Select Your Language

Notifications

webdunia
webdunia
webdunia
webdunia

ವಿಪರೀತ ತಾಪಮಾನ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೀಡಿದ ಗೈಡ್ ಲೈನ್ಸ್ ಏನು

Dinesh Gundu Rao

Krishnaveni K

ಬೆಂಗಳೂರು , ಶನಿವಾರ, 15 ಮಾರ್ಚ್ 2025 (16:54 IST)
ಬೆಂಗಳೂರು: ರಾಜ್ಯದಲ್ಲಿ ಈಗ ಬಿಸಿಲಿನ ತಾಪ ಮಿತಿ ಮೀರಿದ್ದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಜನತೆಗೆ ಕೆಲವೊಂದು ಸಲಹೆ ಸೂಚನೆ ನೀಡಿದ್ದಾರೆ.

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ ಈಗ ತಾಪಮಾನ 35 ಡಿಗ್ರಿಗಿಂತ ಜಾಸ್ತಿಯೇ ಇದೆ. ಅದರಲ್ಲೂ ಕೆಲವೊಂದು ಕಡೆ 40 ದಾಟಿದೆ. ಈ ಹಿನ್ನಲೆಯಲ್ಲಿ ಮನೆಯಿಂದ ಹೊರಗೆ ಬರಲಾಗದ ಸ್ಥಿತಿಯಿದೆ.

ಹೀಗಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಧ್ಯಾಹ್ನ 12 ರಿಂದ 3 ರವರೆಗೆ ಮನೆಯಿಂದ ಹೊರಗೆ ಹೋಗಬೇಡಿ ಎಂದು ಸಲಹೆ ನೀಡಿದ್ದಾರೆ. ಈ ಸಮಯದಲ್ಲಿ ಮನೆ ಅಥವಾ ಕಚೇರಿಯೊಳಗೇ ಇರುವುದು ಸೂಕ್ತ. ಕೆಲಸಗಳೇನೇ ಇದ್ದರೂ ಈ ಸಮಯವನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ಮಾಡಿ ಎಂದು ಸಲಹೆ ನೀಡಿದ್ದಾರೆ.

ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ರಜೆ ಅಂತೂ ಕೊಡಲು ಆಗುವುದಿಲ್ಲ. ಆದರೆ ಫೀಲ್ಡ್ ವಿಸಿಟ್ ಮಾಡುವುದನ್ನು ತಪ್ಪಿಸಿ. ಉತ್ತಮ ಆಹಾರ, ನೀರು ಸೇವನೆ ಮಾಡಿ. ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ. ಮುಂದಿನ ದಿನಗಳಲ್ಲಿ ತಾಪಮಾನ ಇನ್ನಷ್ಟು ಏರಿಕೆಯಾಗಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾವೇರಿ ಸ್ವಾತಿ ಹತ್ಯೆ ಮಾಡಲು ನಯಾಜ್ ಗೆ ಸಹಾಯ ಮಾಡಿದ್ದ ಹಿಂದೂ ಸ್ನೇಹಿತರೂ ಅಂದರ್