Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಮಳೆ ಹೆಚುವರಿ ಪರಿಹಾರಕ್ಕೆ ಸರ್ಕಾರ ಪರಿಹಾರ

ರಾಜ್ಯದಲ್ಲಿ ಮಳೆ ಹೆಚುವರಿ ಪರಿಹಾರಕ್ಕೆ ಸರ್ಕಾರ ಪರಿಹಾರ
ಬೆಂಗಳೂರು , ಬುಧವಾರ, 13 ಜುಲೈ 2022 (16:55 IST)
ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಆಗಿರುವ ಹಾನಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೆಚ್ಚುವರಿ ಪರಿಹಾರ ನಿಗದಿಪಡಿಸಿ ಆದೇಶ ಹೊರಡಿಸಿದೆ.
 
ಹೌದು.. ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ
ಬೆನ್ನಲ್ಲೇ ರಾಜ್ಯದಲ್ಲಿ ನೆರೆ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಈ ಬಾರಿಯೂ ಕೇಂದ್ರ ಸರ್ಕಾರದ ಎಸ್ ಡಿಆರ್ ಎಫ್/ಎನ್ ಡಿಆರ್ ಎಫ್ ಮಾರ್ಗಸೂಚಿಗಿಂತ ಹೆಚ್ಚುವರಿ ಪರಿಹಾರ ನಿಗದಿ ಪಡಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
 
ಎಸ್ ಡಿಆರ್ ಎಫ್/ಎನ್ ಡಿಆರ್ ಎಫ್ ಮಾರ್ಗಸೂಚಿ ದರ ಮತ್ತು ಪರಿಷ್ಕೃತ ದರ ಹೀಗಿದೆ.
* ಮಾನವ ಜೀವಹಾನಿಗೆ ಎಸ್ ಡಿಆರ್ ಎಫ್/ಎನ್ ಡಿಆರ್ ಎಫ್ ಮಾರ್ಗಸೂಚಿ ದರ 4 ಲಕ್ಷ ರೂ. ಇದ್ದು, ಪರಿಷ್ಕೃತ ದರ 5 ಲಕ್ಷ ರೂ ನಿಗದಿಪಡಿಸಿದೆ.
* ಪ್ರವಾಹ ನೀರು ನುಗ್ಗಿರುವ ಮನೆಗಳು ಗೃಹೋಪಯೋಗಿ ವಸ್ತುಗಳು ಹಾಗೂ ಬಟ್ಟೆ ಬರೆ ಹಾನಿಗೆ ರೂ 3,800 (ಎಸ್ ಡಿಆರ್ ಎಫ್/ಎನ್ ಡಿಆರ್ ಎಫ್ ಮಾರ್ಗಸೂಚಿ ದರ), ಪರಿಷ್ಕೃತ ದರ 10,000 ರೂ.
* ಶೇ 75ಕ್ಕಿಂತ ಹೆಚ್ಚು ಸಂಪೂರ್ಣ ಹಾನಿ ಎಂ ವರ್ಗಕ್ಕೆ 95,೧೦೦ (ಎಸ್ ಡಿಆರ್ ಎಫ್/ಎನ್ ಡಿಆರ್ ಎಫ್ ಮಾರ್ಗಸೂಚಿ ದರ), ಪರಿಷ್ಕೃತ ದರ 5 ಲಕ್ಷ ರೂ.
* ಶೇ. 25 ರಿಂದ ಶೇ 75ರಷ್ಟು ತೀವ್ರ ಮನೆಹಾನಿ (ಕೆಡವಿ ಹೊಸದಾಗಿ ನಿರ್ಮಿಸುವುದು) ಬಿ೨ ವರ್ಗಕ್ಕೆ 95,೧೦೦ (ಎಸ್ ಡಿಆರ್ ಎಫ್/ಎನ್ ಡಿಆರ್ ಎಫ್ ಮಾರ್ಗಸೂಚಿ ದರ), ಪರಿಷ್ಕೃತ ದರ ೫ ಲಕ್ಷ ರೂ.
* ಶೇ. 25 ರಿಂದ ಶೇ 75ರಷ್ಟು ತೀವ್ರ ಮನೆಹಾನಿ (ದುರಸ್ಥಿ), ಬಿ1 ವರ್ಗಕ್ಕೆ 95,೧೦೦ (ಎಸ್ ಡಿಆರ್ ಎಫ್/ಎನ್ ಡಿಆರ್ ಎಫ್ ಮಾರ್ಗಸೂಚಿ ದರ), ಪರಿಷ್ಕೃತ ದರ 3 ಲಕ್ಷ ರೂ.
* ಶೇ. 15 ರಿಂದ 25ರಷ್ಟು ಭಾಗಶಃ ಮನೆ ಹಾನಿ ಸಿ ವರ್ಗಕ್ಕೆ 5200 ರೂ. (ಎಸ್ ಡಿಆರ್ ಎಫ್/ಎನ್ ಡಿಆರ್ ಎಫ್ ಮಾರ್ಗಸೂಚಿ ದರ), ಪರಿಷ್ಕೃತ ದರ 50 ಸಾವಿರ ರೂ.

Share this Story:

Follow Webdunia kannada

ಮುಂದಿನ ಸುದ್ದಿ

ಸಮುದ್ರದ ದಡದಲ್ಲಿ ಸೆಲ್ಫಿ ಕ್ರೇಜ್ 8 ಮಂದಿ ಕೊಚ್ಚಿ ಹೋದ ಹೃದಯವಿದ್ರಾಕ ಘಟನೆ