Webdunia - Bharat's app for daily news and videos

Install App

Karnataka Weather: ರಾಜ್ಯದ ಈ ಜಿಲ್ಲೆಗಳಿಗೆ ಮಳೆ, ಹವಾಮಾನ ಬದಲಾವಣೆ ಗಮನಿಸಿ

Krishnaveni K
ಮಂಗಳವಾರ, 18 ಮಾರ್ಚ್ 2025 (08:30 IST)
ಬೆಂಗಳೂರು: ರಾಜ್ಯದಲ್ಲಿ ನಿನ್ನೆಯಿಂದ ಹವಾಮಾನದಲ್ಲಿ ಗಮನಾರ್ಹ ಬದಲಾವಣೆಯಾಗುತ್ತಿದ್ದು ಈ ವಾರ ಈ ಜಿಲ್ಲೆಗಳಲ್ಲಿ ಮಳೆ ಮತ್ತು ಹವಾಮಾನ ಬದಲಾವಣೆ ಹೇಗಿರಲಿದೆ ಇಲ್ಲಿದೆ ವಿವರ.

ನಿನ್ನೆಯಿಂದ ರಾಜ್ಯ ರಾಜಧಾನಿ ಬೆಂಗಳೂರು ಹವಾಮಾನದಲ್ಲೂ ಬದಲಾವಣೆಯಾಗಿದೆ. ಫೆಬ್ರವರಿಯಿಡೀ ಬಿಸಿಲಿನಿಂದ ತತ್ತರಿಸಿದ್ದ ಜನಕ್ಕೆ ಮಾರ್ಚ್ ನಲ್ಲಿ ಮಳೆಯ ಸೂಚನೆ ಸಿಗುತ್ತಿದೆ. ನಿನ್ನೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿತ್ತು. ಇಂದೂ ಅದೇ ರೀತಿ ವಾತಾವರಣ ಮುಂಧುವರಿಯಲಿದೆ.

ಇನ್ನು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ತಾಪಮಾನ 40 ಡಿಗ್ರಿಯ ಆಸುಪಾಸು ಬಂದು ನಿಂತಿದೆ. ಇಂದು ಮತ್ತು ನಾಳೆ ಈ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಕೆಲವೆಡೆ ಸಣ್ಣ ಹನಿ ಮಳೆಯಾಗುವ ಸಾಧ್ಯತೆಯಿದೆ. ಬುಧವಾರದಂದು ಮಳೆಯಾಗುವ ಸೂಚನೆಯಿದೆ.

ಇನ್ನು, ಸಾಂಸ್ಕೃತಿ ನಗರಿ ಮೈಸೂರಿಗೂ ಮಳೆಯ ಸೂಚನೆಯಿದೆ. ಬಿಸಿಲಿನಿಂದ ತತ್ತರಿಸಿದ್ದ ಮೈಸೂರಿನಲ್ಲಿ ಇಂದು ಅಥವಾ ನಾಳೆ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ, ಕೊಡಗು, ಹಾಸನ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿರಲಿದೆ. ಕರ್ನಾಟಕದ ಉತ್ತರ ಭಾಗಗಳಲ್ಲಿ ತಾಪಮಾನ ಯಥಾ ಪ್ರಕಾರ ಮುಂದುವರಿಯಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

India Pakistan: ನಿಮ್ಮ ಭಾಷಣ ಯಾರಿಗೆ ಬೇಕು, ಪಾಕಿಸ್ತಾನ ಪ್ರಧಾನಿಗೆ ಜನರಿಂದಲೇ ಛೀಮಾರಿ

India Pakistan: ಚಂಢೀಘಡದಲ್ಲಿ ಮೊಳಗಿದ ಸೈರನ್, ಪಾಕ್ ನಿಂದ ದಾಳಿ ನಿರೀಕ್ಷೆ

India Pakistan: ಭಾರತಕ್ಕೆ ಪಾಕಿಸ್ತಾನ ಅಟ್ಯಾಚ್ಡ್ ಟಾಯ್ಲೆಟ್, ಹಿಗ್ಗಾಮುಗ್ಗಾ ಟ್ರೋಲ್

Indian Army video: ಪಾಕಿಸ್ತಾನ ಸೇನಾ ಪೋಸ್ಟ್ ಉಡೀಸ್ ಮಾಡುವ ವಿಡಿಯೋ

Gold Price today: ಇಳಿಕೆಯಾದರೂ ಲಕ್ಷದ ಗಡಿಯಲ್ಲೇ ಇದೆ ಚಿನ್ನದ ದರ

ಮುಂದಿನ ಸುದ್ದಿ
Show comments