Publish Date: Sun, 31 Oct 2021 (19:31 IST)
Updated Date: Sun, 31 Oct 2021 (19:37 IST)
ನಾಳೆ ಕನ್ನಡ ರಾಜ್ಯೋತ್ಸವ. ಕೊರೊನಾ ಇಳಿಮುಖವಾದ ಮೇಲೆ ಕನ್ನಡದ ಹಬ್ಬವನ್ನು ಆಚರಿಸಲು ಸಿದ್ದತೆ ನಡೆಸಲಾಗಿತ್ತು. ಆದರೆ ಸರಳತೆಯ ಸಾಮ್ರಾಟ್, ವೀರ ಕನ್ನಡಿಗ ಪವರ್ ಸ್ಠಾರ್ ಪುನೀತ್ ರಾಜ್ಕುಮಾರ್ ಬಾರದೂರಿಗೆ ತೆರಳಿದ್ದಾರೆ. ಹೀಗಾಗಿ ಯಾರಿಗೂ ಅದ್ದೂರಿಯಾಗಿ ರಾಜ್ಯೋತ್ಸವ ಆಚರಿಸಲು ಮನಸ್ಸಿಲ್ಲ. ಹೀಗಾಗಿ ಕನ್ನಡದ ಹಬ್ಬವನ್ನು ಸರಳವಾಗಿ ಆಚರಿಸಲು ಕನ್ನಡ ಪರ ಸಂಘಟನೆಗಳು ನಿರ್ಧರಿಸಿವೆ. ಸಾಕೇಂತಿಕವಾಗಿ ಧ್ವಜಾರೋಹಣ ನೆರವೇರಿಸಿ, ಯುವರತ್ನ ಪುನೀತ್ ರಾಜ್ಕುಮಾರ್ಗೆ ಶ್ರದ್ದಾಂಜಲಿ ಸಲ್ಲಿಸಲಾಗುತ್ತದೆ.