ದೇವಾಲಯದ ಹುಂಡಿಗೆ ಹಣ ಹಾಕುವುದು ಅಸಹ್ಯ, ರಂಜಾನ್ ದಾನದ ಸಂದೇಶ ನೀಡುತ್ತದೆ: ಕುಂ. ವೀರಭದ್ರಪ್ಪ

Krishnaveni K
ಭಾನುವಾರ, 10 ಮಾರ್ಚ್ 2024 (08:48 IST)
Photo Courtesy: Twitter
ಬೆಂಗಳೂರು: ದೇವಾಲಯದ ಹುಂಡಿಗೆ ಹಣ ಹಾಕುವುದು ಅಸಹ್ಯಕರ. ಆದರೆ ಮುಸ್ಲಿಮರ ರಂಜಾನ್, ಹಜ್ ದಾನದ ಸಂದೇಶ ನೀಡುತ್ತದೆ ಎಂದು ಸಾಹಿತಿ ಕುಂ. ವೀರಭದ್ರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಕುಂ. ವೀರಭದ್ರಪ್ಪ ಇಂತಹದ್ದೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದೇವಾಲಯದ ಹುಂಡಿಗೆ ಹಣ ಹಾಕುವುದು ನಮ್ಮ ಪಾಪ ಕರ್ಮದ ಪ್ರಾಯಶ್ಚಿತ ಮಾಡುವುದಕ್ಕಾಗಿ ಅಷ್ಟೇ ಎಂದು ಅವರು ಹೇಳಿದ್ದಾರೆ. ಆದರೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮದಲ್ಲಿ ಇದಿಲ್ಲ ಎಂದು ಹೊಗಳಿದ್ದಾರೆ.

ದೇವರ ಹುಂಡಿಗೆ ಹಣ ಹಾಕುವುದು ನಮ್ಮ ಪಾಪವನ್ನು ರಿನಿವಲ್ ಮಾಡಿದಂತೆ. ನಾನು ಇಷ್ಟೊಂದು ಪಾಪ, ಭ್ರಷ್ಟಾಷಾರ, ಜನರನ್ನು ಹಾಳು ಮಾಡಿದ್ದೇನೆ. ದಯವಿಟ್ಟು ಇದನ್ನು ಮನ್ನಿಸು. ಹೊಸದಾಗಿ ಪಾಪ ಕೆಲಸ ಮಾಡಲು ಅವಕಾಶ ಮಾಡಿಕೊಡು ಎಂದು ಕೇಳಿದಂತೆ ಎಂದಿದ್ದಾರೆ.

ರೋಜಾ, ಹಜ್, ರಂಜಾನ್ ಹಬ್ಬ ಇನ್ನೇನು ಬರುತ್ತದೆ. ಇದು ದಾನ ಮಾಡುವ ಸಂದೇಶ ನೀಡುತ್ತದೆ. ಯೇಸು ಕ್ರಿಸ್ತ ಒಂದು ಕಪಾಳಕ್ಕೆ ಹೊಡೆದರೆ ಇನ್ನೊಂದು ಕಪಾಳ ತೋರಿಸು ಎಂದ. ಆದರೆ ತಿರುಪತಿಯಲ್ಲಿ ನಡೆಯುವುದು ಅಸಹ್ಯಕರವಾದದ್ದು ಎಂದು ವೀರಭದ್ರಪ್ಪ ಹೇಳಿದ್ದಾರೆ.

ದೇವರ ಹುಂಡಿಗೆ ಕೋಟಿಗಟ್ಟಲೆ ಬಂಗಾರ, ಹಣ ಹಾಕುವುದು ಅಸಹ್ಯಕರ. ಇದರ ಬಗ್ಗೆ ನಾನು ಹೆಚ್ಚು ಹೇಳಿದರೆ ಹಿಂದೂ ವಿರೋಧಿ, ಮುಸ್ಲಿಮರ ಪರವಿದ್ದೇನೆ ಎಂದು ಹಣೆಪಟ್ಟಿ ಕಟ್ಟುತ್ತಾರೆ. ದೇವರ ಹುಂಡಿಗೆ ಹಾಕುವ ಬದಲು ಬಡವರಿಗೆ ದಾನ ಮಾಡಿ ಎಂದು ಹೇಳಿದರು. ಅವರ ಈ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಬದಲಾವಣೆ ಸಾಧ್ಯನೇ ಇಲ್ಲ: ಬಸನಗೌಡ ಪಾಟೀಲ್

ಬಿಗ್ ಶಾಕ್‌, ಬಾವಿಗೆ ಹಾರಿ ಒಂದೇ ಕುಟುಂಬದ ನಾಲ್ವರು ಸಾವು

ದರೋಡೆಕೋರರ ಬೆಂಗಳೂರೇ, ಹಳ್ಳದ ಬೆಂಗಳೂರೇ, ಕಸದ ಬೆಂಗಳೂರೇ: ಆರ್.ಅಶೋಕ್

ಬಾಂಗ್ಲಾದೇಶದಲ್ಲಿ ಸಂಭವಿಸಿದ ಭೂಕಂಪಕ್ಕೆ ಕೋಲ್ಕತ್ತಾದಲ್ಲೂ ಶೇಕ್‌

ಮುನ್ಸೂಚನೆಯಂತೆ ಸಿಲಿಕಾನ್ ಸಿಟಿಗೆ ತಂಪೆರೆದ ವರುಣ

ಮುಂದಿನ ಸುದ್ದಿ
Show comments