Webdunia - Bharat's app for daily news and videos

Install App

ಮಧುಗಿರಿಯ ಶಾಸಕರ ಮನೆಗೆ ಹೋದ ಸಿ.ಎಂ ಸಿದ್ದರಾಮಯ್ಯಗೆ ಸಿಕ್ಕ ರಾಜಾತಿಥ್ಯ ಏನು ಗೊತ್ತಾ...?

Webdunia
ಶುಕ್ರವಾರ, 29 ಡಿಸೆಂಬರ್ 2017 (15:06 IST)
ತುಮಕೂರು:  ಮಧುಗಿರಿಯ ಶಾಸಕ ಕೆಎನ್ ರಾಜಣ್ಣ ಅವರ  ಮನೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬೆಳ್ಳಿ ತಟ್ಟೆ, ಲೋಟದಲ್ಲಿ ಉಪಹಾರ ಸ್ವೀಕರಿಸಿದ್ದರು.


ಇವರು ಸಮಾವೇಶಕ್ಕೆ ಬರುವ ಮುನ್ನ ತುಮಕೂರಿನಲ್ಲಿ ವಾಸ್ತವ್ಯ ಹೂಡಿದ್ದು, ಆ ಸಂದರ್ಭದಲ್ಲಿ ಶಾಸಕ ಕೆಎನ್ ರಾಜಣ್ಣ ಅವರು ಬೆಳಿಗ್ಗೆ ಉಪಹಾರಕ್ಕೆಂದು ಸಿಎಂ ಅವರನ್ನು ತಮ್ಮ ಕ್ಯಾತ್ಸಂದ್ರ ದಲ್ಲಿರುವ ಮನೆಗೆ ಆಹ್ವಾನಿಸಿದ್ದರು. ಅಲ್ಲಿಗೆ ಹೋದಾಗ ಶಾಸಕರು ಅವರಿಗೆ  ಉಪಹಾರವನ್ನು ಬೆಳ್ಳಿ ತಟ್ಟೆ, ಲೋಟದಲ್ಲಿ ನೀಡಿದ್ದರು.


ಸಮಾಜವಾದದ ಬಗ್ಗೆ ಮಾತನಾಡುವ ಸಿಎಂ ಅವರು ಅಲ್ಲಿದ್ದವರಿಗೆ ನೀಡಿದ ಮಾಮೂಲಿ ತಟ್ಟೆಯಲ್ಲೇ ತನಗೂ ಕೊಡಿ ಎಂದು ಹೇಳುವ ಬದಲು ಅದರಲ್ಲೇ ಉಪಹಾರ ಸೇವಿಸಿದರು. ರಾಜಣ್ಣ ಹಾಗು ಅವರ ಪುತ್ರ ಸೇರಿ ಸಿಎಂಗೆ ಆತಿಥ್ಯ ನೀಡಿದ್ದರು. ಹಾಗೆ ಶಾಸಕ ಕೆಎನ್ ರಾಜಣ್ಣ ಅವರು ಮುಂಬರುವ ಚುನಾವಣೆಯಲ್ಲಿ ತಮ್ಮ ಪುತ್ರನಿಗೂ ಒಂದು ಟಿಕೇಟು ಕೊಡಿಸಬೇಕೆಂದು ವಿನಂತಿ  ಕೂಡ ಮಾಡಿದ್ದರು. ಆದ ಕಾರಣ ಸಿಎಂ ಓಲೈಸಲು ಶಾಸಕರು ಈ ರೀತಿಯಾಗಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments