Webdunia - Bharat's app for daily news and videos

Install App

ಹುಬ್ಬಳ್ಳಿಯಲ್ಲಿ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ನಾಲ್ವರ ರಕ್ಷಣೆ

Webdunia
ಬುಧವಾರ, 13 ಸೆಪ್ಟಂಬರ್ 2017 (14:56 IST)
ಹುಬ್ಬಳ್ಳಿ: ಹಳ್ಳದಲ್ಲಿ‌ಕೊಚ್ಚಿ ಹೋಗುತ್ತಿದ್ದ ನಾಲ್ವರನ್ನು ಸ್ಥಳೀಯರೇ ರಕ್ಷಿಸಿರುವ ಘಟನೆ ನವಲಗುಂದ ತಾಲೂಕಿನ ಶಿರೂರು ಮತ್ತು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇನಾಮಹೊಂಗಲ್ ಗ್ರಾಮದ ಮಧ್ಯೆ ನಡೆದಿದೆ.

ಭಾರೀ ಮಳೆಯಿಂದಾಗಿ ಕಲ್ಲಾಳ ಹಳ್ಳ  ಮತ್ತು ತುಪರಿ ಹಳ್ಳಿಗಳಿಂದ ಪ್ರವಾಹ ಹೆಚ್ಚಾಗಿದೆ. ಸಂಜೆಯಾಗುತ್ತಿದ್ದಂತೆ ಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಅದರ ಪರಿವೇ ಇಲ್ಲದೆ ಇಬ್ಬರು ಚಾಲಕರು ಎರಡು ಆಟೋಗಳನ್ನ ಹಳ್ಳ ದಾಟಿಸುವ ಯತ್ನ ಮಾಡಿದ್ದಾರೆ. ಆದಷ್ಟು ಬೇಗನೆ ಶಿರೂರು ಗ್ರಾಮ ತಲುಪುವ ಧಾವಂತದಲ್ಲಿದ್ದರು. ಆಟೋ ಚಾಲಕ ಮುಕ್ತುಂ, ಹನುಮಂತ ಲಕ್ಕಣ್ಣನವರ ಜತೆ ಇಬ್ಬರು ಪ್ರಯಾಣಿಕರ ಜತೆ ಹಳ್ಳದ ಮಧ್ಯೆ ಬರುತ್ತಿದ್ದಂತೆ ಪ್ರವಾಹ ಹೆಚ್ಚಾಗಿದೆ. ನೀರಿನ ರಭಸಕ್ಕೆ ಎರಡು ಆಟೋಗಳು ಕೊಚ್ಚಿ ಹೋಗಿವೆ.

ಇಬ್ಬರು ಚಾಲಕರು ಈಜಿ ದಡ ಸೇರಿದ್ದು, ಉಳಿದಿಬ್ಬರು ನೀರಿನಲ್ಲಿ ಕೊಚ್ಚಿಹೋಗಿ ಹೈಟೆನ್ಷನ್ ಕಂಬವೇರಿದ್ದರಾರೆ. ಸವದತ್ತಿ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿದರೂ, ಪ್ರವಾಹದ ಮಧ್ಯೆ ಅವರನ್ನು ಹೊರ ತರುವುದು ಕಷ್ಟವಾಗಿತ್ತು. ಒಂದು ಗಂಟೆ ಬಳಕ ಪ್ರವಾಹ ಇಳಿಯುತ್ತಿದ್ದಂತೆಯೇ ಗ್ರಾಮದ ಇಪ್ಪತ್ತರಿಂದ ಮೂವತ್ತು ಯುವಕರು ರಕ್ಷಣಾ ಕಾರ್ಯಕ್ಕೆ ಸಹಕರಿಸಿದ್ದು, ವಿದ್ಯುತ್ ಕಂಬವೇರಿದ್ದ ಸಂತೋಷ ಚಚಡಿ, ಆನಂದ ಚಚಡಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments