ಕರ್ನಾಟಕ ಜಾತಿ ಗಣತಿ ಇಂದಿನಿಂದ: ಹೊರರಾಜ್ಯದಿಂದ ಬಂದವರು, ಎರಡು ಪಡಿತರ ಚೀಟಿ ಇದ್ದವರಿಗೆ ಈ ಮಾಹಿತಿ

Krishnaveni K
ಸೋಮವಾರ, 22 ಸೆಪ್ಟಂಬರ್ 2025 (10:25 IST)
ಬೆಂಗಳೂರು: ಇಂದಿನಿಂದ ಕರ್ನಾಟಕದಲ್ಲಿ ಜಾತಿಗಣತಿ ಆರಂಭವಾಗಲಿದ್ದು, ಹೊರರಾಜ್ಯದಿಂದ ಬಂದವರು, ಎರಡು ಪಡಿತರ ಚೀಟಿ ಹೊಂದಿರುವವರು ತಪ್ಪದೇ ಈ ಮಾಹಿತಿಯನ್ನು ಗಮನಿಸಿ.

ಇಂದಿನಿಂದ ಅಕ್ಟೋಬರ್ 7 ರವರೆಗೆ ಮನೆ ಮನೆಗೆ ಅಧಿಕಾರಿಗಳು ಬಂದು ಸಮೀಕ್ಷೆ ನಡೆಸಲಿದ್ದಾರೆ. ಈ ವೇಳೆ ನಿಮ್ಮ ಆಧಾರ್ ಕಾರ್ಡ್, ಮೊಬೈಲ್, ಪಡಿತರ ಚೀಟಿ ಜೊತೆಗಿರುವುದು ಕಡ್ಡಾಯವಾಗಿದೆ. ಸಮೀಕ್ಷೆಯಲ್ಲಿ ಕೇಳಲಾಗುವ ಮಾಹಿತಿಯನ್ನು ತಪ್ಪದೇ ನೀಡಬೇಕಾಗುತ್ತದೆ.

ಒಂದು ವೇಳೆ ನೀವು ಹೊರ ರಾಜ್ಯದಿಂದ ಬಂದು ಇಲ್ಲಿ ನೆಲೆಸಿದ್ದರೂ ನಿಮ್ಮ ಮಾಹಿತಿಗಳನ್ನು ನೀಡಬೇಕಾಗುತ್ತದೆ. ವಿದೇಶದಲ್ಲಿರುವ ಕನ್ನಡಿಗರೂ ಆನ್ ಲೈನ್ ಮೂಲಕ ಮಾಹಿತಿಯನ್ನು ಒದಗಿಸಬೇಕಾಗುತ್ತದೆ.

ಇನ್ನು, ಒಂದೇ ಕುಟುಂಬದವರು ಎರಡು ಪಡಿತರ ಚೀಟಿ ಹೊಂದಿದ್ದರೂ ಅವರು ಎರಡು ಕುಟುಂಬ ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಗಂಡ ಮತ್ತು ಹೆಂಡತಿಯ ಜಾತಿ ಬೇರೆಯಾಗಿದ್ದರೆ ಮಕ್ಕಳಿಗೆ ತಂದೆಯ ಜಾತಿಯನ್ನೇ ಪರಿಗಣಿಸಲಾಗುತ್ತದೆ. ಗಣತಿ ಪ್ರಕ್ರಿಯೆ ಮುಗಿದ ಬಳಿಕ ಮಾಹಿತಿ ಬದಲಾಯಿಸಲು ಅವಕಾಶವಿರಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯುಎಸ್‌ಎ, ಇರಾನ್ ಶಾಂತಿ ಮಾತುಕತೆ ದಿಡೀರ್ ರದ್ದು

ಮೇಕೆದಾಟುವಿಗಾಗಿ ಕರ್ನಾಟಕ ವಿರುದ್ಧ ಪಕ್ಷಬೇಧ ಮರೆತು ಒಂದಾದ ತಮಿಳುನಾಡು: ಕರ್ನಾಟಕದಲ್ಲಿ ಮಾತ್ರ....

Gold Price: ಚಿನ್ನದ ದರ ಇಂದು ಮತ್ತೆ ಬಲು ದುಬಾರಿ

Rahul Gandhi birthday: ಕೈಯಲ್ಲಿ ಕೊಡಲಿ, ಸಂವಿಧಾನ ಪುಸ್ತಕ, ಹಣೆಯಲ್ಲಿ ಭಸ್ಮ ಹಾಕಿದ ರಾಹುಲ್ ಗಾಂಧಿಗೆ ಗಂಗಾಭಿಷೇಕ

ವಿಧಾನಪರಿಷತ್ ಚುನಾವಣೆ ಗೆದ್ದ ತಕ್ಷಣ ಸಿಎಂ ಡಿಕೆ ಶಿವಕುಮಾರ್ ಮಾಡಿದ ಕೆಲಸವೇನು ಗೊತ್ತಾ

ಮುಂದಿನ ಸುದ್ದಿ
Show comments