Select Your Language

Notifications

webdunia
webdunia
webdunia
webdunia

ಬಿಎಸ್‌ವೈ ತಂಗಿ, ಕುಟುಂಬಸ್ಥರನ್ನು ನಿಂದಿಸಿದ ಕಾ.ಪು.ಸಿದ್ದಲಿಂಗಸ್ವಾಮಿ

ಬಿಎಸ್‌ವೈ ತಂಗಿ, ಕುಟುಂಬಸ್ಥರನ್ನು ನಿಂದಿಸಿದ ಕಾ.ಪು.ಸಿದ್ದಲಿಂಗಸ್ವಾಮಿ
ಮೈಸೂರು , ಶುಕ್ರವಾರ, 5 ಮೇ 2017 (11:27 IST)
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತಂಗಿ, ಕುಟುಂಬಸ್ಥರನ್ನು ಅವರ ಆಪ್ತ ಕಾ.ಪು.ಸಿದ್ದಲಿಂಗಸ್ವಾಮಿ ನಿಂದಿಸಿದ ಆಡಿಯೋ ನಗರಾದ್ಯಂತ ಹರಿದಾಡುತ್ತಿದೆ.
 
ಯಡಿಯೂರಪ್ಪ ಅವರ ತಂಗಿಯ ಮಗ ರಾಜೇಶ್‌ನಿಗೆ ಮೊಬೈಲ್ ಫೋನ್ ಮೂಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ, ನೀನು ದುರಹಂಕಾರಿ, ನಗರಸಭೆ ಚುನಾವಣೆಯಲ್ಲೂ ಕೂಡಾ ಗೆಲ್ಲದ ನಿನಗೆ ಯಡಿಯೂರಪ್ಪ ಹೆಸರು ಹೇಳಿಕೊಂಡು ಯಾಕೆ ಬದುಕುತ್ತೀಯಾ ಎಂದು ಸಿದ್ದಲಿಂಗ ಸ್ವಾಮಿ ಟೀಕಿಸಿರುವುದು ವಾಟ್ಸಪ್‌ಗಳಲ್ಲಿ ಹರಿದಾಡುತ್ತಿದೆ.
 
ಸಿದ್ದಲಿಂಗಯ್ಯ ಸ್ವಾಮಿಗೆ ಪ್ರತಿಕ್ರಿಯೆ ನೀಡಿರುವ ರಾಜೇಶ್, ನೀವು ನಮ್ಮ ಮನೆಯಲ್ಲಿ ಬೆಳೆದು, ಶ್ರೀಮಂತರಾಗಿ ಇದೀಗ ನಮ್ಮ ಕುಟುಂಬದವರ ವಿರುದ್ಧವೇ ಹೇಳಿಕೆ ನೀಡುತ್ತಿದ್ದೀರಿ. ನಿಮ್ಮ ಸಾವು ಕೊನೆಗೆ ಬಂದಿದೆ. ಅಪಘಾತದಲ್ಲಿ ಸಾವನ್ನಪ್ಪುತ್ತೀಯಾ ಎಂದು ಎಚ್ಚರಿಕೆ ನೀಡಿದ ಆಡಿಯೋ ಕೂಡಾ ಬಹಿರಂಗವಾಗಿದೆ.
 
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಮಗೆ ದೇವರ ಸಮಾನ. ಅವರ ಹೆಸರು ಹೇಳಿ ಬದುಕುವುದಕ್ಕಿಂತ ನಿಮ್ಮ ಸಾಧನೆ ಏನು ಎನ್ನುವುದನ್ನು ತೋರಿಸಿ? ಅವರ ಹೆಸರಿನ ಮೇಲೆ ಜೀವನ ಮಾಡುವುದು ಬಿಡಿ ಎಂದು ಕಾ.ಪು.ಸಿದ್ದಲಿಂಗ ಸ್ವಾಮಿ ತಿರುಗೇಟು ನೀಡಿರುವುದು ಬಿಜೆಪಿ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಭೂವಿವಾದಗಳಿಂದ ದೂರವಿರಿ: ಪೊಲೀಸರಿಗೆ ಸಿಎಂ ವಾರ್ನಿಂಗ್