Select Your Language

Notifications

webdunia
webdunia
webdunia
webdunia

ಸಾಕ್ಷ್ಯ ಸಮೇತ ಬಾಂಬ್ ಸಿಡಿಸಿ ಎಂದು ಯಡಿಯೂರಪ್ಪಗೆ ಕುಮಾರಸ್ವಾಮಿ ಸಲಹೆ

ಸಾಕ್ಷ್ಯ ಸಮೇತ ಬಾಂಬ್ ಸಿಡಿಸಿ ಎಂದು ಯಡಿಯೂರಪ್ಪಗೆ ಕುಮಾರಸ್ವಾಮಿ ಸಲಹೆ
Bangalore , ಭಾನುವಾರ, 12 ಫೆಬ್ರವರಿ 2017 (11:27 IST)
ಬೆಂಗಳೂರು: ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಗೆ 1000 ಕೋಟಿ ರೂ. ಕಪ್ಪ ನೀಡಿದ ಆರೋಪ ಮಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಇಂದು ಮತ್ತೊಂದು ಸಾಕ್ಷ್ಯ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

 
ಆದರೆ ಏನೇ ಆರೋಪ ಮಾಡುವುದಿದ್ದರೂ, ಸಾಕ್ಷ್ಯ ಸಮೇತ ಬಿಡುಗಡೆ ಮಾಡಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರ ಸ್ವಾಮಿ ಆಗ್ರಹಿಸಿದ್ದಾರೆ. ಅತ್ತ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡಾ ಯಡಿಯೂರಪ್ಪನವರು ತಮ್ಮ ವಿರುದ್ಧ ಮಾಡಿದ ಆರೋಪಗಳಿಗೆ ತಕ್ಕ ಸಾಕ್ಷ್ಯ ನೀಡಲಿ ಎಂದಿದ್ದಾರೆ.

ಹೀಗಾಗಿ ಇಂದು ಯಡಿಯೂರಪ್ಪನವರು ನಿನ್ನೆ ಹೇಳಿದಂತೆ ಯಾವುದೋ ಮಹತ್ವದ ಸಂಗತಿ ಬಹಿರಂಗಗೊಳಿಸಲಿದ್ದು, ಆಗ ಎಲ್ಲಾ ಆರೋಪಗಳಿಗೆ ತಕ್ಕ ಸಾಕ್ಷ್ಯ ನೀಡುತ್ತಾರಾ ಎಂದು ಕಾದು ನೋಡಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜಯಲಲಿತಾ ನಿವಾಸ ಸ್ಮಾರಕವಾಗಿಸಲು ಸಹಿ ಸಂಗ್ರಹ