Select Your Language

Notifications

webdunia
webdunia
webdunia
webdunia

ಹಾಸನದಲ್ಲಿ ಪ್ರಿಯಕರ, ಬೆಂಗಳೂರಿನಲ್ಲಿ ಪ್ರೇಯಸಿ ಆತ್ಮಹತ್ಯೆ

ಹಾಸನದಲ್ಲಿ ಪ್ರಿಯಕರ, ಬೆಂಗಳೂರಿನಲ್ಲಿ ಪ್ರೇಯಸಿ ಆತ್ಮಹತ್ಯೆ
ಬೆಂಗಳೂರು , ಶನಿವಾರ, 7 ಮೇ 2016 (11:39 IST)
ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡ ಎಂಬ ವಿಚಾರ ತಿಳಿದು ಪ್ರೇಯಸಿಯೂ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹಾಸನದಲ್ಲಿ ನಿನ್ನೆ ರಾತ್ರಿ ರಾಘವೇಂದ್ರ ನೇಣಿಗೆ ಶರಣಾಗಿದ್ದ. ಈ ಕುರಿತು ಪೊಲೀಸರು ಬೆಂಗಳೂರಿನ ವಿಜಯನಗರದ ನಿವಾಸಿಯಾಗಿರುವ ಆತನ ಪ್ರೇಮಿ ಅನು (24) ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಇದರಿಂದ ಮನನೊಂದ ಅನು ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
 
ಕಳೆದ ಏಳು ವರ್ಷಗಳ ಹಿಂದೆ ಹಾಸನದಿಂದ ಬೆಂಗಳೂರಿಗೆ ಬಂದಿದ್ದ ರಾಘವೇಂದ್ರ ಟಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ದುಡಿದ ಹಣದಲ್ಲಿ ಒಂದು ಕಾರ್ ಕೂಡ ಕೊಂಡಿದ್ದ. ಒಂದು ವರ್ಷದ ಹಿಂದೆ ಆತನಿಗೆ ಅನು ಎಂಬ ಯುವತಿಯ ಜತೆ ಪ್ರೀತಿಯಾಗಿತ್ತು. ಅತಿಯಾಗಿ ಹಚ್ಚಿಕೊಂಡಿದ್ದ ಅವರು ಮದುವೆ ಮಾಡಿಕೊಳ್ಳಲು ನಿಶ್ಚಯಿಸಿದ್ದರು. ರಾಘವೇಂದ್ರ ಮನೆಯಲ್ಲಿ ಸಹ ಇದಕ್ಕೆ ಒಪ್ಪಿಗೆ ಇತ್ತು. ಆದರೆ ಅನು ಮನೆಯವರಿಗೆ ಅದು ಇಷ್ಟವಿರಲಿಲ್ಲ. ಕಾರ್ ಚಾಲಕನಿಗೆ ಉಪನ್ಯಾಸಕಿ ಆಗಿರುವ ಮಗಳನ್ನು ಮದುವೆ ಮಾಡಿಸಿದರೆ ಕೌಟುಂಬಿಕ ಸ್ಥಾನಮಾನಕ್ಕೆ ಧಕ್ಕೆಯಾಗುತ್ತದೆ ಎಂಬುದು ಅವರ ಯೋಚನೆಯಾಗಿತ್ತು. ಹೀಗಾಗಿ ಮಗಳಿಗೆ ಕೆಲ ತಿಂಗಳ ಹಿಂದೆ ಪ್ರಶಾಂತ್ ಎಂಬುವನ ಜತೆ ಮದುವೆ ನಿಶ್ಚಯಿಸಿದ್ದರು. ಇದರಿಂದ ನೊಂದ ಪ್ರೇಮಿ ರಾಘವೇಂದ್ರ ಆತ್ಮಹತ್ಯೆಗೆ ಶರಣಾಗಿದ್ದ. ಪ್ರೇಮಿ ಕೊನೆಯುಸಿರೆಳೆದನೆಂದು ಅನು ಕೂಡ ಸಾವಿಗೆ ಶರಣಾಗಿದ್ದಾಳೆ. ಸಾವಿಗೆ ಮುನ್ನ ರಾಘವೇಂದ್ರ ನಾಲ್ಕು ಪುಟುಗಳ ಡೆತ್ ನೋಟ್ ಬರೆದಿಟ್ಟಿದ್ದಾರೆ. 
 
ಕೇವಲ ಆರ್ಥಿಕ ಸ್ಥಾನಮಾನದ ಪ್ರಶ್ನೆ ಮುಗ್ಧ ಪ್ರೇಮಿಗಳನ್ನು ಬಲಿ ತೆಗೆದುಕೊಂಡಿದ್ದು ವಿಪರ್ಯಾಸವೇ ಸರಿ. 

Share this Story:

Follow Webdunia kannada

ಮುಂದಿನ ಸುದ್ದಿ

ಯುವಕರನ್ನು ಆಕರ್ಷಿಸಲು ವೊಡಾಫೋನ್‌ನಿಂದ 'ಯು' ಪ್ಯಾಕ್ ಬಿಡುಗಡೆ