Webdunia - Bharat's app for daily news and videos

Install App

ಯುವತಿಯನ್ನ ಹುರಿದು ಮುಕ್ಕಿದ ಕಾಮುಕರು

Webdunia
ಶನಿವಾರ, 1 ಏಪ್ರಿಲ್ 2023 (12:45 IST)
ಸಿಲಿಕಾನ್ ಸಿಟಿ ಮಹಿಳೆಯರಿಗೆ ಸೇಫ್ ಅಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.ಪಾರ್ಕ್ ನಲ್ಲಿ ಕುಳಿತಿದ್ದ ಯುವತಿಯನ್ನ ಎಳೆದೊಯ್ದ ಕಾಮುಕರು ಹುರಿದು ಮುಕ್ಕಿದ್ದಾರೆ.ರಾತ್ರಿ ಇಡೀ ಕಾರ್ ನಲ್ಲೆ ಸುತ್ತಾಡಿಸಿ ಅತ್ಯಾಚಾರ ಎಸಗಿದ್ದಾರೆ.ನಾಲ್ವರು ಸೇರಿ ನಡೆಸಿದ ಸಾಮೂಹಿಕ ಅತ್ಯಾಚಾರಕ್ಕೆ ಸಂತ್ರಸ್ಥೆ ನಲುಗಿ ಹೋಗಿದ್ದಾಳೆ.ಮಾರ್ಚ್ 25 ರ ರಾತ್ರಿ. 9.30 ರ ಸಮಯ.ಬೆಂಗಳೂರಿನ ಹೃದಯ ಭಾಗದಂತಿರುವ ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜ್..ಇದೇ ಏರಿಯಾದ ಪಾರ್ಕ್ ನಲ್ಲಿ ಕುಳಿತಿದ್ದ‌‌..ಯುವತಿ ನರಕಯಾತನೆ ಅನುಭವಿಸಿದ್ದಾಳೆ.ನಾಲ್ವರು ಕಾಮುಕರು ಮೃಗದಂತೆ ಎರಗಿದ್ದಾರೆ ರಾತ್ರಿ‌ ಇಡೀ ಅತ್ಯಾಚಾರ ಎಸಗಿ ನಡು ರಸ್ತೆಯಲ್ಲೇ ಬಿಸಾಡಿ ಹೋಗಿದ್ದಾರೆ.

ಕಾರ್..ಕೆಎ 01 ಎಂಬಿ 6169 ನಂಬರ್ ನ ಇದೇ ಮಾರುತಿ ಸುಜುಕಿ 800 ಕಾರು,ಘಟನೆಯ ಭೀಕರತೆ ಹೇಳ್ತಿದೆ.ಹರಿದಿರುವ ಕಾರಿನ ಸೀಟ್ ಗಳು ಅತ್ಯಾಚಾರದ ಭಯಾನಕತೆ ಬಿಚ್ಚಿಡ್ತಿದೆ..ಮಾರ್ಚ್ 25 ರ ರಾತ್ರಿ 9.30 ಕ್ಕೆ ಯುವತಿಯೊಬ್ಬಳು ನ್ಯಾಷನಲ್ ಗೇಮ್ಸ್ ವಿಲೇಜ್ ನ  ಪಾರ್ಕ್ ನಲ್ಲಿ ಸ್ಬೇಹಿತನ ಜೊತೆಗೆ ಕುಳಿತಿದ್ಳು.ಅಲ್ಲಿಗೆ ಆಗಮಿಸಿದ್ದ ಸತೀಶ್,ವಿಜಯ್,ಶ್ರೀಧರ್,ಕಿರಣ್ ಎಂಬ ಕಾಮುಕರು ಹೆದರಿಸಿ ಯುವತಿ ಜೊತೆಗಿದ್ದ ಸ್ನೇಹಿತನನ್ನ ಕಳುಹಿಸಿದ್ದಾರೆ.

