Webdunia - Bharat's app for daily news and videos

Install App

ಲಕ್ಷ ಲಕ್ಷ ರೂ. ದೋಖಾ ಮಾಡಿದ ಬ್ಯಾಂಕಿಂಗ್ ಕೋಚಿಂಗ್ ಸೆಂಟರ್

Webdunia
ಶನಿವಾರ, 24 ಆಗಸ್ಟ್ 2019 (17:00 IST)
ಕೋಚಿಂಗ್ ಸೆಂಟರ್ ನ್ನು ನಂಬಿ ಕೈ ಸುಟ್ಟುಕೊಂಡ ವಿದ್ಯಾರ್ಥಿಗಳ ಗೋಳು ಒಂದು ಕಡೆಯಾದರೆ, ವಿದ್ಯಾರ್ಥಿಗಳಿಗೆ ಮೋಸ ಮಾಡಿ ಕೋಚಿಂಗ್ ಸೆಂಟರ್ ಗೆ ಬೀಗ ಜಡಿದು ರಾತ್ರೋ ರಾತ್ರಿ ಪರಾರಿಯಾಗಿದ್ದಾರೆ ಆರೋಪಿಗಳು.

ಈ ಘಟನೆ ನಡೆದಿರುವುದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ  ನಗರದಲ್ಲಿ. ಆಂಧ್ರ ಪ್ರದೇಶದಿಂದ‌ ಕರ್ನಾಟಕ ಗಡಿಭಾಗವಾದ  ಚಿಂತಾಮಣಿ  ನಗರಕ್ಕೆ ಬಂದು,  ನಿರುದ್ಯೋಗ ವಿದ್ಯಾರ್ಥಿಗಳಿಗೆ ಲೈಫ್ ಟೈಮ್ ತರಬೇತಿ ಕೊಡುತ್ತೇವೆಂದು ನಂಬಿಸಿ, ಪ್ರತಿ  ವಿದ್ಯಾರ್ಥಿಯ ಬಳಿ ಹನ್ನೆರಡು ಸಾವಿರ ಹಣ ಕಸಿದುಕೊಂಡು  ಮೋಸ ಮಾಡಿ ರಾತ್ರೋ ರಾತ್ರಿ ಕೋಚಿಂಗ್ ನಡೆಸುತ್ತಿದ್ದ ಕೊಠಡಿಗೆ ಬೀಗ ಜಡಿದು ಗಂಟು ಮೂಟೆ ಕಟ್ಟಿಕೊಂಡು‌  ಪರಾರಿಯಾಗಿದ್ದಾರೆ.  ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಆಂಧ್ರ ಪ್ರದೇಶದ ಕಡಪ, ಚಿತ್ತೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇದೇ ರೀತಿ ಅಮಾಯಕ ನಿರುದ್ಯೋಗ ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟ ಆಡಿರುವುದು ಬೆಳಕಿಗೆ ಬಂದಿದೆ.

ಇನ್ನೂ ಈ ಬಗ್ಗೆ ವಿದ್ಯಾರ್ಥಿಗಳು ಪ್ರಶ್ನಿಸಿದರೆ, ನನಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗೊತ್ತು, ಜಗನ್ ಗೊತ್ತು ಅಂತ ನಿಮ್ಮ ಕೈಯಲ್ಲಿ ಏನೂ  ಸಾಧ್ಯವಿಲ್ಲವೆಂದು ಕೋಚಿಂಗ್ ನಡೆಸಿದೋರು ಧಮ್ಕಿ ಹಾಕುತ್ತಾರಂತೆ.  ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಟರ್ನಿಂಗ್ ಪಾಯಿಂಟ್ ಕೋಚಿಂಗ್ ಸೆಂಟರ್ ವಿರುದ್ಧ ಪೊಲೀಸರಿಗೆ ದೂರನ್ನು ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕ್ರೀಡಾ ಸಾಮಾಗ್ರಿ ಖರೀದಿಸುವಾಗ ಎಚ್ಚರ ತಪ್ಪಿದ್ರೆ ಆಗುತ್ತೆ ಪಂಗನಾಮ

ಧರ್ಮಸ್ಥಳ ಬುರುಡೆ ರಹಸ್ಯ: ಯಾವಾಗ ಕೈ ಸೇರುತ್ತೆ ಗೊತ್ತಾ ಎಫ್‌ಎಸ್‌ಎಲ್ ವರದಿ

ಮೂಡುಬಿದಿರೆ, ಬಸ್‌ನಲ್ಲಿ ಯುವತಿಯೊಂದಿಗೆ ಅನುಚಿತ ವರ್ತನೆ, ವ್ಯಕ್ತಿ ಅರೆಸ್ಟ್‌

ಧರ್ಮಸ್ಥಳ ಕೇಸ್ ರಹಸ್ಯ ಬಯಲಾಗುತ್ತಿದ್ದಂತೇ ಮಹತ್ವದ ಹೇಳಿಕೆ ಕೊಟ್ಟ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

11ದಿನಗಳಿಂದ ಆಪ್ತ ಸ್ನೇಹಿತೆ ನಾಪತ್ತೆ, ದೂರು ನೀಡಿದಾಗ ಬಯಲಾಯಿತು ಭಯಾನಕ ರಹಸ್ಯ

ಮುಂದಿನ ಸುದ್ದಿ
Show comments