Select Your Language

Notifications

webdunia
webdunia
webdunia
webdunia

ಕೃಷ್ಣೆ, ಕಾವೇರಿಗೆ ಪೂಜೆ ಮಾಡುವುದು ನಮ್ಮ ಸಂಸ್ಕ್ರತಿ: ಸಚಿವ ಪಾಟೀಲ್

ಕೃಷ್ಣೆ, ಕಾವೇರಿಗೆ ಪೂಜೆ ಮಾಡುವುದು ನಮ್ಮ ಸಂಸ್ಕ್ರತಿ: ಸಚಿವ ಪಾಟೀಲ್
ಬೆಂಗಳೂರು , ಬುಧವಾರ, 7 ಜೂನ್ 2017 (13:44 IST)
ರಾಜ್ಯದ ಜನತೆಗೆ ಸಮೃದ್ಧಿಯನ್ನು ನೀಡುವ ಕೃಷ್ಣೆ, ಕಾವೇರಿ ನದಿಗೆ ಪೂಜೆ ಮಾಡುವುದು ನಮ್ಮ ಸಂಸ್ಕ್ರತಿ ಎಂದು ಜಲ ಸಂಪನ್ಮೂಲ ಖಾತೆ ಸಚಿವ ಎಂ.ಬಿ.ಪಾಟೀಲ್ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
 
ಮುಂಗಾರು ಅಧಿವೇಶನದ ಕಲಾಪದಲ್ಲಿ ಪಾಲ್ಗೊಂಡು ಸ್ವಯಂ ಹೇಳಿಕೆ ನೀಡಿದ ಅವರು, ನದಿಗಳಿಗೆ ಪೂಜೆಗಳನ್ನು ಮಾಡುವುದು ಮೌಢ್ಯವೆಂದಾದ್ರೆ ನಾನು ಲಕ್ಷ ಬಾರಿ ಪೂಜೆ ಮಾಡುತ್ತೇನೆ ಎಂದು ಶೆಟ್ಟರ್ ಹೇಳಿಕೆಗೆ ಟಾಂಗ್ ನೀಡಿದರು.
 
ಪರ್ಜನ್ಯ ಹೋಮ ಕುರಿತಂತೆ ಹೇಳಿಕೆ ನೀಡಿದ ಅವರು ನದಿಗೆ ಪೂಜೆ ಮಾಡಿದ ನನ್ನನ್ನು ರಾಜೀನಾಮೆ ನೀಡುವಂತೆ ಆಗ್ರಹಿಸಲಾಗುತ್ತಿದೆ. ದೇಶ, ರಾಜ್ಯದ ಜನತೆಗೆ ಸಮೃದ್ಧಿ ನೀಡುವ ಕೃಷ್ಣೆ ಕಾವೇರಿ ನದಿಯ ಪೂಜೆ ಮಾಡಿದರೆ ತಪ್ಪಾ ಎಂದು ಪ್ರಶ್ನಿಸಿದರು.
 
ಉಪಗ್ರಹ ಉಡಾವಣೆಯ ಸಂಸ್ಥೆಯಾದ ಇಸ್ರೋ ಕೂಡಾ ಉಪಗ್ರಹ ಗಗನಕ್ಕೆ ಹಾರಿ ಬಿಡುವ ಮುನ್ನ ಪೂಜೆ ಕಾರ್ಯಗಳನ್ನು ನೆರವೇರಿಸುತ್ತದೆ. ಹಾಗಾದ್ರೆ ತಲಕಾವೇರಿಯಲ್ಲಿ ಪೂಜೆ ನೆರವೇರಿಸುವುದು ಕೂಡಾ ತಪ್ಪಾಗುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್ ವಿಪಕ್ಷಗಳಿಗೆ ಚಾಟಿ ಬೀಸಿದರು.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ರಾಷ್ಟ್ರಪತಿ ಚುನಾವಣೆಯ ದಿನಾಂಕ ಘೋಷಣೆ