Publish Date: Sat, 21 Dec 2019 (11:27 IST)
Updated Date: Sat, 21 Dec 2019 (11:29 IST)
ಮಂಗಳೂರು : ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ತೀವ್ರ ಸ್ವರೂಪ ತಾಳಿದ್ದ ಮಂಗಳೂರು ಇಂದು ಶಾಂತವಾಗಿದ್ದರೂ ಕೂಡ ಪೊಲೀಸರು ಕೆಲವು ಯುವಕರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ.
ಪೌರತ್ವ ಗಲಾಟೆಯಿಂದ ಮಂಗಳೂರು ಶಾಂತವಾಗಿದ್ದು, ಇಂದೂ ಕೂಡ ಕರ್ಪ್ಯೂ ಜಾರಿಯಲ್ಲಿದೆ. ಹೀಗಾಗಿ ಯಾರು ಹೊರಗೆ ಓಡಾಡುವಂತಿಲ್ಲ.
ಆದರೆ ಕೆಲವು ಯುವಕರು ಏನೆನೋ ನೆಪ ಹೇಳಿಕೊಂಡು ಮನೆಯಿಂದ ಹೊರಗೆ ಬರಲು ಪ್ರಯತ್ನಿಸಿದ ಹಿನ್ನಲೆಯಲ್ಲಿ ನಗರದ ಸೆಂಟ್ರಲ್ ಮಾರ್ಕೆಟ್ ನಲ್ಲಿ ಪೊಲೀಸರು ಹೊರಗೆ ಬಂದ ಯುವಕರಿಗೆ ಲಾಠಿ ಏಟು ನೀಡಿದ್ದಾರೆ.