Publish Date: Sat, 24 Jun 2023 (20:38 IST)
Updated Date: Sat, 24 Jun 2023 (16:59 IST)
ಕನ್ನಡ ಬರಹಗಾರರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.ಪ್ರಕಾಶಕರು,ಬರಹಗಾರರ ಸಂಘದಿಂದ ಬೆಂಗಳೂರಿನ ಗಾಂಧಿಭವನದಲ್ಲಿ ಕಾರ್ಯಕ್ರಮ ಅಸಯೋಜನೆ ಮಾಡಲಾಗಿತ್ತು.ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ 20 ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, ನಾಡೋಜ ಹಂ. ನಾಗರಾಜಯ್ಯ, ನಿವೃತ್ತ ಉಪಕುಲಪತಿ ಮಲ್ಲಿಕಾಗಂಟಿ, ನಿಡಸಾಲೆ ಪುಟ್ಟಸ್ಚಾಮಿ ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಮಾ.ಕುಲಪತಿ ಮಲ್ಲಿಕಾಘಂಟಿ ಕೂಡ ಕುರುಬರು ನಾನುಕೂಡ ಕುರುಬ. ಇಟ್ಸ್ ಎ ಫ್ಯಾಕ್ಟ್ ಅದ್ರಲ್ಲಿ ಅಂತಾದ್ದೇನು ಇಲ್ಲ.ಇಲ್ಲಿ ಸಮಾಜಕ್ಕೆ ನಾವು ಏನು ಕೊಟ್ವಿ ಅನ್ನೋದು ಮುಖ್ಯ.ಸಮಾಜದ ಅನೇಕ ನ್ಯೂನತೆ ತೆಗೆದುಹಾಕಬೇಕು.ಅಸಮಾನತೆಯನ್ನ ತೊಡೆದು ಹಾಕಬೇಕು.ಎಲ್ಲಿವರೆಗೆ ಅಸಮಾನತೆ ಇರುತ್ತೆ.ಅಲ್ಲಿಯವರೆಗೆ ದೇಶ ಅಭಿವೃದ್ಧಿಯಾಗಲ್ಲ.ಈ ನಿಟ್ಟಿನಲ್ಲಿ ನಾವೆಲ್ಲರೂ ಗಮನಹರಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ರು.