ನಂತರ ಯುವತಿ ಜೊತೆಗೆ ಜಗಳ ತೆಗೆದಿದ್ದಾರೆ.ತಾವು ತಂದಿದ್ದ 800 ಕಾರಿನಲ್ಲೇ ಕಿಡ್ನಾಪ್ ಮಾಡಿದ್ದಾರೆ..ಕಾರಿನಲ್ಲಿ ದೊಮ್ಮಲೂರು.ಇಂದಿರಾನಗರ..ಹೊಸೂರು ರಸ್ತೆ..ಅತ್ತಿಬೆಲೆ..ಆನೇಕಲ್..ಸೇರಿ ನೈಸ್ ರಸ್ತೆಯಲ್ಲೆಲ್ಲ ಸುತ್ತಾಡಿಸಿದ್ದಾರೆ..ಚಲಿಸುತ್ತಿದ್ದ ಕಾರಿನಲ್ಲಿಯೇ ನಾಲ್ವರು ಸೇರಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ.ಕಾರಿನಲ್ಲಿಯೇ ನರಕ ತೋರಿಸಿದ್ದಾರೆ.ರಾತ್ರಿ 9.30 ಗಂಟೆಗೆ ಕಿಡ್ನಾಪ್ ಮಾಡಿಕೊಂಡು ಹೋದ ಆರೋಪಿಗಳು 26 ರ ಬೆಳಗಿನ ಜಾವ 3.30 ಗಂಟೆಗೆ ಯುವತಿ ಮನೆ ರಸ್ತೆಯಲ್ಲಿ ಎಸೆದು ಪರಾರಿಯಾಗಿದ್ದಾರೆ.ನಂತರ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಯುವತಿ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ತಕ್ಷಣ ಫೀಲ್ಡಿಗಿಳಿದ ಕೋರಮಂಗಲ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.ಅದೇನೆ ಹೇಳಿ ಪದೇ ಪದೇ ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿರುವ ಇಂತಹ ಪೈಶಾಚಿಕ ಕೃತ್ಯ ಜನ ಬೆಚ್ಚಿಬೀಳುವಂತೆ ಮಾಡ್ತಿದೆ.ಸಿಟಿ ಪೊಲೀಸರು ಕಠಿಣ ಕ್ರಮ ಜರುಗಿಸಿ ಇಂತಹ ಕೃತ್ಯಕ್ಕೆ ಬ್ರೇಕ್ ಹಾಕಬೇಕಿದೆ
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

173 ಪ್ರಯಾಣಿಕರಿದ್ದ ವಿಮಾನದಲ್ಲಿ ಟೇಕ್ ಆಫ್‌ಗೆ ಮುನ್ನ ಬೆಂಕಿ ಅವಘಡ: ಭಯಾನಕ ವಿಡಿಯೋ ಇಲ್ಲಿದೆ

Thailand vs Cambodia war:ಯುದ್ಧ ನಿಲ್ಲಿಸದಿದ್ರೆ ವ್ಯಾಪಾರ ಬಂದ್: ಡೊನಾಲ್ಡ್ ಟ್ರಂಪ್ ಬೆದರಿಕೆ

ನಾಲ್ವಡಿ ಕೃಷ್ಣರಾಜ ಒಡೆಯರ್ ನಾಡಿಗೆ ನೀಡಿದ ಕೊಡುಗೆಗಳ ಪಟ್ಟಿ ಇಲ್ಲಿದೆ ನೋಡಿ

ನಾಲ್ವಡಿ ಒಡೆಯರ್ ಗಿಂತ ನೀವು ಗ್ರೇಟ್ ಅಂತೆ ಎಂದು ಕೇಳಿದ್ದಕ್ಕೆ ಸಿದ್ದರಾಮಯ್ಯ ಉತ್ತರ ನೋಡಿ

ಸಿದ್ದರಾಮಯ್ಯ ಒಡೆಯರ್ ಗಿಂತ ಗ್ರೇಟ್ ಎಂದಿದ್ದ ಯತೀಂದ್ರ: ಯದುವೀರ್ ಒಡೆಯರ್ ಉತ್ತರ ನೋಡಿ

ಮುಂದಿನ ಸುದ್ದಿ
Show comments