Webdunia - Bharat's app for daily news and videos

Install App

ಸಿಲಿಂಡರ್ ಬುಕಿಂಗ್ ಮೇಲೆ ಸ್ಥಿರ ರಿಯಾಯಿತಿ; ಬಂಪರ್ ಕೊಡುಗೆ ಘೋಷಿಸಿದ ಕಂಪನಿ..!

Webdunia
ಸೋಮವಾರ, 7 ಫೆಬ್ರವರಿ 2022 (21:25 IST)
ಒಂದೆಡೆ ಕೊರೊನಾ, ಇನ್ನೊಂದೆಡೆ ಹೆಚ್ಚುತ್ತಿರುವ ಹಣದುಬ್ಬರ ಗ್ರಾಹಕರನ್ನು ತಲ್ಲಣಗೊಳಿಸುತ್ತಿದೆ. ಇಂತಹ ಸಂದರ್ಭಗಳಲ್ಲಿ LPG ಸಿಲಿಂಡರ್ ಅನ್ನು ಬುಕ್ ಮಾಡುವವರಿಗೆ, ಈ ಕೊಡುಗೆಯು ಸಹಾಯಕವಾಗಬಹುದು. ಬಜಾಜ್ ಫಿನ್‌ಸರ್ವ್ ಅಪ್ಲಿಕೇಶನ್ ಮೂಲಕ ಎಲ್‌ಪಿಜಿ ಸಿಲಿಂಡರ್ ಅನ್ನು ಬುಕ್ ಮಾಡುವ ಗ್ರಾಹಕರಿಗೆ ಬಜಾಜ್ ಫೈನಾನ್ಸ್ ಸ್ಥಿರ ರಿಯಾಯಿತಿ ಕೊಡುಗೆಯನ್ನು ಪ್ರಕಟಿಸಿದೆ.
FinServe ಆ್ಯಪ್ ಮೂಲಕ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡುವ ಗ್ರಾಹಕರಿಗೆ ಶೇಕಡಾ 10 ರಷ್ಟುಅಂದರೆ ಗರಿಷ್ಠ 75 ರೂ.ವರೆಗಿನ ಬುಕ್ಕಿಂಗ್‌ಗೆ ರಿಯಾಯಿತಿಯನ್ನು ಬಜಾಜ್ ಘೋಷಿಸಿದೆ. ಈ ಡಿಜಿಟಲ್ ಅಪ್ಲಿಕೇಶನ್ ಅನ್ನು ಬಜಾಜ್ ಫೈನಾನ್ಸ್ ಕಂಪನಿ ನಿರ್ವಹಿಸುತ್ತದೆ.
 
LPG ಸಿಲಿಂಡರ್ ಬುಕಿಂಗ್ ರಿಯಾಯಿತಿಯನ್ನು ಹೇಗೆ ಪಡೆಯುವುದು.
ನೀವು ಬಜಾಜ್ ಫಿನ್‌ಸರ್ವ್ ಅಪ್ಲಿಕೇಶನ್ ಅನ್ನು ತೆರೆಯಬೇಕು
ನಂತರ ಬಿಲ್‌ಗಳು, ರೀಚಾರ್ಜ್ ವಿಭಾಗದಲ್ಲಿ ವೀಕ್ಷಣೆ ಕ್ಲಿಕ್ ಮಾಡಿ
LPG ಗ್ಯಾಸ್ ಸಿಲಿಂಡರ್ ಆಯ್ಕೆಯು ಯುಟಿಲಿಟೀಸ್, ಬಿಲ್ ವಿಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ನೀವು ಅದರ ಮೇಲೆ ಕ್ಲಿಕ್ ಮಾಡಿ.
ಈಗ ಸೇವಾ ಪೂರೈಕೆದಾರರನ್ನು ಆಯ್ಕೆ ಮಾಡಿ. ನಂತರ ನೀವು ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಗ್ರಾಹಕ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ
ನಿಮ್ಮ ಬುಕಿಂಗ್ ಮೊತ್ತವನ್ನು ಸಿಸ್ಟಂನಲ್ಲಿ ಪ್ರದರ್ಶಿಸಲಾಗುತ್ತದೆ. ಪಾವತಿ ಮಾಡಲು ಮುಂದುವರಿಯಿರಿ.
ನಂತರ ಅಪ್ಲಿಕೇಶನ್ ಪ್ರೊಮೊ ಕೋಡ್ ಬದಲಿಗೆ, GAS75 ಅನ್ನು ನಮೂದಿಸಬೇಕು. ಇದರೊಂದಿಗೆ ನೀವು ಬುಕಿಂಗ್ ಮೊತ್ತದಲ್ಲಿ 10% ರಿಯಾಯಿತಿಯನ್ನು ಪಡೆಯಬಹುದು. ಕಂಪನಿಯು ಗರಿಷ್ಠ 75 ರೂ. ವರೆಗೆ ನೀಡುತ್ತದೆ.
ಸದ್ಯ 14.2 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ 952 ರೂ.ಇದೆ. ಈ GAS75 ಕೋಡ್ ಅನ್ನು ಅಪ್ಲೆ ಮಾಡಿದ ನಂತರ, ನೀವು ರೂ.877 ರೂಗೆ ಗ್ಯಾಸ್ ಪಡೆಯಬಹುದು.
ಯಾವುದೇ ಪಾವತಿಯನ್ನು ಮಾಡಲು ನೀವು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಬಜಾಜ್ ಫಿನ್‌ಸರ್ವ್ ವಾಲೆಟ್ ಅಥವಾ UPI ಅನ್ನು ಬಳಸಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Suhas Shetty Murder: ತನಿಖೆಯಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲೇನಿದೆ

ರೇಣುಕಾಸ್ವಾಮಿ ತಂದೆ ಕಣ್ಣೀರು: ಮಾನವೀಯತೆಯಿಂದಾದ್ರೂ ಸೊಸೆಗೆ ಸರ್ಕಾರಿ ನೌಕರಿ ಕೊಡಿಸಿ

ಯಡಿಯೂರಪ್ಪ ಮನೆ ಮದುವೆಯಲ್ಲಿ ಸಿದ್ದರಾಮಯ್ಯ: ಒಳಗೊಳಗೆ ಎಲ್ಲಾ ಚೆನ್ನಾಗೇ ಇರ್ತೀರಾ ನೆಟ್ಟಿಗರ ಟಾಂಗ್

Suhas Shetty: ಸುಹಾಸ್ ಶೆಟ್ಟಿ ಕೇಸ್ ಎನ್ಐಎಗೆ ವಹಿಸಿದ ಕೇಂದ್ರ: ಕರಾವಳಿಯ ಹತ್ಯಾಕಾಂಡಗಳೆಲ್ಲಾ ಬಯಲಾಗುತ್ತಾ

Bengaluru Stampede: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

ಮುಂದಿನ ಸುದ್ದಿ
Show comments