Select Your Language

Notifications

webdunia
webdunia
webdunia
webdunia

ಕ್ಯಾಬ್ ಚಾಲಕನಿಂದ ಕೇರಳ ಉದ್ಯಮಿಯ ದರೋಡೆ

ಕ್ಯಾಬ್ ಚಾಲಕನಿಂದ ಕೇರಳ ಉದ್ಯಮಿಯ ದರೋಡೆ
ಬೆಂಗಳೂರು , ಭಾನುವಾರ, 2 ಜುಲೈ 2017 (13:00 IST)
ಇಂದು ಬೆಳಿಗ್ಗೆ ಕ್ಯಾಬ್‌ ಚಾಲಕನೊಬ್ಬ ಕೇರಳದ ಉದ್ಯಮಿಯಿಂದ 22 ಸಾವಿರ ರೂಪಾಯಿ ದರೋಡೆ ಮಾಡಿದ ಘಟನೆ ವರದಿಯಾಗಿದೆ.
 
ಇಂದು ಬೆಳಿಗ್ಗೆ 4.30 ಗಂಟೆ ಸುಮಾರಿಗೆ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಉದ್ಯಮಿಗೆ ಡ್ರಾಪ್ ಕೊಡುವ ನೆಪದಲ್ಲಿ ಹೆಬ್ಬಾಳದಲ್ಲಿ ಕಾರು ಹತ್ತಿಸಿಕೊಂಡ ಚಾಲಕ, ಯಲಹಂಕ ಜಂಕ್ಷನ್ ಬಳಿ ಉದ್ಯಮಿಗೆ ಚಾಕು ತೋರಿಸಿ ಉದ್ಯಮಿ ಬಳಿಯಿದ್ದ ಹಣದ ಬ್ಯಾಗ್‌ ಎತ್ತಿಕೊಂಡು ಪರಾರಿಯಾಗಿದ್ದಾನೆ.
 
ವಿಮಾನದಲ್ಲಿ ಮಹಾರಾಷ್ಟ್ರಕ್ಕೆ ತೆರಳಬೇಕಿದ್ದ ಉದ್ಯಮಿಯ 22 ಸಾವಿರ ರೂಪಾಯಿಗಳನ್ನು ದರೋಡೆ ಮಾಡಿದ ಚಾಲಕ ಕಾರಿನೊಂದಿಗೆ ಎಸ್ಕೇಪ್ ಆಗಿದ್ದಾನೆ.
 
ನಡು ರಸ್ತೆಯಲ್ಲಿ ಬಿಟ್ಟು ಕಾರಿನೊಂದಿಗೆ ಚಾಲಕ ಪರಾರಿಯಾಗಿರುವುದು ಕಂಡ ಉದ್ಯಮಿ, ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗಾಗಿ ಜಾಲ ಬೀಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಫೇಸ್ ಬುಕ್ ನಲ್ಲಿ ಪತ್ತೆಯಾಯ್ತು ಕಾಣೆಯಾದ ಕನ್ನಡಕ