Select Your Language

Notifications

webdunia
webdunia
webdunia
webdunia

Lok Sabha Election 2024 result:ತಮ್ಮ ಗೆಲುವಿಗೆ ಕಾರಣವೇನೆಂದು ತಿಳಿಸಿದ ಡಾ ಸಿಎನ್ ಮಂಜುನಾಥ್

Dr CN Manjunath

Krishnaveni K

ಬೆಂಗಳೂರು , ಮಂಗಳವಾರ, 4 ಜೂನ್ 2024 (15:47 IST)
ಬೆಂಗಳೂರು: ಈ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಫಲಿತಾಂಶ ಏನಾಗಲಿದೆಯೋ ಎಂಬ ಕುತೂಹಲ ಎಲ್ಲರಲ್ಲಿತ್ತು. ಅದರಂತೇ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ರನ್ನು ಸೋಲಿಸಿ ಬಿಜೆಪಿ ಅಭ್ಯರ್ಥಿ ಡಾ ಸಿಎನ್ ಮಂಜುನಾಥ್ ಗೆಲುವು ಸಾಧಿಸಿದ್ದಾರೆ.

ಗೆಲುವಿನ ಬಳಿಕ ಮಾತನಾಡಿದ ಮಂಜುನಾಥ್ ತಮ್ಮ ಗೆಲುವಿನ ಕಾರಣವೇನೆಂದು ಹಂಚಿಕೊಂಡಿದ್ದಾರೆ. ಕಾರ್ಯಕರ್ಯರೊಂದಿಗೆ ಗೆಲುವಿನ ಸಂಭ್ರಮಾಚರಣೆ ಮಾಡಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

ಕಳೆದ 40 ವರ್ಷಗಳಿಂದ ಜಯದೇವ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞನಾಗಿ ಸಾವಿರಾರು ಮಂದಿಗೆ ಚಿಕಿತ್ಸೆ ನೀಡಿದ್ದೇನೆ. ಲಕ್ಷಾಂತರ ಜನರಿಗೆ ಚಿಕಿತ್ಸೆ ನೀಡಿದ್ದು ಈ ರೂಪದಲ್ಲಿ ನೆರವಿಗೆ ಬಂದಿದೆ.  ನಾನು ಹಲವು ಕಡೆ ಭೇಟಿಯಾದಾಗ ನನ್ನಿಂದ ಚಿಕಿತ್ಸೆ ಪಡೆದ 10-15 ಸಿಗುತ್ತಿದ್ದರು. ಅವರು ಡಾಕ್ಟರ್ ಗೆಲ್ಲಬೇಕೆಂದು ಬಯಸಿದ್ದರು. ಇದರಿಂದಾಗಿಯೇ ನನಗೆ ಗೆಲುವು ಸಾಧ್ಯವಾಯಿತು ಎಂದು ಮಂಜುನಾಥ್ ಹೇಳಿದ್ದಾರೆ.

ಅಷ್ಟೇ ಅಲ್ಲದೆ, ಒಂದು ವೇಳೆ ಹೊಸ ಸರ್ಕಾರ ರಚನೆಯಾಗಿ ಅದರಲ್ಲಿ ಆರೋಗ್ಯ ಮಂತ್ರಿಯಾದರೆ ಆಯುಷ್ಮಾನ್ ಭಾರತ್ ಯೋಜನೆಗೆ ಮತ್ತಷ್ಟು ಹೊಸ ರೂಪ ನೀಡುವುದಾಗಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದಕ್ಷಿಣ ಕನ್ನಡದಲ್ಲಿ 22 ಸಾವಿರಕ್ಕೂ ಅಧಿಕ ನೋಟಾಕ್ಕೆ ಮತ: ಇದು ರಾಜ್ಯದಲ್ಲೇ ಅತ್ಯಧಿಕ