Select Your Language

Notifications

webdunia
webdunia
webdunia
webdunia

ಕೆಪಿಎಸ್‌ಸಿ: ಶ್ಯಾಂ ಭಟ್ ಹೆಸರು ಕೈಬಿಡಲು ಸಿಎಂಗೆ ಎಸಿಐಸಿಎಂ ಸಂಸ್ಥೆ ಒತ್ತಾಯ

ಕೆಪಿಎಸ್‌ಸಿ: ಶ್ಯಾಂ ಭಟ್ ಹೆಸರು ಕೈಬಿಡಲು ಸಿಎಂಗೆ ಎಸಿಐಸಿಎಂ ಸಂಸ್ಥೆ ಒತ್ತಾಯ
ಬೆಂಗಳೂರು , ಶುಕ್ರವಾರ, 20 ಮೇ 2016 (13:17 IST)
ನೂತನ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನಕ್ಕೆ ಬಿಡಿಎ ಆಯುಕ್ತ ಶ್ಯಾಂ ಭಟ್ ಹೆಸರನ್ನು ಕೈಬಿಡುವಂತೆ ಆಗ್ರಹಿಸಿ ಪ್ರಜ್ಞಾವಂತ ನಾಗರಿಕ ಕಳಕಳಿ ಸಂಸ್ಥೆಯ (ಎಸಿಐಸಿಎಂ) ಸಂಚಾಲಕ ಲಕ್ಷಣ್ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರತ್ರ ಬರೆದಿದ್ದಾರೆ.
 
ಬಿಡಿಎ ಆಯುಕ್ತ ಶ್ಯಾಂ ಭಟ್ ಅವರು ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್ ಭ್ರಷ್ಟಾಚಾರ ಸೇರಿದಂತೆ ಕರ್ತವ್ಯ ಲೋಪ ಆರೋಪವನ್ನು ಎದುರಿಸುತ್ತಿದ್ದಾರೆ. ಈ ವ್ಯಕ್ತಿ  ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನಕ್ಕೆ ಅರ್ಹರಲ್ಲ. ಇಂತಹ ಆರೋಪ ಹೊತ್ತಿರುವವರನ್ನು ಅಧ್ಯಕ್ಷರಾಗಿ ನೇಮಕ ಮಾಡುವುದರಿಂದ ಸರಕಾರ ತೀವ್ರ ಮುಜುಗರಕ್ಕೊಳಗಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
 
ಸುಪ್ರೀಂ ನಿಯಮಾವಳಿ ಪ್ರಕಾರ ಶ್ಯಾಂ ಭಟ್ ಅವರ ನೇಮಕಾತಿಗೆ ಅವಕಾಶವಿಲ್ಲ. ಇಂತಹ ವಿಷಯಗಳಲ್ಲಿ ಯಾರೋ ಮುಖ್ಯಮಂತ್ರಿ ಸಿದ್ದರಾಮಯ್ಯನವರ ದಾರಿ ತಪ್ಪಿಸುತ್ತಿದ್ದಾರೆ. ರಾಜ್ಯಸರಕಾರ ತಕ್ಷಣವೇ ಶಾಂ ಭಟ್ ಅವರ ನೇಮಕಾತಿ ಪ್ರಸ್ತಾವನೆಯನ್ನು ಕೈಬಿಡಬೇಕು ಎಂದು ಮೈಸೂರಿನಲ್ಲಿ ಆಗ್ರಹಿಸಿದ್ದಾರೆ.
 
ಒಂದು ವೇಳೆ, ಶ್ಯಾಂ ಭಟ್ ಅವರ ಹೆಸರನೇ ಸರಕಾರ ಶಿಫಾರಸ್ಸು ಮಾಡಿದರೆ, ರಾಜ್ಯಪಾಲರ ಅಂಕಿತ ಸಿಗುವುದು ಅನುಮಾನವೆಂದು ಎಸಿಐಸಿಎಂ ಸಂಚಾಲಕ ಲಕ್ಷಣ್ ತಿಳಿಸಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೇರಳ: ಮುಖ್ಯಮಂತ್ರಿ ಓಮನ್ ಚಾಂಡಿ ರಾಜೀನಾಮೆ