Select Your Language

Notifications

webdunia
webdunia
webdunia
Sunday, 13 April 2025
webdunia

ರಸ್ತೆ ಗುಂಡಿಯಿಂದಲೇ ಅಪಘಾತವಾಗಿದೆ ಅಂತ ಹೇಳಕ್ಕಾಗಲ್ಲ ಅಂದ್ರು ಸಚಿವ ಕೆಜೆ ಜಾರ್ಜ್

ಕೆಜೆ ಜಾರ್ಜ್
ಬೆಂಗಳೂರು , ಮಂಗಳವಾರ, 3 ಅಕ್ಟೋಬರ್ 2017 (13:41 IST)
ಬೆಂಗಳೂರು: ಮೈಸೂರು ರಸ್ತೆಯಲ್ಲಿ ರಸ್ತೆ ಗುಂಡಿ ತಪ್ಪಿಸಲು  ಹೋಗಿ ಅಪಘಾತಕ್ಕೀಡಾಗಿ ಸಾವಿಗೀಡಾದ ದಂಪತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಪ್ರತಿಕ್ರಿಯೆ  ನೀಡಿದ್ದಾರೆ.


ನಿನ್ನೆ ತಡರಾತ್ರಿ ಜೆ.ಜೆ. ನಗರಕ್ಕೆ ಸ್ಕೂಟರ್ ನಲ್ಲಿ ಸಾಗುತ್ತಿದ್ದ ತಮಿಳುನಾಡು ಮೂಲದ ದಂಪತಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಬಸ್ ಒಂದಕ್ಕೆ ಡಿಕ್ಕಿ ಹೊಡೆದು ಸಾವಿಗೀಡಾಗಿದ್ದರು. ಈ ಘಟನೆಗೆ ನಗರದ ರಸ್ತೆ ಗುಂಡಿಗಳೇ ಕಾರಣ ಎಂದು ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಜಾರ್ಜ್ ದಂಪತಿ ಸಾವಿಗೆ ರಸ್ತೆ ಗುಂಡಿಯೇ ಕಾರಣ ಎಂದು ಹೇಳಲಿಕ್ಕೆ ಆಗಲ್ಲ. ನಗರದ ರಸ್ತೆಗಳಲ್ಲಿ ಮಳೆ ಬಂದು ಗುಂಡಿಗಳಾಗಿರುವುದು ನಿಜ. ಮಳೆ ಬಿಟ್ಟರೆ 10-15 ದಿನದಲ್ಲಿ ರಸ್ತೆ ಗುಂಡಿ ರಿಪೇರಿ ಮಾಡುತ್ತೇವೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

10 ಕೋಟಿ ವೆಚ್ಚದಲ್ಲಿ ಪ್ರಧಾನಿ ಮೋದಿ ದೇವಾಲಯ ನಿರ್ಮಾಣ