Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಶಬರಿಮಲೆಗೆ ಹೋಗಲು ವಿಮಾನ ಸೇವೆ

webdunia
ಗುರುವಾರ, 16 ಫೆಬ್ರವರಿ 2017 (06:48 IST)
ದಕ್ಷಿಣ ಭಾರತದ ಪುರಾಣ ಪ್ರಸಿದ್ಧ ಯಾತ್ರಾ ಸ್ಥಳ ಶಬರಿ ಮಲೆಯಲ್ಲಿ ಹಸಿರು ವಿಮಾನ ನಿಲ್ದಾಣ ನಿರ್ಮಿಸುವ ಪ್ರಸ್ತಾವಕ್ಕೆ ಕೇರಳ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದೆ.
 
ಈ ಪ್ರಸ್ತಾವಿತ ವಿಮಾನ ನಿಲ್ದಾಣದ ನಿರ್ಮಾಣ ಕುರಿತಾದ ಅಧ್ಯಯನವನ್ನು ಕೈಗೊಳ್ಳಲು ಕೇರಳ ಸರ್ಕಾರ ಕೈಗಾರಿಕಾಭಿವೃದ್ಧಿ ನಿಗಮವನ್ನು ಸಚಿವ ಸಂಪುಟ ಕೋರಿದೆ.
ಮಣಿಕಂಠನ ಸನ್ನಿಧಾನಕ್ಕೆ ಹೋಗುವ ಭಕ್ತರ ಸಂಖ್ಯೆ ವರ್ಷ ವರ್ಷ ಏರುತ್ತಲೇ ಇದ್ದು ಸಂಚಾರ ವ್ಯವಸ್ಥೆಗೆ ಆಗುತ್ತಿರುವ ಅಡಚಣೆ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಇಲ್ಲಿಯವರೆಗೆ ಭಕ್ತರು ಕೇವಲ ರಸ್ತೆಮಾರ್ಗವಾಗಿ ಶಬರಿಮಲೆಗೆ ಹೋಗಬಹುದಾಗಿದೆ.ಸಿಪಿಎಂ ನೇತೃತ್ವದ ಎಲ್‌ಡಿಎಫ್ ಸರ್ಕಾರ ಈ ಹಿಂದೆ ದೇವಸ್ಥಾನದಿಂದ 45ಕೀಲೋಮೀಟರ್ ದೂರದಲ್ಲಿರುವ ಎರುಮಲೆ ಸಮೀಪದ ತಾಣವನ್ನು ಪ್ರಸ್ತಾವಿತ ವಿಮಾನ ನಿಲ್ದಾಣಕ್ಕಾಗಿ ಗುರುತಿಸಿತ್ತು. 
 
ಶಬರಿ ಮಲೆಗೆ ರೈಲ್ವೆ ಮಾರ್ಗವನ್ನು ನಿರ್ಮಿಸುವ ಯೋಜನೆ ಹಣಕಾಸಿನ ಕೊರತೆ ಮತ್ತು ಕೇಂದ್ರ ಸರ್ಕಾರದಿಂದ ಅನುಪತಿ ಪಡೆಯಲು ವಿಳಂವಾದ ಹಿನ್ನೆಲೆಯಲ್ಲಿ ನೆನೆಗುದಿಗೆ ಬಿದ್ದಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಕೋರ್ಟ್`ಗೆ ಶಶಿಕಲಾ ಹಾಜರು.. ನಡೆದುಕೊಂಡೇ ಜೈಲಿಗೆ