Webdunia - Bharat's app for daily news and videos

Install App

ಮುಂದಿನ ಬಾರಿ ಮುಜರಾಯಿ ಖಾತೆ ಪಡೆದು ಕಾಂಗ್ರೆಸ್ ನೆಗೆದು ಬೀಳುವಂತೆ ಮಾಡುತ್ತೇನೆ: ಕೆಎಸ್ ಈಶ್ವರಪ್ಪ

Webdunia
ಬುಧವಾರ, 15 ನವೆಂಬರ್ 2017 (09:56 IST)
ಬೆಳಗಾವಿ: ಸುವರ್ಣಸೌಧದಲ್ಲಿ ನಡೆಯುತ್ತಿರುವ ಸದನದ ಮೇಲ್ಮನೆಯಲ್ಲಿ ಮಂಗಳವಾರ ಮುಜರಾಯಿ ಇಲಾಖೆ ಕುರಿತು ಪ್ರಶ್ನೋತ್ತರ ವೇಳೆ ಸ್ವಾರಸ್ಯಕರ ಚರ್ಚೆ ನಡೆಯಿತು.

 
ಮುಜರಾಯಿ ಇಲಾಖೆ ಸಿಕ್ಕಿದ್ದೇ ನಿಮ್ಮ ಅದೃಷ್ಟ ಎಂದುಕೊಳ್ಳಿ. ಮುಜರಾಯಿ ಇಲಾಖೆ ಎಂದರೆ ದೇವರ ಕೆಲಸ ಎಂದು ಈಶ್ವರಪ್ಪ, ಮುಜರಾಯಿ ಖಾತೆ ಸಚಿವ ರುದ್ರಪ್ಪ ಲಮಾಣಿಗೆ ಛೇಡಿಸಿದರು.

ಈ ಸಂದರ್ಭದಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್ ಮುಜರಾಯಿ ಇಲಾಖೆ ಸಿಕ್ಕಿದರೆ ಚುನಾವಣೆಯಲ್ಲಿ ಸೋಲಾಗುತ್ತದೆ ಎಂಬ ಇತಿಹಾಸವಿದೆಯಲ್ಲವೇ ಎಂದು ಕಾಲೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ನಾನು ಮುಂದಿನ ಬಾರಿ ಮುಜರಾಯಿ ಖಾತೆಯನ್ನೇ ಕೇಳಿ ಪಡೆಯುತ್ತೇನೆ ಎಂದರು.

ನನಗೆ ಆ ಖಾತೆ, ಈ ಖಾತೆ ಎಂದೇನಿಲ್ಲ. ಇದುವರೆಗೆ ಹಲವು ಖಾತೆಗಳನ್ನು ನಿಭಾಯಿಸಿದ್ದೇನೆ. ಮುಂದಿನ ಬಾರಿ ಮುಜರಾಯಿ ಇಲಾಖೆಯನ್ನೇ ಕೇಳಿ ಪಡೆಯುತ್ತೇನೆ. ಅದು ನನ್ನ ಸೌಭಾಗ್ಯ ಎಂದುಕೊಳ್ಳುತ್ತೇನೆ. ನಾನು ಮುಜರಾಯಿ ಇಲಾಖೆಗೆ ಬಂದರೆ ಕಾಂಗ್ರೆಸ್ ನೆಗೆದು ಬಿದ್ದು ಹೋಗುವಂತೆ ಮಾಡುತ್ತೆನೆ’ ಎಂದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments