Webdunia - Bharat's app for daily news and videos

Install App

Karnataka Rains: ಮುಂಗಾರು ಬಲು ಜೋರು ಎಂದು ಖುಷಿಪಡಬೇಡಿ, ಈ ಹವಾಮಾನ ವರದಿ ನೋಡಿ

Krishnaveni K
ಬುಧವಾರ, 28 ಮೇ 2025 (10:55 IST)
ಬೆಂಗಳೂರು: ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಮೊದಲೇ ಬಂದಿದೆ, ಹೀಗಾಗಿ ಈ ಬಾರಿ ನೀರಿಗೇನೂ ಕೊರತೆಯಾಗದು ಎಂದು ಖುಷಿಯಾಗಿದ್ದರೆ ಈ ಹವಾಮಾನ ವರದಿಯನ್ನು ಒಮ್ಮೆ ನೋಡಿ.

ಹವಾಮಾನ ವರದಿಗಳ ಪ್ರಕಾರ ಈ ಬಾರಿ ಬೇಗನೇ ಮುಂಗಾರು ಆಗಮನವಾಗಲಿದೆ ಎಂದಿತ್ತು. ಅದರಂತೆ ಮೇ ಕೊನೆಯ ವಾರದಲ್ಲೇ ಕೇರಳಕ್ಕೆ ಮುಂಗಾರು ಪ್ರವೇಶಿಸಿ, ದೇಶದಾದ್ಯಂತ ಅಬ್ಬರಿಸುತ್ತಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಂತೂ ಮಳೆ ರುದ್ರ ನರ್ತನ ಮಾಡಿತ್ತು.

ಹೀಗಾಗಿ ಈ ಬಾರಿ ನೆರೆಯುಂಟಾಗಬಹುದು, ಇನ್ನು ಸೆಪ್ಟೆಂಬರ್ ವರೆಗೂ ಎಡೆಬಿಡದೇ ಮಳೆಯಾಗಬಹುದು ಎಂದು ನೀವು ಅಂದುಕೊಂಡಿರಬಹುದು. ಆದರೆ ಹವಾಮಾನ ತಜ್ಞರ ಲೇಟೆಸ್ಟ್ ಮಾಹಿತಿ ಪ್ರಕಾರ ಈ ಬಾರಿ ಮುಂಗಾರು ಬೇಗನೇ ಬಂದಿರುವುದಕ್ಕೆ ಮುಖ್ಯ ಕಾರಣ ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಚಂಡಮಾರುತ.

ಇದರ ಪರಿಣಾಮವಾಗಿ ಎಲ್ಲೆಡೆ ಭಾರೀ ಮಳೆಯಾಗುತ್ತಿದೆ. ಜೂನ್ 2 ರವರೆಗೂ ಮುಂಗಾರು ಮಳೆಯ ಅಬ್ಬರ ಮುಂದುವರಿಯಲಿದೆ. ಆದರೆ ಅದಾದ ಬಳಿಕ 15 ದಿನಗಳಿಗೆ ವರುಣ ಬಿಡುವು ನೀಡಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಸತತವಾಗಿ ಮಳೆಯಾಗುವ ಸಾಧ್ಯತೆಯಿಲ್ಲ. ಸಾಮಾನ್ಯವಾಗಿ ಜೂನ್ 1 ಕ್ಕೆ ಆರಂಭವಾಗುವ ಮುಂಗಾರು ಜೂನ್ ಮಧ್ಯ ಭಾಗದವರೆಗೂ ನಿರಂತರವಾಗಿ ಸುರಿಯುತ್ತದೆ. ಆದರೆ ಈ ಬಾರಿ ಬೇಗನೇ ಮುಂಗಾರು ಆಗಮನವಾಗಿದ್ದು, ಜೂನ್ ಆರಂಭದಲ್ಲಿಯೇ ಬಿಡುವು ಪಡೆದುಕೊಳ್ಳಲಿದೆ. ನಂತರ ಜೂನ್ ಕೊನೆಯ ವಾರದಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಲ್ಲಾರೀ.. ಬಾಂಗ್ಲಾ ಅಕ್ರಮ ವಲಸಿಗನಿಗಾಗಿ ಭಾರತೀಯನನ್ನು ಬಂಧಿಸುತ್ತೀರಾ: ಗೃಹ ಇಲಾಖೆಗೆ ಪರೋಕ್ಷ ಚಾಟಿ ಬೀಸಿದ ನ್ಯಾ. ನಾಗಪ್ರಸನ್ನ

ಕರ್ನಾಟಕಕ್ಕೆ ಯಾರೆಲ್ಲಾ ನೂತನ ಸಚಿವರು, ಇಂದು ರಾಹುಲ್ ಗಾಂಧಿ ಫೈನಲ್ ಕಾಲ್

ಕಾಕ್ರೋಚ್ ಪಾರ್ಟಿ ಸುಪ್ರೀಂಕೋರ್ಟ್ ನಿಂದಲೂ ದೊಡ್ಡವರೇ: ಸೌರವ್ ದಾಸ್ ಹೇಳಿಕೆಗೆ ನೆಟ್ಟಿಗರ ಕಿಡಿ video

ನಿಮ್ಮ ಹೋರಾಟ ಬಿಜೆಪಿ ರಾಜ್ಯಕ್ಕೆ ಮಾತ್ರನಾ, ಪಂಜಾಬ್ ನಲ್ಲಿ ಯಾಕಿಲ್ಲ ಎಂದು ಯುವತಿ ಕೇಳಿದ್ದಕ್ಕೆ ಸಿಜೆಪಿ ಸೌರವ್ ದಾಸ್ ತಬ್ಬಿಬ್ಬು Video

ಪ್ರಲ್ಹಾದ್ ಜೋಶಿ ನಿಜವಾಗಿಯೂ ರೇಪಿಸ್ಟ್ ಗಳನ್ನು ಸಮರ್ಥಿಸಿದ್ರಾ: ಪ್ರಿಯಾಂಕಾ ಗಾಂಧಿ ಆರೋಪದ ನಿಜಾಂಶವೇನು

ಮುಂದಿನ ಸುದ್ದಿ
Show comments