Publish Date: Tue, 07 Mar 2017 (22:49 IST)
Updated Date: Tue, 07 Mar 2017 (23:10 IST)
ಬೆಂಗಳೂರಿನ ಸತತ 2ನೇ ದಿನವೂ ಮಳೆಯ ಆರ್ಭಟ ಮುಂದುವರೆದಿದೆ. ನಗರದ ಹಲವೆಡೆ ರಾತ್ರಿ 8 ಗಂಟೆ ಸುಮಾರಿಗೆ ಧಾರಾಕಾರ ಮಳೆ ಸುರಿದಿದೆ.
ಮಲ್ಲೇಶ್ವರಂ, ಮೆಜೆಸ್ಟಿಕ್, ಶಿವಾನಂದ ಸರ್ಕಲ್, ಮಹಾಲಕ್ಷ್ಮೀ ಲೌಟ್, ಮಲ್ಲೇಶ್ವರಂ, ಬಿಟಿಎಂ ಲೇಔಟ್, ಜಯನಗರ ಸೇರಿದಂತೆ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದ್ದು, ಮನೆಗಳಿತಗೆ ತೆರಳಲು ವಾಹನ ಸವಾರರು ಪರದಾಡುವ ರಿಸ್ಥಿತಿ ನಿರ್ಮಾಣವಾಗಿತ್ತು.
ಇತ್ತ, ಆನಂದ್ ರಾವ್ ಸರ್ಕಲ್ ಬಳಿ ಡ್ರೈನೇಜ್ ಸಮಸ್ಯೆಯಿಂದಾಗಿ ನೀರು ನುಗ್ಗಿ ರಸ್ತೆಗೆ ನುಗ್ಗಿ ಕೆಎಸ್ಆರ್ಟಿಸಿ ಬಸ್ ಮುಳುಗಗಡೆಯಾದ ಪ್ರಕರಣ ನಡೆದಿದೆ. ಬೈಲಹೊಂಗಲಕ್ಕೆ ಹೊರಟಿದ್ದ ಬಸ್`ನಲ್ಲಿ 35ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಕೂಡಲೇ ಸ್ಥಳೀಯ ಯುವಕರು ಎಮರ್ಜೆನ್ಸಿ ಎಕ್ಸಿಟ್ ಮೂಲಕ ಪ್ರಯಾಣಿಕರನ್ನ ರಕ್ಷಿಸಿದ್ದಾರೆ.