Select Your Language

Notifications

webdunia
webdunia
webdunia
webdunia

ಗಣೇಶ ವಿಸರ್ಜನೆಯಲ್ಲಿ ಕಿರಿಕ್

ಗಣೇಶ ವಿಸರ್ಜನೆಯಲ್ಲಿ ಕಿರಿಕ್
ಶಿವಮೊಗ್ಗ , ಭಾನುವಾರ, 24 ಸೆಪ್ಟಂಬರ್ 2023 (20:00 IST)
ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಪೋಲಿಸರು ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಪುಣೆದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ದೇವಸ್ಥಾನ ಮತ್ತು ಮಸೀದಿ ಎರಡು ಮುಖಾಮುಖಿ ಇದ್ದು, ಮಸೀದಿ ಇರುವ ಕಾರಣಕ್ಕೆ ಪಟಾಕಿ ಸಿಡಿಸದಂತೆ DySP ಶಿವಾನಂದ ಸೂಚಿಸಿದ್ದರು. ಈ ವೇಳೆ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಚಾಲಕ ದೇವರಾಜ್ ಅರಳಿಹಳ್ಳಿ ನೇತೃತ್ವದಲ್ಲಿ ಗ್ರಾಮಸ್ಥರು ನಡುರಾತ್ರಿ ಧರಣಿ ಕುಳಿತಿದ್ದು, ಪ್ರತಿಭಟನೆಯಲ್ಲಿ ಊರಿನ ಯುವಕರು, ಮಹಿಳೆಯರು ಭಾಗಿಯಾಗಿದ್ದರು. ಪಟಾಕಿ ಹೊಡೆಯಲು ಅನುಮತಿ ನೀಡುವವರೆಗೂ ಧರಣಿ ನಡೆಸುವುದಾಗಿ ರಸ್ತೆಯಲ್ಲಿ ಗಣಪತಿ ಮೆರವಣಿಗೆ ಸ್ಥಗಿತಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ರು. ಸುಮಾರು ಒಂದು ಗಂಟೆ ಕಾಲ ನಡೆದ ವಾಗ್ವಾದದಲ್ಲಿ ಪೊಲೀಸರ ಪಟಾಕಿ ಸಿಡಿಸಲು ಅನುಮತಿ ನೀಡಿದ್ರು. ಅನುಮತಿ ಸಿಕ್ಕ ಹಿನ್ನೆಲೆ ಮೆರವಣಿಗೆ ಮುಂದುವರೆದು ಗಣೇಶ ವಿಸರ್ಜನೆ ಮಾಡಲಾಯ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಚಾಮರಾಜನಗರದ 4 ತಾಲೂಕುಗಳಲ್ಲಿ ಬರ