Webdunia - Bharat's app for daily news and videos

Install App

Kodi Seer: ಕೊವಿಡ್ ಬಗ್ಗೆ ಅಪಾಯಕಾರಿಯಾಗುತ್ತಾ: ಕೋಡಿ ಶ್ರೀಗಳ ಸ್ಪೋಟಕ ಭವಿಷ್ಯ

Krishnaveni K
ಶನಿವಾರ, 24 ಮೇ 2025 (12:27 IST)
ಬೆಂಗಳೂರು: ಈಗಾಗಲೇ ಭಾರತಕ್ಕೀ ಕಾಲಿಟ್ಟಿರುವ ಕೊವಿಡ್ ಮಹಾಮಾರಿ ಮತ್ತೆ ಕಂಟಕವಾಗುತ್ತಾ? ಕೋಡಿ ಶ್ರೀಗಳ ಸ್ಪೋಟಕ ಭವಿಷ್ಯ ಏನು ಹೇಳುತ್ತದೆ? ಇಲ್ಲಿದೆ ನೋಡಿ ವಿವರ.

ಮಾಧ್ಯಮಗಳಿಗೆ ಕೋಡಿ ಶ್ರೀಗಳು ಸ್ಪೋಟಕ ಭವಿಷ್ಯ ವಾಣಿ ನುಡಿದಿದ್ದಾರೆ. ವಾಯು ರೂಪದಲ್ಲಿ ಅಪಾಯಕಾರಿ ರೋಗ ಬರುತ್ತದೆ. ಇದು ಮುಂದಿನ 5 ವರ್ಷ ಇರಲಿದೆ. ಇದು ಲೋಕಕ್ಕೇ ಗಂಡಾಂತರವಿರಲಿದೆ. ವಾಯು ಮೂಲಕ ಹರಡುತ್ತದೆ, ಉಸಿರಾಟದ ಸಮಸ್ಯೆಯಾಗುತ್ತದೆ. ಈಗಾಗಲೇ ಈ ರೋಗ ಬಂದಿದೆ. ಶಿರ ತನಕ ಬಂದು ಮನುಷ್ಯನಿಗೆ ಸಾವು ಬರುವ ಅಪಾಯವಿದೆ.

ಈ ಬಾರಿ ಹಿಮಾಲಯದಿಂದ ಅಪಾಯವಿದೆ. ಇದು ದೆಹಲಿವರೆಗೆ ವ್ಯಾಪಿಸಲಿದೆ. ಮತೀಯ ಗಲಭೆಗಳು ಹೆಚ್ಚಾಗುತ್ತವೆ. ಜಲ ಕಂಟಕ, ವಾಯು ಕಂಟಕ, ಭೂಕಂಪವಾಗುವ ಸಾಧ್ಯತೆಯಿದೆ. ವಾಯು ಮಾಲಿನ್ಯ, ಜಲ ಮಾಲಿನ್ಯ ಆಗಿದೆ. ಯಾವುದನ್ನೂ ನಾವು ಉಳಿಸಿಲ್ಲ. ಈ ಸಾರಿ ಬರುವ ಖಾಯಿಲೆ ಬಗ್ಗೆ ಎಚ್ಚರಿಕೆ ಅಗತ್ಯ ಎಂದಿದ್ದಾರೆ.

ಇನ್ನು, ರಾಜ್ಯ ಸರ್ಕಾರದ ಬಗ್ಗೆಯೂ ಅವರು ಭವಿಷ್ಯ ನುಡಿದಿದ್ದಾರೆ. ಸಂಕ್ರಾಂತಿವರೆಗೂ ಸರ್ಕಾರಕ್ಕೆ ಅಪಾಯವಿಲ್ಲ. ಸಂಕ್ರಾಂತಿ ಬಳಿಕ ಆಮೇಲೆ ಹೇಳಬಹುದು. ಆ ನಂತರ ಅತಂತ್ರವಾದರೂ ಆಗಬಹುದು. ರಾಜಕೀಯವಾಗಿ ಅರಸನ ಅರಮನೆಗೆ ಕಾರ್ಮೋಡ ಕವಿದಿತ್ತು. ಹೊಸ ದೇಶಗಳು ಉತ್ಪತ್ತಿಯಾಗುತ್ತದೆ, ಹಲವು ದೇಶಗಳು ಅಳಿಸಿಹೋಗುತ್ತದೆ. ಕೆಲವು ರಾಜಕೀಯ ನಾಯಕರ ಸಾವಾಗುತ್ತದೆ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Kodi Seer: ಕೊವಿಡ್ ಬಗ್ಗೆ ಅಪಾಯಕಾರಿಯಾಗುತ್ತಾ: ಕೋಡಿ ಶ್ರೀಗಳ ಸ್ಪೋಟಕ ಭವಿಷ್ಯ

Mysore Pak: ಪಾಕಿಸ್ತಾನದ ಮೇಲಿನ ಸಿಟ್ಟಿಗೆ ಮೈಸೂರ್ ಪಾಕ್ ಗತಿ ಏನಾಗಿದೆ ನೋಡಿ

Gold price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಬೆಂಗಳೂರಿನಲ್ಲಿ ಬಾಳೆ ಎಲೆ ರೇಟು ಬಲು ದುಬಾರಿ

Hebbal Accident: ಹೆಬ್ಬಾಳದಲ್ಲಿ ತಡರಾತ್ರಿ ಸರಣಿ ಅಪಘಾತ: ಲಾರಿ ಚಾಲಕ ದುರ್ಮರಣ

ಮುಂದಿನ ಸುದ್ದಿ
Show comments