Webdunia - Bharat's app for daily news and videos

Install App

Coastal Karnataka: ಕರಾವಳಿಯ ಮಳೆಗಾಲದ ಅತಿಥಿ ಕಲ್ಲಣಬೆಗೆ ಭಾರೀ ಡಿಮ್ಯಾಂಡ್‌

Sampriya
ಮಂಗಳವಾರ, 10 ಜೂನ್ 2025 (15:38 IST)
Photo Courtesy X
ಕರಾವಳಿ ಭಾಗದಲ್ಲಿ ಮುಂಗಾರು ಪ್ರವೇಶವಾಗುತ್ತಿದ್ದ ಹಾಗೇ  ಅಲ್ಲಿನ ಜನರ ಬದುಕಿನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣಬಹುದು. ಬೇರೆ ಭಾಗದ ಜನರಿಗೆ ಹೋಲಿಕೆ ಮಾಡಿದರೆ ಕರಾವಳಿ ಭಾಗದ ಜನರಿಗೆ ಮಳೆಗಾಲ ತಮ್ಮ ಆಹಾರ ಶೈಲಿಯಲ್ಲಿ ಭಾರೀ ಬದಲಾವಣೆಯನ್ನು ತರುತ್ತದೆ.  

ಈ ಸಮಯದಲ್ಲಿ ಇಲ್ಲಿನ ಜನರು ಆದಷ್ಟು ನೈಸರ್ಗಿಕವಾಗಿ ಸಿಗುವ ಆಹಾರಗಳನ್ನೇ ತಮ್ಮ ಖಾದ್ಯಗಳನ್ನಾಗಿ ಮಾಡುತ್ತಾರೆ. ವಿಶೇಷವಾಗಿ ಹಲಸಿನಕಾಯಿ, ಮಾವಿನಹಣ್ಣು, ಕೆಸುವಿನ ಎಲೆ, ಜೀ ಹಲಸು ಹೀಗೇ. 

ಇನ್ನೂ ಮಳೆಗಾಲದ ಅತಿಥಿ ಕಲ್ಲಣಬೆಗೆ ಭಾರೀ ಡಿಮ್ಯಾಂಡ್‌ ಇರುತ್ತದೆ. ಮಳೆ ಮತ್ತು ಗುಡುಗು ಸದ್ದಿಗೆ ಮಣ್ಣಿನ ಅಡಿಯಿಂದ ಕಲ್ಲಣಬೆ ಮೊಳಕೆಯೊಡೆಯುತ್ತದೆ. ಈ ಕಲ್ಲಣಬೆಯ ಸಾಂಬಾರು, ಗ್ರೀವಿಯ ರುಚಿ ಮಾತ್ರ ಅದ್ಭುತವಾಗಿರುತ್ತದೆ. ಒಮ್ಮೆ ತಿಂದ್ರೆ ಮಾತ್ರ ಈ ಖಾದ್ಯ ನಿಮ್ಮ ಫೆವರೆಟ್ ಖಾದ್ಯಗಳಲ್ಲಿ ಒಂದಾಗಿರುವುದರಲ್ಲಿ ಯಾವುದೇ ಡೌಟೇ ಇಲ್ಲ. 

ಕಲ್ಲಣಬೆಯನ್ನು ಹುಡುಕಲು ಸಾಕಷ್ಟು ಸಮಯವು ಬೇಕಾಗುತ್ತದೆ. ಇನ್ನೂ ಕೆಲವರಿಗಷ್ಟೇ ಈ ಕಲ್ಲಣಬೆ ಸಿಗುತ್ತದೆ. ಈ ಕಲ್ಲಣಬೆಗೆ ಮಾರುಕಟ್ಟೆಯಲ್ಲಿ ಭಾರೀ ಭೇಡಿಕೆಯಿಟ್ಟಿರುತ್ತದೆ. ಒಂದು ಸೇರಿಗೆ ₹800ರಿಂದ ₹1.5 ಸಾವಿರದಷ್ಟು ಮಾರಾಟವಾಗುತ್ತದೆ. 

ಹಳ್ಳಿಗಾಡಿನ ಜನರು ಹೆಚ್ಚಾಗಿ ತಾವೇ ಹೋಗಿ ಕಲ್ಲಣವೆಯನ್ನು ಸಂಗ್ರಹಿಸುತ್ತಾರೆ. ಇನ್ನೂ ಕೆಲವರು ಮಾರಾಟ ಮಾಡಲೆಂದೆ ಕಲ್ಲಣಬೆಯನ್ನು ಸಂಗ್ರಹಿಸಿ, ಮಾರುಕಟ್ಟೆಗೆ ಮಾರಾಟ ಮಾಡುತ್ತಾರೆ. 


<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕನನ್ನು ಕೆಲಸದಿಂದ ಕಿತ್ತು ಹಾಕಿದ ಆರ್ ವಿ ಕಾಲೇಜು

Mangaluru Rain: ತಗ್ಗು ಪ್ರದೇಶಗಳು ಜಲಾವೃತ, ರಸ್ತೆಯಲ್ಲಿ ನಡೆಯಲು ಪರದಾಡಿದ ಜನರು, Video

ಏರ್‌ ಇಂಡಿಯಾ ವಿಮಾನ ದುರಂತ: ಕೊನೆಯ ಕ್ಷಣದ ವಿಡಿಯೋ ಮಾಡಿದ ಬಾಲಕನೇ ಪ್ರಮುಖ ಸಾಕ್ಷಿ

ಏರ್‌ ಇಂಡಿಯಾ ವಿಮಾನ ದುರಂತ: ಕೇಂದ್ರದಿಂದ ಪರಿಹಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಪದ್ಮಶ್ರೀ ಸತ್ಯನಾರಾಯಣ ಬೇಲೇರಿಯ ಕೃಷಿ ಸಾಧನೆ ಕೇರಳ ಪಠ್ಯ ಪುಸ್ತಕದಲ್ಲಿ

ಮುಂದಿನ ಸುದ್ದಿ
Show comments