Webdunia - Bharat's app for daily news and videos

Install App

ಬಿಎಸ್ವೈ ಇಲ್ಲಾಂದ್ರೆ ಬಿಜೆಪಿಯನ್ನು ನಾಯಿ ಮೂಸುವುದಿಲ್ಲ ಅಂತ ಕೆಜೆಪಿ ಸಂಸ್ಥಾಪಕ ಹೇಳಿದ್ಯಾಕೆ?

Webdunia
ಬುಧವಾರ, 5 ಡಿಸೆಂಬರ್ 2018 (20:51 IST)
ಯಡಿಯೂರಪ್ಪ ನವರ ಶಕ್ತಿ ನನಗೆ ಗೊತ್ತಿದೆ. ಅವರ ಜೊತೆ ಎರಡು ವರ್ಷ ನಾನು ಕೆಲಸ ಮಾಡಿದ್ದೇನೆ. ಯಡಿಯೂರಪ್ಪ ಇಲ್ಲಾ ಅಂದ್ರೆ ಬಿಜೆಪಿ ಪಕ್ಷವನ್ನ ನಾಯಿ ಸಹ ಮೂಸುವುದಿಲ್ಲ ಅಂತ ಕೆಜೆಪಿ ಪಕ್ಷ ಸಂಸ್ಥಾಪಕ ವಿವಾದಿತ ಹೇಳಿಕೆ ನೀಡಿದ್ದಾರೆ.

ತುಮಕೂರಿನ ಪತ್ರಿಕಾಗೋಷ್ಠಿಯಲ್ಲಿ ಕೆಜೆಪಿ ಸಂಸ್ಥಾಪಕ ಪಧ್ಮನಾಭ ಪ್ರಸನ್ನ ಹೇಳಿಕೆ‌ ನೀಡಿದ್ದು, ಯಡಿಯೂರಪ್ಪ ನವರು ಹಾಕಿಕೊಟ್ಟ ದಾರಿಯಲ್ಲಿ ಸಂಘಟನೆ ಮಾಡಿದ್ದೀವಿ. ಕೆಜೆಪಿ ಪಕ್ಷ ಚೆನ್ನಾಗಿ ಪಿಕಪ್ ಆಗಿದೆ. ಯಡಿಯೂರಪ್ಪನವರ ವರ್ಚಸ್ಸಿನಿಂದಲೇ ಬಿಜೆಪಿ 104 ಸೀಟ್ ಪಡೆದುಕೊಂಡಿದೆ. ಉ- ಕ ಭಾಗ, ಹೈ -ಕ ಭಾಗ, ತುಮಕೂರು ಭಾಗದಲ್ಲಿ ಯಡಿಯೂರಪ್ಪನವರ ಹೆಸರಿನಿಂದಲೇ ಓಟ್ ಬೀಳ್ತಿರೋದು. ಯಡಿಯೂರಪ್ಪನವರು ಗೆದ್ದು ಸರ್ಕಾರ ರಚನೆ ಮಾಡಲಿಕ್ಕೆ ಬಂದರು. ಒಳಗೊಳಗೆ ಗುಂಪುಗಾರಿಕೆ ಆಗಿ ಸಿಎಂ ಆಗ್ತಾರೆ ಅಂತಾ ಪ್ರಯತ್ನ ಪಟ್ಟು ಅವರನ್ನ ತುಳಿದು ಮಟಾಶ್ ಮಾಡಲಿಕ್ಕೆ ಹೊರಟಿದ್ದಾರೆ ಎಂದು ದೂರಿದರು.

ಹೀಗೆ ಮುಂದುವರಿದ್ರೆ ಬಿಜೆಪಿ ಮುಂದೆ ಎಂಪಿ ಎಲೆಕ್ಷನ್ ನಲ್ಲಿ 10 ಸೀಟು ಕೂಡ ಗೆಲ್ಲಲಿಕ್ಕೆ ಆಗೋದಿಲ್ಲ. ಈಗಾಗಲೇ ಯಡಿಯೂರಪ್ಪ ಅಮಿತ್ ಷಾ ಗೆ ಲೆಟರ್ ಕೊಟ್ಟಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಹತ್ತು ಕಡೆ ಸೋಲುತ್ತೆ ಇದನ್ನ ಸರಿಪಡಿಸಿ ಅಂತಾ. ಇಲ್ಲಿ ಗುಂಪುಗಾರಿಕೆ ಇದೆ ಅಂಥಾ ಲೆಟರ್ ಬರೆದಿದ್ದಾರೆ ಎಂದು ಯಡಿಯೂರಪ್ಪನ ಗುಣಗಾನ ಮಾಡಿದ ಕೆಜೆಪಿ ಪಧ್ಮನಾಭ ಪ್ರಸನ್ನ ಗಮನ ಸೆಳೆದರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರೈತರ ಬಗ್ಗೆ ಮಾತನಾಡುವಾಗ ಎಚ್ಚರವಿರಬೇಕು: ಆರ್ ಅಶೋಕ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಕ್ರಿಶ್ಚಿಯನ್ನರಲ್ಲೂ ಬ್ರಾಹ್ಮಣ, ರೆಡ್ಡಿ ಇಷ್ಟೊಂದು ಜಾತಿನಾ: ಬಿಜೆಪಿ ಟೀಕೆ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಅಧಿಕ ರಕ್ತದೊತ್ತಡದ ಆರಂಭಿಕ ಲಕ್ಷಣಗಳೇನು

ಮುಂದಿನ ಸುದ್ದಿ
Show comments