Select Your Language

Notifications

webdunia
webdunia
webdunia
webdunia

ಹಣಬಲ, ಅಧಿಕಾರಬಲದಿಂದ ಕಾಂಗ್ರೆಸ್ ಗೆಲುವು: ಶ್ರೀನಿವಾಸ್ ಪ್ರಸಾದ್

ಹಣಬಲ, ಅಧಿಕಾರಬಲದಿಂದ ಕಾಂಗ್ರೆಸ್ ಗೆಲುವು: ಶ್ರೀನಿವಾಸ್ ಪ್ರಸಾದ್
ಮೈಸೂರು , ಗುರುವಾರ, 13 ಏಪ್ರಿಲ್ 2017 (14:24 IST)
ಹಣಬಲ, ಅಧಿಕಾರದ ಬಲದಿಂದ ಕಾಂಗ್ರೆಸ್ ಚುನಾವಣೆ ಗೆದ್ದಿದೆ ಎಂದು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. 
 
ಚುನಾವಣೆಗೆ ಎರಡು ದಿನ ಮುಂಚೆ ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಪೊಲೀಸ್ ಬಲವನ್ನು ಬಳಸಿಕೊಂಡು 1.25 ಲಕ್ಷ ಜನರಿಗೆ ಮನೆ ಮನೆಗೆ ಹಣ ಹಂಚುವಲ್ಲಿ ನೆರವಾಗಿರುವುದು ವರದಿಯಾಗಿದೆ ಎಂದು ಆರೋಪಿಸಿದ್ದಾರೆ. 
 
ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುತ್ತೇನೆ. ಆದರೆ, ಚುನಾವಣೆ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. 13 ಚುನಾವಣೆಗಳನ್ನು ಎದುರಿಸಿದ್ದೇನೆ ಇನ್ನಷ್ಟು ಚುನಾವಣೆ ಎದುರಿಸುವ ಇಚ್ಚೆ ಹೊಂದಿಲ್ಲ ಎಂದು ಶ್ರಿನಿವಾಸ್ ಪ್ರಸಾದ್ ತಿಳಿಸಿದ್ದಾರೆ.
 
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅವರ ಸಂಪುಟದ ಸದಸ್ಯರು ತಮ್ಮ ಅಧಿಕಾರ ಬಲವನ್ನು ಬಳಸಿಕೊಂಡು ಮತದಾರರನ್ನು ವಂಚಿಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಅಹಂಗೆ ಗರ್ವಭಂಗವಾಗಿದೆ: ಮಲ್ಲಿಕಾರ್ಜುನ್ ಖರ್ಗೆ