Publish Date: Fri, 04 Jun 2021 (09:33 IST)
Updated Date: Fri, 04 Jun 2021 (09:34 IST)
ಬೆಂಗಳೂರು: ರಾಜ್ಯ ಸರ್ಕಾರ ಮುಂದಿನ ವಾರಕ್ಕೆ ಲಾಕ್ ಡೌನ್ ವಿಸ್ತರಿಸಿದೆ. ಆದರೆ ಒಂದು ವಾರದ ಬಳಿಕ ಅನ್ ಲಾಕ್ ಮಾಡಿದರೂ ಮೈಮರೆಯುವಂತಿಲ್ಲ.
ಇಷ್ಟು ದಿನ ಲಾಕ್ ಡೌನ್ ಅನುಭವಿಸಿ, ಈಗ ಅನ್ ಲಾಕ್ ಮಾಡಿದ ತಕ್ಷಣ ಹೊರ ಹೋಗಲು ಜನರಿಗೆ ಅತಿಯಾದ ಉತ್ಸಾಹವಿರುವುದು ಸಹಜ. ಹೇಗಿದ್ದರೂ ಕೊರೋನಾ ಕಡಿಮೆಯಾಗಿದೆ ಎಂಬ ಉಡಾಫೆಯಲ್ಲಿ ಮೈಮರೆತರೆ ಮತ್ತೆ ಪರಿಸ್ಥಿತಿ ಕೈ ಮೀರಿ ಹೋಗಲಿದೆ.
ಹೀಗಾಗಿ ಲಾಕ್ ಡೌನ್ ಮುಗಿಯಿತೆಂದು ಅತಿಯಾದ ಓಡಾಟ, ಸುರಕ್ಷತೆ ಮರೆತರೆ ಮತ್ತೆ ಮನೆಯೊಳಗೇ ಕೂರುವ ಪರಿಸ್ಥಿತಿ ಬಂದೀತು. ಎಲ್ಲವನ್ನೂ ಸರ್ಕಾರಗಳೇ ಮಾಡಲು ಸಾಧ್ಯವಿಲ್ಲ. ನಮ್ಮ ಎಚ್ಚರಿಕೆಯಲ್ಲಿ ನಾವಿರುವುದು ಮುಖ್ಯ.