Webdunia - Bharat's app for daily news and videos

Install App

ಮಹಾದಾಯಿ: ಹೋರಾಟಗಾರರಲ್ಲಿ ಭಿನ್ನಮತ ಸ್ಫೋಟ

Webdunia
ಬುಧವಾರ, 18 ಜುಲೈ 2018 (14:05 IST)
ಮಹದಾಯಿ ಹೋರಾಟಗಾರರು ದಯಾಮರಣ ಕೋರಿ ಅರ್ಜಿಯನ್ನು ರಾಷ್ಟ್ರಪತಿಗೆ ಬರೆದ ಹಿನ್ನಲೆಯಲ್ಲಿ ಮಹದಾಯಿ ಹೋರಾಟಗಾರರಲ್ಲಿಯೇ ಭಿನ್ನಮತ ಸ್ಫೋಟಗೊಂಡಿದೆ. ಮಹದಾಯಿಗಾಗಿ ಮಹಾ ವೇದಿಕೆ ಪದಾಧಿಕಾರಿಗಳು ಇದೀಗ ರೈತ ಹೋರಾಟಗಾರ ಸೊಬರದಮಠ ವಿರುದ್ಧ ಕಿಡಿ ಕಾರಲಾರಂಭಿಸಿದ್ದಾರೆ.

ಗದಗ ನಗರದಲ್ಲಿ ಮಹದಾಯಿಗಾಗಿ ಮಹಾವೇದಿಕೆ ಪದಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ,  ದಯಾಮರಣ ಕೇಳಿದ್ದಕ್ಕೆ ಮಹದಾಯಿ ಹೋರಾಟಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರುದಯಾಮರಣ ಕೇಳೋದು ಹೇಡಿಗಳ ಕೆಲಸ, ದುರ್ಬಲ ಮನಸ್ಸಿನ ರೈತರಿಗೆ ದಯಾಮರಣ ಪ್ರಚೋದನೆ ನೀಡಿದಂತಾಗುತ್ತೆ. ಅಲ್ಲದೆ ರೈತರು ದಯಾಮರಣ ಕೇಳುವಷ್ಟು ದುರ್ಬಲವಾಗಿಲ್ಲ ಎಂದು ಮಹದಾಯಿ ಹೋರಾಟಗಾರ ವೀರೇಶ ಸೊಬರದಮಠ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ದಯಾಮರಣ ಮೂಲಕ ಸೊಬರದಮಠರೈತರಿಗೆ ಸಾಯಲು ಪ್ರಚೋದನೆ ನೀಡುತ್ತಿದ್ದಾರೆ. ನೀರಿಗಾಗಿ ಸಾಯುವ ರೈತರು ನಾವಲ್ಲ ಆಗಷ್ಟ 8 ರಂದು ನ್ಯಾಯಾಧೀಕರಣದಲ್ಲಿ ನಮ್ಮ ಪರ ತೀರ್ಪು ಬರಲಿದೆ. ಒಂದು ವೇಳೆ ನಮ್ಮ ಪರ ತೀರ್ಪು ಬರದಿದ್ದರೆ ಮತ್ತೆ ನರಗುಂದ ಬಂಡಾಯ ಆಗೋದಂತು  ಸತ್ಯ ಎಂದು ಎಚ್ಚರಿಸಿದರು.

ಇನ್ನು ನಾವು ಬಂಡಾಯ ನೆಲದ ಗಂಡೆದೆ ಗಂಡಸರು. ನಾವು ಹೇಡಿಗಳಂತೆ ಮಾತಾಡಲ್ಲ ಎಂದು ಮಹಾದಾಯಿಗಾಗಿ ಮಹಾವೇದಿಕೆ ಮುಖ್ಯ ಸಂಚಾಲಕ ಶಂಕ್ರಪ್ಪ ಅಂಬಲಿ, ಬೆಳಗಾವಿ ಜಿಲ್ಲಾ ಸಂಚಾಲಕ ಶಂಕರಗೌಡ ಪಾಟೀಲ್ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏರ್‌ ಇಂಡಿಯಾ ವಿಮಾನ ದುರಂತ: ಪ್ರಾಣ ಉಳಿಸಿಕೊಳ್ಳಲು ಬಿಲ್ಡಿಂಗ್‌ನಿಂದ ವಿದ್ಯಾರ್ಥಿಗಳು ಹಾರುತ್ತಿರುವ ಭೀಕರ ವಿಡಿಯೋ ವೈರಲ್‌

ಶೀಘ್ರದಲ್ಲೇ ನಿವೃತ್ತಿ ಪಡೆಯುವುದಾಗಿ ಹೇಳಿದ್ದ: ಕ್ಯಾಪ್ಟನ್ ಸುಮೀತ್‌ ಸಬರ್ವಾಲ್‌ಗೆ ತಂದೆಯ ಕಣ್ಣೀರ ಅಂತಿಮ ವಿದಾಯ

ರಾತೋರಾತ್ರಿ ಹಿಂದೂ ಕಾರ್ಯಕರ್ತರ ಮನೆಗೆ ಪೊಲೀಸರ ಭೇಟಿ: ತನಿಖೆಗೆ ಆದೇಶ

ಬಾಂಬ್‌ ಬೆದರಿಕೆ: ನಾಗ್ಪುರ ಏರ್‌ಪೋರ್ಟ್‌ನಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ

ಲಂಡನ್ ಬೆನ್ನಲ್ಲೇ ಪ್ಯಾರಿಸ್‌ಗೆ ನಿಗದಿಯಾಗಿದ್ದ ಏರ್‌ ಇಂಡಿಯಾ ವಿಮಾನ ರದ್ದು

ಮುಂದಿನ ಸುದ್ದಿ
Show comments