Webdunia - Bharat's app for daily news and videos

Install App

ಕರ್ನಾಟಕ ಮಳೆ ಇಫೆಕ್ಟ್: ತರಕಾರಿ, ಹಣ್ಣು ಬೆಲೆ ಕೇಳೋ ಹಾಗೆಯೇ ಇಲ್ಲ

Krishnaveni K
ಮಂಗಳವಾರ, 6 ಆಗಸ್ಟ್ 2024 (09:37 IST)
ಬೆಂಗಳೂರು:  ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರಿಂದಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಜನರಿಗೆ ಹೊರೆಯಾಗುತ್ತಿದೆ.

ಬೆಂಗಳೂರಿನಲ್ಲಿ ಮಳೆ ಶುರುವಾದಾಗಿನಿಂದ ತರಕಾರಿ ಬೆಲೆ ಗಗನಕ್ಕೇರುತ್ತಲೇ ಇದೆ. ಇದರ ನಡುವೆ ಕೆಲವು ದಿನ ತಕ್ಕಮಟ್ಟಿಗೆ ಇಳಿಕೆಯಾಗಿತ್ತು. ಆದರೆ ಕಳೆದ ಎರಡು ವಾರಗಳಿಂದ ಕರ್ನಾಟಕದ ಹಲವೆಡೆ ಭಾರೀ ಮಳೆಯಾಗುತ್ತಿದೆ ನೆರೆಯ ವಾತಾವರಣವಿದೆ. ಇದರಿಂದಾಗಿ ರೈತರು ಬೆಳೆದ ಬೆಳೆಯೂ ನಷ್ಟವಾಗಿದೆ.

ಹೀಗಾಗಿ ಸಹಜವಾಗಿಯೇ ತರಕಾರಿ ಬೆಲೆ ಗಗನಕ್ಕೇರಿದೆ. ಕೇವಲ ತರಕಾರಿ ಮಾತ್ರವಲ್ಲ, ಹಣ್ಣುಗಳ ಬೆಲೆಯೂ ದುಪ್ಪಟ್ಟಾಗಿದೆ. ಇನ್ನೇನು ಹಬ್ಬಗಳ ಸೀಸನ್ ಆರಂಭವಾಗುತ್ತಿದ್ದು ಬೆಲೆ ಏರಿಕೆ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರತಿನಿತ್ಯ ಬಳಕೆ ಮಾಡುವ ತರಕಾರಿ ಹಣ್ಣುಗಳ ಬೆಲೆ ಏರಿಕೆಯಾಗಿದೆ.

ಬೀನ್ಸ್, ಕ್ಯಾರಟ್, ನುಗ್ಗೆಕಾಯಿ, ಬದನೆ 100 ರ ಗಡಿ ದಾಟಿದೆ. ಬಟಾಣಿ, ಬೆಳ್ಳುಳ್ಳಿ ಅಂತೂ 300 ರ ಗಡಿ ದಾಟಿದೆ. ಈರುಳ್ಳಿ ಕೆಜಿಗೆ 60 ರೂ. ತಲುಪಿದೆ. ದಪ್ಪಮೆಣಸಿನಕಾಯಿ, ಹಾಗಲಕಾಯಿ, ಹೀರೇಕಾಯಿ 80 ರೂ. ದಾಟಿದೆ. ಕೊತ್ತಂಬರಿ ಸೊಪ್ಪು 70, ಪುದಿನಾ 90 ರ ಗಡಿ ಮುಟ್ಟಿದೆ. 

ಹಣ್ಣುಗಳ ಕತೆಯೂ ಇದೇ. ಸೇಬು,  ದ್ರಾಕ್ಷಿ 300 ರ ಗಡಿ ದಾಟಿದೆ. ಬಟರ್ ಫ್ರೂಟ್ ಸೀಸನ್ ಆಗಿದ್ದರೂ 250 ರೂ. ಇದೆ. ಕಿತ್ತಳೆ, ಸಪೋಟ 200, ಪೈನಾಪಲ್ 150 ರೂ.ಗಳಷ್ಟಿದೆ. ಮೂಸಂಬಿ 140, ಬಾಳೆ ಹಣ್ಣು 80, ಪಪ್ಪಾಯ 50 ರೂ.ಗಳಷ್ಟು ಬೆಲೆ ಬಾಳುತ್ತಿದೆ. ಹೀಗೇ ಆದರೆ ಹಬ್ಬ ಆಚರಿಸುವುದು ಹೇಗೆ ಎಂಬ ಚಿಂತೆ ಬೆಂಗಳೂರಿಗರದ್ದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments