Webdunia - Bharat's app for daily news and videos

Install App

ಕುಂಭಮೇಳಕ್ಕೆ ವಯಸ್ಕರು, ಮಕ್ಕಳು ಹೋಗಬಹುದೇ, ಈಗಾಗಲೇ ಹೋಗಿರುವವರ ಸಲಹೆ ನೋಡಿ

Krishnaveni K
ಬುಧವಾರ, 29 ಜನವರಿ 2025 (14:21 IST)
Photo Credit: X
ಪ್ರಯಾಗ್ ರಾಜ್: ಕುಂಭಮೇಳದಲ್ಲಿ ಇಂದು ಕಾಲ್ತುಳಿತದ ವಿಚಾರ ತಿಳಿಯುತ್ತಿದ್ದಂತೇ ಅನೇಕರಲ್ಲಿ ಆತಂಕ ಮನೆ ಮಾಡಿದೆ. ಕುಂಭಮೇಳಕ್ಕೆ ವಯಸ್ಕರು, ಮಕ್ಕಳು ಹೋಗುವುದು ಸುರಕ್ಷಿತವೇ ಎಂಬ ಅನುಮಾನ ಮೂಡಿದೆ. ಅದಕ್ಕೆ ಈಗಾಗಲೇ ಹೋಗಿರುವ ಅನುಭವಿಯೊಬ್ಬರ ಸಲಹೆಗಳನ್ನು ನೋಡಿ.

ಶೋಭಾ ಮಳವಳ್ಳಿ ಎಂಬವರು ಕುಂಭಮೇಳಕ್ಕೆ ಹೋಗಿದ್ದಾರೆ. ಇದೀಗ ಕಾಲ್ತುಳಿತದ ಸುದ್ದಿ ತಿಳಿಯುತ್ತಿದ್ದಂತೇ ತಮ್ಮ ಫೇಸ್ ಬುಕ್ ಮುಖಾಂತರ ಕುಂಭಮೇಳಕ್ಕೆ ಹೋಗಲು ಪ್ಲ್ಯಾನ್ ಮಾಡಿಕೊಂಡಿರುವವರಿಗೆ ಕೆಲವೊಂದು ಸೂಚನೆಗಳನ್ನು, ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅವರ ಸಲಹೆ, ಸೂಚನೆಗಳ ವಿವರ ಇಲ್ಲಿದೆ ನೋಡಿ.

