Publish Date: Mon, 29 Oct 2018 (10:28 IST)
Updated Date: Mon, 29 Oct 2018 (10:30 IST)
ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಹು, ಕೇತು, ಶನಿ ಪ್ರಭಾವದಿಂದ ತನಗೆ ಸೋಲಾಯಿತು ಎಂದು ಲೇವಡಿ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ರಾಹು ಎಂದರೆ ಡಾ. ಜಿ ಪರಮೇಶ್ವರ್, ಕೇತು ಎಚ್ ಡಿ ರೇವಣ್ಣ, ಶನಿ ಎಚ್ ಡಿ ದೇವೇಗೌಡರು ಮತ್ತು ಜೆಡಿಎಸ್. ಈಗ ಸಿದ್ದರಾಮಯ್ಯನವರು ಇದೇ ಶನಿ ಜತೆ ಹೋಗಿ ಸರ್ಕಾರ ಮಾಡಿದ್ದಾರೆ ಎಂದು ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಸಿದ್ದರಾಮಯ್ಯಗೆ ಈ ರೀತಿ ಟಾಂಗ್ ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.