Webdunia - Bharat's app for daily news and videos

Install App

ಕಾರ್ಕಳದಲ್ಲಿ ಪತಿಗೆ ವಿಷವಿಕ್ಕಿ ಹತ್ಯೆ ಮಾಡಿದ ಪತ್ನಿ ಪ್ರತಿಮಾ ಮತ್ತು ಪ್ರಿಯಕರ ದಿಲೀಪ್ ಕತೆ ಏನಾಗಿದೆ ಇಲ್ಲಿದೆ ಡೀಟೈಲ್ಸ್

Krishnaveni K
ಶನಿವಾರ, 26 ಅಕ್ಟೋಬರ್ 2024 (15:06 IST)
Photo Credit: X
ಕಾರ್ಕಳ: ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಗೆ ಸ್ಲೋ ಪಾಯಿಸನ್ ನೀಡಿ ಹತ್ಯೆ ಮಾಡಿದ ಕಾರ್ಕಳದ ಅಜೆಕಾರ್ ನ ಪ್ರತಿಮಾ ಮತ್ತು ಆಕೆಯ ಪ್ರಿಯಕರ ದಿಲೀಪ್ ಪ್ರಕರಣ ಎಲ್ಲಿಗೆ ಬಂದು ನಿಂತಿದೆ ಎಂಬ ವಿವರ ಇಲ್ಲಿದೆ.

ಪತಿ ಬಾಲಕೃಷ್ಣಗೆ ಸ್ಲೋ ಪಾಯಿಸನ್ ನೀಡಿ ಬಳಿಕ ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ. ಹೋಟೆಲ್ ಮಾಲಿಕನಾಗಿದ್ದ ದಿಲೀಪ್ ಜೊತೆ ಪ್ರತಿಮಾಗೆ ಅಕ್ರಮ ಸಂಬಂಧವಿತ್ತು. ದಿಲೀಪ್ ನೀಡಿದ್ದ ವಿಷವನ್ನು ಪ್ರತಿಮಾ ಪ್ರತಿನಿತ್ಯ ಪತಿ ಬಾಲಕೃಷ್ಣಗೆ ಊಟದಲ್ಲಿ ಮಿಕ್ಸ್ ಮಾಡಿ ನೀಡುತ್ತಿದ್ದಳು.

ಪರಿಣಾಮ ಬಾಲಕೃಷ್ಣ ಅಸ್ವಸ್ಥನಾಗಿದ್ದ. ಆತನನ್ನು ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಚೇತರಿಸಿಕೊಂಡು ಮನೆಗೆ ಬಂದಿದ್ದರು. ಆದರೆ ಒಂದೂವರೆ ತಿಂಗಳು ವಿಷ ನೀಡಿದರೂ ಆತ ಸಾಯದೇ ಇದ್ದಿದ್ದರಿಂದ ಪ್ರತಿಮಾ  ಮನೆಯಲ್ಲಿ ಯಾರೂ ಇಲ್ಲದೇ ಇರುವಾಗ ರಾತ್ರಿ ಪ್ರಿಯಕರ ದಿಲೀಪ್ ನನ್ನು ಕರೆಸಿ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ.

ಪ್ರಕರಣ ಸಂಬಂಧ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಇದೀಗ ಪ್ರತಿಮಾಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆದರೆ ಪ್ರಿಯಕರ ದಿಲೀಪ್ ನನ್ನು 5 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಬಾಲಕೃಷ್ಣನಿಗೆ ಯಾವ ವಿಷ ನೀಡಲಾಗಿದೆ, ಎಲ್ಲಿಂದ ಖರೀದಿಸಲಾಗಿದೆ ಇತ್ಯಾದಿ ಮಾಹಿತಿಯನ್ನು ಪೊಲೀಸರು ಕಲೆ ಹಾಕಬೇಕಿದೆ. ಹೀಗಾಗಿ ಆತನನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಹದೇವಪುರ ಕ್ಷೇತ್ರದಲ್ಲಿ ಎಷ್ಟು ನಕಲಿ ಮತದಾರರಿದ್ದರು: ದಾಖಲೆ ಬಿಡುಗಡೆ ಮಾಡಿದ ರಾಹುಲ್ ಗಾಂಧಿ

ಪುಣೆ: ಬೀದಿ ನಾಯಿಯನ್ನು ಬಿಡದ ಕಾಮುಕ, ಕರ್ನಾಟಕದವನ ಮೇಲೆ ಬಿತ್ತು ಪ್ರಕರಣ

ನಾಳೆ ರಾಜ್ಯಕ್ಕೆ ರಾಹುಲ್ ಗಾಂಧಿ, ಸಿಲಿಕಾನ್ ಸಿಟಿ ಮಂದಿಗೆ ಟ್ರಾಫಿಕ್ ಬಿಸಿ

ಧರ್ಮಸ್ಥಳ ಸುತ್ತ ಮುತ್ತಾ ಅಹಿತಕರ ಘಟನೆಯಲ್ಲಿ ಭಾರೀ ಬೆಳವಣಿಗೆ

ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿರುದ್ಧ ಕೋಟ್ಯಾಂತರ ರೂಪಾಯಿ ಗುಳುಂ: ಬಿಜೆಪಿ ಆರೋಪ

ಮುಂದಿನ ಸುದ್ದಿ
Show comments