ಬಸ್ ಮುಷ್ಕರ: ಊರಿಗೆ ಹೋಗಲು ಬಸ್ ಬುಕಿಂಗ್ ಮಾಡಬಹುದೇ, ಕೆಎಸ್ ಆರ್ ಟಿಸಿ ಹೇಳಿದ್ದೇನು

Krishnaveni K
ಮಂಗಳವಾರ, 5 ಆಗಸ್ಟ್ 2025 (16:39 IST)
ಬೆಂಗಳೂರು: ಇಂದಿನಿಂದ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೌಕರರು ಮುಷ್ಕರ ನಡೆಸುತ್ತಿದ್ದು, ಹೀಗಾಗಿ ಈ ವಾರಂತ್ಯಕ್ಕೆ ವರಮಹಾಲಕ್ಷ್ಮಿ ಹಬ್ಬಕ್ಕೆ ಊರಿಗೆ ತೆರಳಲು ಯೋಜನೆ ಹಾಕಿಕೊಂಡವರು ಬಸ್ ಬುಕಿಂಗ್ ಮಾಡಬಹುದೇ ಎಂಬ ಗೊಂದಲ್ಲಿದ್ದಾರೆ. ಅವರಿಗೆ ಕೆಎಸ್ ಆರ್ ಟಿಸಿ ಕಡೆಯಿಂದ ಸ್ಪಷ್ಟನೆ ಇಲ್ಲಿದೆ.
 

ಇಂದು ಬೆಳಿಗ್ಗೆಯಿಂದಲೇ ಸಾರಿಗೆ ನೌಕರರ ಮುಷ್ಕರದಿಂದಾಗಿ ಬಸ್ ಗಳಿಲ್ಲದೇ ಜನ ತೆರಳಬೇಕಾದ ಸ್ಥಳಕ್ಕೆ ತೆರಳಲು ಸಾಧ್ಯವಾಗದೇ ಪರದಾಡಿದ್ದಾರೆ. ದೂರದ ಊರುಗಳಿಗೆ ತೆರಳಿದವರು ಅಲ್ಲಿಂದ ಹೋಗಬೇಕಾದ ಸ್ಥಳಕ್ಕೆ ಹೋಗಲು ಬಸ್ ಗಳಿಲ್ಲದೇ ತೊಂದರೆ ಅನುಭವಿಸಿದ್ದಾರೆ.

ಇನ್ನೇನು ಈ ವಾರಂತ್ಯದಲ್ಲಿ ವರಮಹಾಲಕ್ಷ್ಮಿ ಹಬ್ಬ ಬಂದಿದ್ದು, ಅದರ ಮರುದಿನವೂ ಸೆಕೆಂಡ್ ಸಾಟರ್ಡೇ ನಿಮಿತ್ತ ರಜೆಯಿರುವುದರಿಂದ ಲಾಂಗ್ ವೀಕೆಂಡ್ ಸಿಕ್ಕಂತಾಗುತ್ತದೆ. ಈ ಕಾರಣಕ್ಕೆ ಅನೇಕರು ಈ ವಾರ ಊರಿಗೆ ತೆರಳುವ ಯೋಜನೆ ಹಾಕಿಕೊಂಡಿದ್ದಾರೆ.

ಆದರೆ ಈಗ ಬಸ್ ಮುಷ್ಕರದಿಂದಾಗಿ ಬುಕಿಂಗ್ ಮಾಡಬಹುದೇ? ಬುಕಿಂಗ್ ಮಾಡಲು ಬಸ್ ಸಿಗುತ್ತದೆಯೇ ಇಂತಹ ಅನೇಕ ಗೊಂದಲಗಳು ಜನರಲ್ಲಿದೆ. ಕೆಎಸ್ ಆರ್ ಟಿಸಿ ಮೂಲಗಳ ಪ್ರಕಾರ ಮುಷ್ಕರದಿಂದ ಬಸ್ ಓಡಾಟಕ್ಕೆ ತೊಂದರೆಯಾಗಲ್ಲ. ಎಂದಿನಂತೆ ನೀವು ಬುಕಿಂಗ್ ಮಾಡಬಹುದು. ಆಪ್ ನಲ್ಲಿ ವೀಕೆಂಡ್ ನಲ್ಲಿ ಬುಕಿಂಗ್ ಮಾಡುವವರಿಗೆ 15% ರಿಯಾಯಿತಿ ಸೌಲಭ್ಯವೂ ಇದೆ. ಹೀಗಾಗಿ ಊರಿಗೆ ಪ್ರಯಾಣ ಮಾಡುವವರು ಆರಾಮವಾಗಿ ಬಸ್ ಬುಕಿಂಗ್ ಮಾಡಬಹುದು. ಬಸ್ ಗಳ ಸಮಸ್ಯೆಯೂ ಆಗಲ್ಲ ಎಂದು ಸ್ಪಷ್ಟನೆ ಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಚಿನ್ನವಿಲ್ಲ, ವಜ್ರವಿಲ್ಲ: ಕೇರಳದ ವಧುವೊಬ್ಬಳು ಚಿನ್ನಾಭರಣವಿಲ್ಲದ ಲುಕ್‌ ದೇಶದೆಲ್ಲೆಡೆ ಸದ್ದು

ಮಾಸ್ಕ್ ಹಾಕಿಕೊಂಡು ಬಿಎಂಟಿಸಿ ಏರಿದ ಸಚಿವ ಬೈರತಿ ಸುರೇಶ್: ಚಿಲ್ರೆ ಇಲ್ಲ ಎಂದರೆ ಸಚಿವರನ್ನೇ ಬಸ್ ನಿಂದ ಕೆಳಿಗಿಳಿಸೋದಾ Video

Video: ಹೀಗಾದ್ರೆ ಡೆಲಿವರಿ ಬಾಯ್ಸ್‌ಗೆ ಡೋರ್ ಓಪನ್ ಮಾಡುವುದು ಹೇಗೆ, ತನಗಾದ ಕೆಟ್ಟ ಅನುಭವ ಬಿಚ್ಚಿಟ್ಟ ಯುವತಿ

Karnataka Weather: ನಿರಂತರ ಮಳೆಯಾಗಿರುವ ಕರಾವಳಿ ಭಾಗದಲ್ಲಿ ಇಂದು ಹೇಗಿರಲಿದೆ ಗೊತ್ತಾ ಹವಾಮಾನ

ಎಸ್‌ ಜಾನಕಿ ಪ್ರತಿ ಮಲಯಾಳಿ ಮನೆಯ ಸದಸ್ಯರಾಗಿದ್ದಾರೆ: ಕೇರಳ ಸಿಎಂ ವಿಡಿ ಸತೀಶನ್‌

ಮುಂದಿನ ಸುದ್ದಿ
Show comments