Select Your Language

Notifications

webdunia
webdunia
webdunia
webdunia

ಜಾತಿ ಧರ್ಮವನ್ನು ಒಡೆದು ಮತ ಗಿಟ್ಟಿಸಿಲ್ಲ: ಜಿ.ಪರಮೇಶ್ವರ್

ಜಾತಿ ಧರ್ಮವನ್ನು ಒಡೆದು ಮತ ಗಿಟ್ಟಿಸಿಲ್ಲ: ಜಿ.ಪರಮೇಶ್ವರ್
ತುಮಕೂರು , ಗುರುವಾರ, 13 ಏಪ್ರಿಲ್ 2017 (14:39 IST)
ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಜಾತಿ ಧರ್ಮವನ್ನು ಒಡೆದು ಮತ ಗಿಟ್ಟಿಸಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿದ್ದಾರೆ.
 
ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದ ಜನಪರ ಅಡಳಿತಕ್ಕೆ ಮತದಾರರು ನೀಡಿದ ಮನ್ನಣೆಯಾಗಿದೆ. ಸರಕಾರ ಅಭಿವೃದ್ಧಿ ಪರ, ಜನಪರವಾಗಿದೆ ಎನ್ನುವುದಕ್ಕೆ ಉಪಚುನಾವಣೆ ಫಲಿತಾಂಶವೇ ಸಾಕ್ಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
 
ಜಾತಿ, ಧರ್ಮಗಳನ್ನು ಒಡೆದು ರಾಜಕಾರಣ ಮಾಡಬೇಕು ಎನ್ನುವ ಬಿಜೆಪಿಗೆ ತಕ್ಕ ಶಾಸ್ತಿಯಾಗಿದೆ. ಇಂತಹ ರಾಜಕಾರಣ ಬಹಳ ದಿನಗಳವರೆಗೆ ನಡೆಯುವುದಲ್ಲ ಎನ್ನುವುದು ಮತದಾರರು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ತೋರಿಸಿದ್ದಾರೆ ಎಂದರು.
 
ಉಪಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದರು. ಆದರೆ. ಮತದಾರರು ಬಿಜೆಪಿಯ ಸುಳ್ಳು ಆರೋಪಗಳಿಗೆ ತಿರುಗೇಟು ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ತಿಳಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಹಣಬಲ, ಅಧಿಕಾರಬಲದಿಂದ ಕಾಂಗ್ರೆಸ್ ಗೆಲುವು: ಶ್ರೀನಿವಾಸ್ ಪ್ರಸಾದ್