Webdunia - Bharat's app for daily news and videos

Install App

ಕಂಡ ಕಂಡಲ್ಲಿ ಕೊಡವ ಕುಪ್ಯಚಾಲೆ ಮೆರವಣಿಗೆ ಅಖಿಲ ಕೊಡವ ಸಮಾಜ ಖಂಡನೆ

Webdunia
ಶನಿವಾರ, 25 ಡಿಸೆಂಬರ್ 2021 (20:36 IST)
ಕೊಡವರ ಕುಪ್ಯ, ಚಾಲೆ, ಮಂಡೆತುಣಿ, ವಸ್ತ್ರ, ದುಡಿ ತಾಳಗಳಿಗೆ ತನ್ನದೇ ಆದ ಹಿನ್ನಲೆ ಮತ್ತು ಹಿರಿಮೆ ಇದ್ದು, ಅದನ್ನ ಬಳಸುವಾಗಲೂ ಹಲವಾರು ಕ್ರಮಗಳನ್ನ ನಮ್ಮ ಹಿರಿಯರು ಹೇಳಿ ಕಲಿಸಿದ್ದಾರೆ. ಆದರೆ ಇತ್ತೀಚೆಗೆ ಗಮನಿಸಿದಂತೆ ಕೊಡವ ಉಡುಗೆ ತೊಡುಗೆಗಳು ಮಂಗನ ಕೈಗೆ  ಮಾಣಿಕ್ಯ ಕೊಟ್ಟಂತಾಗಿದ್ದು, ಕಂಡಕಂಡಲೆಲ್ಲ ಇತಿಮಿತಿ ಇಲ್ಲದೆ ಬಳಕೆಯಾಗುತ್ತಿರುವುದು ಖಂಡನೀಯ ಎಂದು ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅಸಮದಾನ ವ್ಯಕ್ತಪಡಿಸಿದ್ದಾರೆ.
 
ಕೊಪ್ಯಚಾಲೆ ಕೊಡವರ ಕ್ಷತ್ರಿಯತ್ವದ ಗುರುತು, ಅದು ಗುಲಾಮಗಿರಿಗೆ ಬಳಕೆಯಾಗಬಾರದು ಎಂದಿರುವ ಅವರು, ನಮ್ಮ ಪೂರ್ವಿಕರು ಮಾಡಿರುವ ಕಟ್ಟುಪಾಡುಗಳು, ಪದ್ದತಿ ಆಚರಣೆಗಳು ಅರ್ಥಗರ್ಭಿತವೂ, ವೈಜ್ಞಾನಿಕ ಹಿನ್ನಲೆ ಉಳ್ಳದೂ ಆಗಿದ್ದು, ಪ್ರತಿಯೊಂದು ಆಚರಣೆಗೂ ಕಾಲಮಿತಿ, ಸಮಯ ಸಂಧರ್ಭ ಎನ್ನುವುದಿದೆ. ಆದರೆ ಇತ್ತೀಚೆಗೆ ಅದು ಕೇವಲ ಬಾಯಿಮಾತಿಗೆ, ವೇದಿಕೆ ಭಾಷಣಕ್ಕೆ ಮಾತ್ರ ಸೀಮಿತವಾಗಿದೆ. ಒಂದೆಡೆ ದಾರಿ ತಪ್ಪುತ್ತಿರುವ ನಡೆ ನುಡಿಗಳನ್ನು ಸರಿದಾರಿಗೆ ತರಲು, ನಮಗೆ ನಾವೇ ನೀತಿ ನಿಯಮಗಳನ್ನ ಮಾಡಿ, ಜಾಗೃತ ಸಮಾಜದ ನಿರ್ಮಾಣಕ್ಕೆ ಪ್ರಯತ್ನಿಸುವವರಾದರೆ, ಮತ್ತೋಂದೆಡೆ ನಮ್ಮ ಕುಪ್ಯ ಚಾಲೆ, ದುಡಿಕೊಟ್ಟ್ ಪಾಟ್ ಯಾರ್ಯಾರನ್ನು ಮೆಚ್ಚಿಸುವ, ಗುಲಾಮಗಿರಯನ್ನು ಸಾಬೀತುಪಡಿಸುವ ಪ್ರಯತ್ನಗಳು ನಡೆಯುತ್ತಿರುವುದು ಕಳವಳಕಾರಿಯಾದದ್ದು ಎಂದಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕನನ್ನು ಕೆಲಸದಿಂದ ಕಿತ್ತು ಹಾಕಿದ ಆರ್ ವಿ ಕಾಲೇಜು

Mangaluru Rain: ತಗ್ಗು ಪ್ರದೇಶಗಳು ಜಲಾವೃತ, ರಸ್ತೆಯಲ್ಲಿ ನಡೆಯಲು ಪರದಾಡಿದ ಜನರು, Video

ಏರ್‌ ಇಂಡಿಯಾ ವಿಮಾನ ದುರಂತ: ಕೊನೆಯ ಕ್ಷಣದ ವಿಡಿಯೋ ಮಾಡಿದ ಬಾಲಕನೇ ಪ್ರಮುಖ ಸಾಕ್ಷಿ

ಏರ್‌ ಇಂಡಿಯಾ ವಿಮಾನ ದುರಂತ: ಕೇಂದ್ರದಿಂದ ಪರಿಹಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಪದ್ಮಶ್ರೀ ಸತ್ಯನಾರಾಯಣ ಬೇಲೇರಿಯ ಕೃಷಿ ಸಾಧನೆ ಕೇರಳ ಪಠ್ಯ ಪುಸ್ತಕದಲ್ಲಿ

ಮುಂದಿನ ಸುದ್ದಿ
Show comments