ಪುರಾತನ ಬಾವಿಗೆ ಜನಜೀವನ ತತ್ತರ!

Webdunia
ಭಾನುವಾರ, 12 ಆಗಸ್ಟ್ 2018 (16:53 IST)
ಉತ್ತರ ಕರ್ನಾಟಕ ಜನ್ರು ತೆರೆದ ಕೊಳವೆ ಬಾವಿ ಅಂದ್ರೆ ಸಾಕು ಗಢ-ಗಢ ಅಂತ ನಡುಗ್ತಾರೆ. ಯಾಕಂದ್ರೆ ತೆರೆದ ಕೊಳವೆ ಬಾವಿಗೆ ಬೀಳುವ ಮುಗ್ದ ಮಕ್ಕಳ ಸಂಖ್ಯೆ ಉತ್ತರ ಕರ್ನಾಟಕದಲ್ಲೆ ಜಾಸ್ತಿ.

ಇಂಥ ಸನ್ನಿವೇಶದಲ್ಲಿ ಗದಗ ಜಿಲ್ಲೆಯಲ್ಲಿ ಒಳಚರಂಡಿ ಕಾಮಗಾರಿ ವೇಳೆ ಪುರಾತನ ಬಾವಿಯೊಂದು ಪತ್ತೆಯಾಗಿದೆ. ಆದ್ರೆ ನಡು ರಸ್ತೆಯ ಬಾವಿ ಮುಚ್ಚದೇ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ. ಹೀಗಾಗಿ ಆ ಪಟ್ಟಣದ ಜನ್ರು ಭಯದಲ್ಲಿ ಕಾಲಕಳೆಯುತ್ತಿದ್ದಾರೆ.
ಕಾಮಗಾರಿ ಪ್ರಾರಂಭದಲ್ಲಿ ಗುತ್ತಿಗೆದಾರನಿಗೆ ಪುರಾತನ ಕಾಲದ ಬಾವಿ ಸಿಕ್ಕಿದೆ. ಆ ಬಾವಿ ನೋಡುತ್ತಿದಂತೆ ಕಾಮಗಾರಿಯನ್ನು ಹಾಗೆ ಬಿಟ್ಟು ಓಡಿ ಹೋಗಿದ್ದಾನೆ ಗುತ್ತಿಗೆದಾರ. ತೆರೆದ ಬಾವಿ ನೋಡಿ  ಪಟ್ಟಣದ ಜನರು ಕಂಗಾಲಾಗುವಂತೆ ಆಗಿದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಪೇಠಬಣದ ಕಾಲೋನಿಯಲ್ಲಿ ಈ ಚಿತ್ರಣ ಕಂಡುಬರುತ್ತಿದೆ.  ಈ ಬಡಾವಣೆಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಕಾಮಗಾರಿ ನಡೆದಿದೆ. ಈ ವೇಳೆ ಜೆಸಿಬಿಯಿಂದ ಗುಂಡಿ ತೋಡುತ್ತಿದ್ದಾಗ ಬಂಡೆಗಲ್ಲು ಕಾಣಿಸಿದೆ. ಆ ಬಂಡೆಕಲ್ಲನ್ನು ತೆಗೆದಾಗ ಸುಮಾರು ನೂರಾರು ಅಡಿ ಆಳದ ಹಳೇ ಬಾವಿ ಪತ್ತೆಯಾಗಿದೆ. ಈ ವೇಳೆ ಬಾವಿ ಮುಚ್ಚದೇ ಜೆಸಿಬಿ ಚಾಲಕ ಅರ್ಧಕ್ಕೆ ಬಿಟ್ಟು ಓಡಿ ಹೋಗಿದ್ದಾರೆ. ಅಪಾಯಕಾರಿ ಬಾವಿ ತೆರೆದು ಎರಡು ದಿನಗಳಾದ್ರೂ ಮುಚ್ಚುವ ಗೋಜಿಗೆ ಹೋಗಿಲ್ಲ. ಇದು ಆ ಬಡಾವಣೆ ಜನ್ರ ಆತಂಕಕ್ಕೆ ಕಾರಣವಾಗಿದೆ.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜ್ಯಕ್ಕೆ ಡಿ.ಕೆ, ಕಾಂಗ್ರೆಸ್‌ಗೆ ಬಿ.ಕೆ: ಹರಿಪ್ರಸಾದ್ ನೂತನ ಕೆಪಿಸಿಸಿ ಅಧ್ಯಕ್ಷ

ಸಿಎಂ ಆದ ಬೆನ್ನಲ್ಲೇ ವಿದ್ಯಾರ್ಥಿಗಳಿಗೆ ಬಂಪರ್ ಯೋಜನೆ ಘೋಷಿಸಿದ ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದ ಹಾಗೇ ಮುನಿಸು ಮರೆತು ವಿಶೇಷವಾಗಿ ವಿಶ್ ಮಾಡಿದ ಎಚ್ ಡಿ ಕುಮಾರಸ್ವಾಮಿ

ಎಷ್ಟು ಸಿಂಪಲ್ ಇವರು.. ಪ್ರಮಾಣ ವಚನದ ಬಳಿಕ ನಡೆದುಕೊಂಡೇ ವಿಧಾನ ಸೌಧಕ್ಕೆ ಹೋದ ಕೃಷ್ಣ ಭೈರೇಗೌಡ: Video

ಸಿಎಂ ಪಟ್ಟಾಭಿಷೇಕದ ಬೆನ್ನಲ್ಲೇ ರಾಜ್ಯದ ಜನತೆಗೆ ವಿಶೇಷ ಸಂದೇಶ ನೀಡಿದ ಡಿಕೆ ಶಿವಕುಮಾರ್‌, ಪೋಸ್ಟ್ ಇಲ್ಲಿದೆ

ಮುಂದಿನ ಸುದ್ದಿ
Show comments