಿಯನ್ನು ವಯ್ಯಾಲಿಕಾವಲ್ ನ ಆಕೆಯ ಮನೆಯಲ್ಲಿಯೇ ರಂಜನ್ ಕೊಲೆ ಮಾಡಿ ಮೃತದೇಹವನ್ನು ಪೀಸ್ ಮಾಡಿ ಫ್ರಿಡ್ಜ್ ನಲ್ಲಿ ತುಂಬಿ ಪರಾರಿಯಾಗಿದ್ದ. ಸೆಪ್ಟೆಂಬರ್ 3 ರಂದು ಹತ್ಯೆ ಮಾಡಿದ್ದ ಆರೋಪಿ ಅಂದೇ ತನ್ನ ಊರಿಗೆ ಪರಾರಿಯಾಗಿದ್ದ.

ಇದೀಗ ಪ್ರಕರಣ ಬೆಳಕಿಗೆ ಬಂದ ಮೇಲೆ ಪೊಲೀಸರ ತಂಡ ಒಡಿಶಾಗೆ ಹುಡುಕಾಟ ನಡೆಸಲು ಹೋಗಿದೆ. ಈ ನಡುವೆ ತನ್ನ ಮನೆಯವರೊಂದಿಗೆ ರಾತ್ರಿ ಊಟ ಮಾಡಿದ್ದ ಆರೋಪಿ ಮನೆಯ ಬಳಿಯಿರುವ ಸ್ಮಶಾನದಲ್ಲಿ ನೇಣಿಗೆ ಶರಣಾಗಿದ್ದ. ಡೆತ್ ನೋಟ್ ನಲ್ಲಿ ತಾನೇ ಹತ್ಯೆ ಮಾಡಿದ್ದಾಗಿ ಹೇಳಿದ್ದಾನೆ. ಆದರೆ ಅಷ್ಟಕ್ಕೇ ಈ ಪ್ರಕರಣ ಕ್ಲೋಸ್ ಆಗಲ್ಲ.

ಪೊಲೀಸರಿಗೆ ಈಗಲೇ ನಿಜವಾದ ಸಮಸ್ಯೆ ಬಂದಿರುವುದು. ಆರೋಪಿ ಬದುಕಿದ್ದರೆ ಆತನ ಬಳಿಯಿಂದಲೇ ಸತ್ಯ ಬಾಯಿ ಬಿಡಿಸಬಹುದಿತ್ತು. ಆದರೆ ಈಗ ಆತನೂ ತೀರಿಕೊಂಡಿರುವುದರಿಂದ ಸಾಬೀತುಪಡಿಸುವುದೇ ಕಷ್ಟವಾಗಿದೆ. ಅದಲ್ಲದೆ, ಕೊಲೆಯಲ್ಲಿ ಇನ್ನೂ ಬೇರೆಯವರಿದ್ದರಾ ಎಂಬುದನ್ನೂ ಕಂಡುಹಿಡಿಯಬೇಕಿದೆ. ಹೀಗಾಗಿ ಆರೋಪಿ ಸಾವನ್ನಪ್ಪಿರುವುದರಿಂದ ಪೊಲೀಸರಿಗೆ ಹೊಸ ತಲೆನೋವುಗಳು ಶುರುವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Dehli Rain: ವಿಮಾನ ಹಾರಾಟಗಳಲ್ಲೂ ವ್ಯತ್ಯಯ ಸಾಧ್ಯತೆ, ಪ್ರಯಾಣಿಕರಿಗೆ ಹೊಸ ಸಂದೇಶ

Covid 19: ಕೋವಿಡ್‌ಗೆ ರಾಜ್ಯದಲ್ಲಿ ಮೊದಲ ಬಲಿ, ಹೆಚ್ಚಿದ ಆತಂಕ

ಅವರೇ ಹೇಳಿರುವಂತೆ ನಾಯಿಯೇ ನಾರಾಯಣ, ಹಾಗಾದ್ರೆ ನಾರಾಯಣಸ್ವಾಮಿಯನ್ನು ಏನೆಂದು ಕರೆಯಬೇಕು: ಪ್ರಿಯಾಂಕ್ ಖರ್ಗೆ

Covid 19: ಭಾರತದ ಈ ನಗರದಲ್ಲಿ ಹೆಚ್ಚುತ್ತಿದೆ ಕೋವಿಡ್ 19 ಪ್ರಕರಣಗಳು

ಚಾಮರಾಜಪೇಟೆ ಪಾಕಿಸ್ತಾನದಲ್ಲಿದೆಯೋ ಭಾರತದಲ್ಲಿದೆಯೋ: ಬಿಜೆಪಿ ಆಕ್ರೋಶ

ಮುಂದಿನ ಸುದ್ದಿ
Show comments