1. ಯಾರು ಬೇಕಾದರೂ ಬರಬಹುದು. ಶಿವರಾತ್ರಿಯೊಳಗೆ. ಜೀವನದಲ್ಲಿ ಒಮ್ಮೆಯಷ್ಟೇ ಅವಕಾಶ ಸಿಗುವಂಥದ್ದು. ಆದರೆ, ಸರಿಯಾದ ಪ್ಲಾನ್ ಮಾಡಬೇಕು.
2. ನೇರವಾಗಿ ಪ್ರಯಾಗ್ ರಾಜ್ ಗೆ ಹೋಗುವುದಾ? ಅಯೋಧ್ಯೆ ಗೆ ನೋಡಿ ಕುಂಭಮೇಳ ತಲುಪುವುದಾ ? ಯೋಚಿಸಿ.
3. ವಿಮಾನ ಪ್ರಯಾಣ ತುಂಬಾ ದುಬಾರಿಯಾಗಿದೆ. ಬೆಂಗಳೂರು ಟು ಪ್ರಯಾಗ್ ರಾಜ್ ನೇರ ವಿಮಾನವಿದೆ. ಇವತ್ತಿನ ಟಿಕೆಟ್‌ದರ 50 ಸಾವಿರ ದಾಟಿದೆ.
ಸದ್ಯಕ್ಕೆ ಫ್ಲೈಟ್ ‌ಟಿಕೆಟ್ ದರ ಇಳಿಯುವ ಸಾಧ್ಯತೆಯೇ ಇಲ್ಲ. ಅಷ್ಟು ಬೇಡಿಕೆ ಇದೆ. ಅದನ್ನೇ ಅಸ್ತ್ರವಾಗಿಸಿಕೊಂಡು, ವಿಮಾನ ಸಂಸ್ಥೆಗಳು ದುಡ್ಡು ‌ದೋಚುತ್ತಿವೆ.
4. ರೈಲಿನಲ್ಲೂ ಟಿಕೆಟ್ ಸಿಗುವುದು ಕಷ್ಟವಿದೆ. ಅಲ್ಲದೇ ರೈಲಿನಲ್ಲಿ ಎರಡು ದಿನ ಬೇಕು. ರೈಲಿನಲ್ಲಿ‌ ಹೋಗುವುದಾದರೂ ಮುಂಚಿತವಾಗಿ ಟಿಕೆಟ್ ಬುಕ್ ಮಾಡಬೇಕು. ಟಿಕೆಟ್ ಸಿಗ್ತಿದೆಯಾ ಚೆಕ್‌ ಮಾಡಿಕೊಳ್ಳಿ.
4. 10 ರಿಂದ‌ 20‌ ಜನ ಸೇರಿ ಟೆಂಪೋ ಟ್ರಾವಲ್ ನಲ್ಲಿ ಬರಬಹುದು. ಆದ್ರೆ ವಿಪರೀತ ‌ವಾಹನ ದಟ್ಟಣೆ ಇದೆ. ಅಲ್ಲದೇ, ಸಿಟಿ ಹೊರಗೆ 10 ರಿಂದ‌ 15 km ದೂರದಲ್ಲೇ ವಾಹನ ನಿಲ್ಲಿಸಿಬಿಡ್ತಾರೆ. ಅಲ್ಲಿಂದ ಆಟೋ ಮಾಡಿಕೊಂಡ‌ ಬರಬೇಕು.
ಆಟೋಗಳು ಹಣ‌ ಸುಲಿಗೆ ಮಾಡುತ್ತಿವೆ.
5. ಅಯೋಧ್ಯೆ, ‌ಪ್ರಯಾಗ್ ರಾಜ್,‌‌ ಕುಂಭಮೇಳ, ಕಾಶಿ ಎಲ್ಲೆಡೆ ಕಾಲ್ನಡಿಗೆಯಲ್ಲೇ ತೆರಳಬೇಕು. ಕನಿಷ್ಠ ‌5 ರಿಂದ 10km , ಅದಕ್ಕೂ ‌ಹೆಚ್ಚು ನಡೆಯಬೇಕಾಗಬಹುದು.
ಮಂಡಿ ನೋವಿರುವವರು ಯೋಚಿಸಿ.
ಮುಖ್ಯವಾಗಿ ವಿಪರೀತ ಚಳಿ‌ ಇದೆ. ಉಸಿರಾಟದ ಸಮಸ್ಯೆ ‌ಇರುವವರಿಗೆ ಬ್ಯಾಡ್ ವೆದರ್.
6. ಊಟ- ತಿಂಡಿ ಬಗ್ಗೆ ‌ಹೆಚ್ಚಿನ ನಿರೀಕ್ಷೆ ಇಟ್ಕೊಬೇಡಿ. ಸಿಕ್ಕಿದ ಕಡೆ ತಿಂದು ಹೊಟ್ಟೆ ತಂಬಿಸಿಕೊಳ್ಳಬೇಕು. ಆದ್ರೆ ಸಿಕ್ಕಿದ್ದೆಲ್ಲ ತಿಂದರೆ‌ ಹೊಟ್ಟೆ ಸಮಸ್ಯೆ. ವಾಂತಿ, ಬೇಧಿ, ಗಂಟಲುನೋವು‌ ಕಾಡಬಹುದು (ಎಲ್ಲರಿಗೂ ಅಲ್ಲ)
ಇಷ್ಟೆಲ್ಲ ‌ಪರಿಸ್ಥಿತಿ ಎದುರಿಸಲು ಸಿದ್ಧ, ಏನಾದರೂ ‌ಸರಿ ಕುಂಭಮೇಳಕ್ಕೆ ಹೋಗೋಣ, ಪುಣ್ಯ ಸ್ನಾನ ಮಾಡೋಣ ಅನ್ನೋದಾದ್ರೆ ಈಗಲೇ ‌ಪ್ಲಾನ್ ಮಾಡಿ, ಹೊರಡಿ..
ಅಷ್ಟಕ್ಕೂ 144 ವರ್ಷಕ್ಕೊಮ್ಮೆ ಬರುವ ಕುಂಭಮೇಳ. ಅನುಭವಿಸಿಯೇ ಸಾಯೋಣ ಅನ್ನಿಸುವಷ್ಟು‌ ರೋಚಕವಾಗಿದೆ..

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Caste census report: ಜಾತಿಗಣತಿ ವರದಿ ಹೊರಹಾಕಲು ಹೊರಟಿದ್ದ ಸಿಎಂ ಸಿದ್ದರಾಮಯ್ಯ ಗಪ್ ಚುಪ್ ಆಗಿದ್ದೇಕೆ

ವಕ್ಫ್ ತಿದ್ದುಪಡಿ ಕಾಯಿದೆ ತಂದಿದ್ದಕ್ಕೆ ಥ್ಯಾಂಕ್ಯೂ ಮೋದಿಜಿ ಎಂದು ಪ್ರಧಾನಿ ಭೇಟಿಯಾದ ಮುಸ್ಲಿಮರು: Video

ಕಾಂಗ್ರೆಸ್‌ ಜನಪೀಡಕ ಸರ್ಕಾರ: ಗುಡುಗಿದ ಬಿವೈ ವಿಜಯೇಂದ್ರ

Waqf Bill: ವಕ್ಫ್ ತಿದ್ದುಪಡಿ ಕಾಯ್ದೆಗೆ ಸುಪ್ರೀಂಕೋರ್ಟ್ ಅಂಕುಶ: ತೀರ್ಪಿನಲ್ಲಿ ಹೇಳಿದ್ದೇನು

ನಾವು ಹಾಲಿನ ದರ ಹೆಚ್ಚಳ ಮಾಡಿದ್ದು ರೈತರಿಗೆ ಸಿಗ್ತಿದೆ, ಮೋದಿ ಗ್ಯಾಸ್ ಸಬ್ಸಿಡಿ ರದ್ದು ಮಾಡಿದ್ದು ಯಾರಿಗೆ ಸಿಗ್ತಿದೆ: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments