Select Your Language

Notifications

webdunia
webdunia
webdunia
webdunia

ಕೇರಳ ಚುನಾವಣೆ: ಜೆಡಿಎಸ್ ಪಕ್ಷದ 3 ಅಭ್ಯರ್ಥಿಗಳು ಜಯಭೇರಿ

ಕೇರಳ ಚುನಾವಣೆ:  ಜೆಡಿಎಸ್ ಪಕ್ಷದ 3 ಅಭ್ಯರ್ಥಿಗಳು ಜಯಭೇರಿ
ಬೆಂಗಳೂರು , ಗುರುವಾರ, 19 ಮೇ 2016 (14:56 IST)
ಪಂಚ ರಾಜ್ಯಗಳ ವಿಧಾನಸಭೆಗೆ ನಡೆದ ಚುನಾವಣೆ ಫಲಿತಾಂಶ ಹೊರ ಬಿದಿದ್ದು, ದೇವರ ನಾಡು ಕೇರಳದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ನೇತೃತ್ವದ ಜೆಡಿಎಸ್ ಪಕ್ಷದ 3 ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.
 
ಕೇರಳ ವಿಧಾನಸಭೆ ಚನಾವಣೆ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಒಂದು ವಾರ ಪ್ರಚಾರ ನಡೆಸಿದ್ದರು. ಎಡರಂಗದ ಮೈತ್ರಿಕೂಟದೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್‌, ಐದು ಸ್ಥಾನಗಳಲ್ಲಿ ಸ್ಪರ್ಧಿಸಿ ಮೂರು ಸ್ಥಾನಗಳಲ್ಲಿ ಜಯಭೇರಿಯಾಗಿದೆ.
 
ಕೇರಳ ವಿಧಾನಸಭೆಯ ತಿರುವಳ್ಳಿ ಕ್ಷೇತ್ರದಿಂದ ಮ್ಯಾಥ್ಯೂ ಟಿ ಥಾಮಸ್, ಚಿತ್ತೂರ ಕ್ಷೇತ್ರದಿಂದ ಕೃಷ್ಣಣ ಕುಟ್ಟಿ ಮತ್ತು ವಡಕ್ಕರ ಕ್ಷೇತ್ರದಿಂದ ಸಿ.ಕೆ.ನಾಣು ಜೆಡಿಎಸ್‌ ಪಕ್ಷದಿಂದ ಸ್ಪರ್ಧೆ ಮಾಡಿ ಜಯಭೇರಿಯಾಗಿದ್ದಾರೆ. 
 
ಎಡರಂಗದ ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವಿಗೆ ಸಂತಸ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ದೇವೇಗೌಡರು, ಎಡರಂಗ ಮೈತ್ರಿಕೂಟದ ವಿ.ಎಸ್‌. ಅಚ್ಚುತಾನಂದ ಅವರಿಗೆ ಶುಭಾಷಯ ಕೋರಿ ಪತ್ರ ಬರೆದಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ..

Share this Story:

Follow Webdunia kannada

ಮುಂದಿನ ಸುದ್ದಿ

ಥಂಡಾ ಥಂಡಾ ಕೂಲ್, ಕೂಲ್; ಘೋರೆ ಘೋರೆ ತೃಣಮೂಲ್: ಬೆಂಬಲಿಗರ ಘೋಷಣೆ