Webdunia - Bharat's app for daily news and videos

Install App

ನಿರ್ಜನ ಪ್ರದೇಶಕ್ಕೆ ಹೋಗಬಾರದು: ಆನಂದ್ ಸಿಂಗ್ ಅವಿವೇಕದ ಮಾತು

Webdunia
ಗುರುವಾರ, 26 ಆಗಸ್ಟ್ 2021 (19:30 IST)

ರಾಜ್ಯದಲ್ಲಿ ಗುಡ್ಡ ಬೆಟ್ಟ ಕಾಡು ಪ್ರದೇಶ ಹೆಚ್ಚಾಗಿದೆ. ಕಪಲ್ಸ್ (ಜೋಡಿಗಳು) ಇಂತಹ ನಿರ್ಜನ ಪ್ರದೇಶ ಪ್ರದೇಶಕ್ಕೆ ಹೋಗಬಾರದು ಎಂದು ಹೇಳುವ ಮೂಲಕ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ವಿವಾದದ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಮೈಸೂರಿನಲ್ಲಿ ನಡೆದ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ವಿಚಾರವಾಗಿ ಇಂದು ಖನಿಜ ಭವನದಲ್ಲಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಮಾತನಾಡಿ, ಇಂತಹ ನೀಚ ಕೃತ್ಯಗಳನ್ನು ಯಾರೇ ಎಷ್ಟೇ ದೊಡ್ಡವರು ಮಾಡಿದ್ದರು ಅದು ತಪ್ಪೇ. ಇಂತಹ ಘಟನೆಗಳು ಬಹಳಷ್ಟು ಬೆಳಕಿಗೆ ಬರುವುದಿಲ್ಲ ಎಂದರು.
 

ನಮ್ಮದು ಹಂಪಿ‌ ಪ್ರವಾಸಿ ತಾಣವೇ ಆಗಿದ್ದು, ರಿಮೋಟ್ ಏರಿಯಾದಲ್ಲಿ ಆಗಾಗ ಕಪಲ್ಸ್ ಬರ್ತಾನೇ ಇರ್ತಾರೆ. ಅವರಿಗೆ ಗೊತ್ತಿರಲಿಲ್ಲ, ಇಂತಹ ಅನಾಹುತಕ್ಕೆ ಸಿಕ್ತೇವೆ ಅಂತ. ಕೆಲವು ಗುಂಪುಗಳು ಇದನ್ನ‌ ವಾಚ್ ಮಾಡ್ತಿರ್ತಾರೆ. ಬ್ಲಾಕ್ ಮೇಲೆ ಮಾಡಿ ಹಣ ವಸೂಲಿ ಮಾಡ್ತಾರೆ ನಮ್ಮಲ್ಲಿ ಗುಡ್ಡ ಕಾಡು ಹೆಚ್ಚಾಗಿದ್ದರಿಂದ ಕಪಲ್ಸ್ ಗಳು ಇಂತಹ ಸ್ಥಳಕ್ಕೆ‌ಹೋಗಬಾರದು. ಅಂತಹ ಸ್ಥಳಗಳಲ್ಲಿ ಅವೇರ್ನೆಸ್ ಮೂಡಿಸುವ ಕೆಲಸ ಮಾಡಬೇಕೆ ಹೊರತು ಪೊಲೀಸರನ್ನ‌ ಇಟ್ಟು ಕಾವಲು ಕಾಯಿಸೋಕೆ ಆಗಲ್ಲ. ಜನರಲ್ಲಿ ನಾವು ಜಾಗೃತಿ ಮೂಡಿಸಬೇಕು. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲೇಬೇಕು. ನಮ್ಮ‌ಸರ್ಕಾರ ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಹೇಳಿದರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments